ಗೃಹಲಕ್ಷ್ಮೀ ಯೋಜನೆಯ 2ನೇ ಕಂತಿನ ಹಣ ಖಾತೆಗೆ ಜಮೆ ಆಗಿಲ್ವಾ ? ಚಿಂತ ಬಿಡಿ, ಸರಕಾರದಿಂದಲೇ ಸಿಕ್ಕಿದೆ ಗುಡ್‌ನ್ಯೂಸ್‌

ತೀ ಮನೆಯ ಯಜಮಾನಿಗೆ ಪ್ರತೀ ತಿಂಗಳು 20000 ರೂಪಾಯಿ ಹಣವನ್ನು ಜಮೆ ಮಾಡಲಾಗುತ್ತಿದೆ. ಅಗಸ್ಟ್‌ ತಿಂಗಳಿನಿಂದಲೇ ಕರ್ನಾಟಕ ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆ ಜಾರಿಗೆ ಬಂದಿದೆ. ಅಲ್ಲದೇ ಬಹುತೇಕರಿಗೆ ಸಪ್ಟೆಂಬರ್‌ ತಿಂಗಳಿನಲ್ಲಿ ಗೃಹಿಣಿಯರ ಬ್ಯಾಂಕ್‌ ಖಾತೆಗೆ ಹಣ ನೇರವಾಗಿ ವರ್ಗಾವಣೆ ಆಗಿದೆ.

ಗೃಹಲಕ್ಷ್ಮೀ ಯೋಜನೆಯ (Gurha Lakshmi Yojana) ಎರಡನೇ ಕಂತಿನ ಹಣ ಸದ್ಯ ಬಹುತೇಕ ಮಹಿಳೆಯ ಬ್ಯಾಂಕ್  ಖಾತೆಗೆ‌ ನೇರ ವರ್ಗಾವಣೆ (DBT) ಜಮೆ ಆಗುತ್ತಿದೆ. ಆದರೆ ಕೆಲವರಿಗೆ ಎರಡನೇ ಕಂತಿನ ಹಣ ಇನ್ನೂ ಸಿಕ್ಕಿಲ್ಲ. ಇಂತಹ ಮಹಿಳೆಯರು ಚಿಂತೆ ಮಾಡುವ ಅಗತ್ಯವಿಲ್ಲ. ಯಾಕೆಂದ್ರೆ ಖುದ್ದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar) ಅವರೇ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆಯ ಮೂಲಕ ಪ್ರತೀ ಮನೆಯ ಯಜಮಾನಿಗೆ ಪ್ರತೀ ತಿಂಗಳು 20000 ರೂಪಾಯಿ ಹಣವನ್ನು ಜಮೆ ಮಾಡಲಾಗುತ್ತಿದೆ. ಅಗಸ್ಟ್‌ ತಿಂಗಳಿನಿಂದಲೇ ಕರ್ನಾಟಕ ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆ ಜಾರಿಗೆ ಬಂದಿದೆ. ಅಲ್ಲದೇ ಬಹುತೇಕರಿಗೆ ಸಪ್ಟೆಂಬರ್‌ ತಿಂಗಳಿನಲ್ಲಿ ಗೃಹಿಣಿಯರ ಬ್ಯಾಂಕ್‌ ಖಾತೆಗೆ ಹಣ ನೇರವಾಗಿ ವರ್ಗಾವಣೆ ಆಗಿದೆ.

Gruha Lakshmi Yojana 2nd installment not credited to your account Karnataka government has given good news
Image Credit to Original Source

ಇದೀಗ ಎರಡನೇ ಕಂತಿನ ಹಣವನ್ನು ಅಕ್ಟೋಬರ್‌ 17 ರಿಂದಲೇ ಗೃಹಿಣಿಯರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ. ಆದರೆ ಕೆಲವರಿಗೆ ಇನ್ನೂ ಎರಡನೇ ಕಂತಿನ ಹಣ ವರ್ಗಾವಣೆ ಆಗಿಲ್ಲ. ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಗೃಹಲಕ್ಷ್ಮೀ ಯೋಜನೆಯ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ : ದೇವರಿಗೂ ಫ್ರೀ ವಿದ್ಯುತ್ : ರಾಜ್ಯ ಸರ್ಕಾರದ ಹೊಸ ಗ್ಯಾರಂಟಿ

ಗೃಹಲಕ್ಷ್ಮೀ ಯೋಜನೆಯ ಹಣ ತಲುಪಿಲ್ಲ ಅನ್ನೋ ಗೊಂದಲ, ಚಿಂತೆ ಬೇಡ. ತಡವಾಗಿ ಆದ್ರೂ ಎಲ್ಲಾ ಫಲಾನುಭವಿಗಳ ಖಾತೆಗೆ ಹಣವು ನೇರವಾಗಿ ವರ್ಗಾವಣೆ ಆಗಲಿದೆ. ಆದರೆ ನಿಮ್ಮ ಖಾತೆಯಲ್ಲಿ ಏನಾದ್ರೂ ಸಮಸ್ಯೆ ಇದೆಯಾ ಅನ್ನೋ ಬಗ್ಗೆ ಒಮ್ಮೆ ಪರಿಶೀಲಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಇನ್ನು ಮಹಿಳೆಯರು ತಮ್ಮ ಬ್ಯಾಂಕ್‌ ಖಾತೆ ಇರುವ ಬ್ಯಾಂಕ್‌ಗಳಿಗೆ ತೆರಳಿ ವಿಚಾರಿಸಿಕೊಳ್ಳುವುದು ಉತ್ತಮ. ಸದ್ಯ ಒಂದೊಂದೆ ಜಿಲ್ಲೆಗಳಿಗೆ ಹಣ ವರ್ಗಾವಣೆ ವರ್ಗಾವಣೆಯನ್ನು ಮಾಡುತ್ತಿದೆ. ಹಣವನ್ನು ವರ್ಗಾವಣೆ ಮಾಡುವ ಕುರಿತು ಆರ್‌ಬಿಐ ವ್ಯವಹಾರದ ಮಿತಿಯನ್ನು ಹೇರಿದೆ.ಹೀಗಾಗಿ ನಿತ್ಯವೂ ನಾಲ್ಕು ಲಕ್ಷ ಜನರಿಗೆ ಮಾತ್ರವೇ ವರ್ಗಾವಣೆ ಮಾಡಲು ಸಾಧ್ಯ.

ಇದನ್ನೂ ಓದಿ : 50000 ಕ್ಕಿಂತ ಅಧಿಕ ಹಣದ ವರ್ಗಾವಣೆಗೆ ಹೊಸ ರೂಲ್ಸ್‌ : ಆದೇಶ ಹೊರಡಿಸಿದ RBI

ಮೊದಲ ಹಾಗೂ ಎರಡನೇ ಕಂತಿನ ಹಣವೂ ಸಿಗದೇ ಇರುವ ಮಹಿಳೆಯರಿಗೆ ಒಟ್ಟಿಗೆ ಎರಡೂ ತಿಂಗಳ ಹಣ 4000 ರೂಪಾಯಿ ಜಮೆ ಆಗುವ ಸಾಧ್ಯತೆಯಿದೆ. ಆದರೆ ಯಾವುಕ್ಕೂ ಒಮ್ಮೆ ನಿಮ್ಮ ಬ್ಯಾಂಕ್‌ನ ಶಾಖೆಗೆ ಭೇಟಿ ನೀಡಿ ವಿಚಾರಿಸುವುದು ಉತ್ತಮ. ಎರಡೂ ತಿಂಗಳ ಹಣ ಬ್ಯಾಂಕ್‌ ಖಾತೆಗೆ ಜಮೆ ಆಗುವ ಕುರಿತು ಸಿಎಂ ಸಿದ್ದರಾಮಯ್ಯ ಅವರೇ ಈ ಹಿಂದೆ ತಿಳಿಸಿದ್ದರು.

Gruha Lakshmi Yojana 2nd installment not credited to your account Karnataka government has given good news
Image credit to Original Source

ಒಂದೊಮ್ಮೆ ನಿಮ್ಮ ರೇಷನ್‌ ಕಾರ್ಡ್‌ನಲ್ಲಿ ತಾಂತ್ರಿಕದೋಷವಿದ್ದರೆ, ಅಂತಹ ಕಾರ್ಡುದಾರರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ದೊರೆಯುತ್ತದೆ. ಆದರೆ ಪಡಿತರ ಚೀಟಿಯಲ್ಲಿ ಮನೆಯ ಯಜಮಾನನ ಹೆಸರು ಇರುವ ಸ್ಥಳದಲ್ಲಿ ಮನೆಯ ಯಜಮಾನಿ ಯ ಹೆಸರು ಇಲ್ಲದೇ ಇದ್ರೆ ಅಂತಹ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಯೋಜನೆಯ ಲಾಭ ಸಿಗುವುದಿಲ್ಲ.

ಇದನ್ನು ಓದಿ : ಗೂಗಲ್‌ನಲ್ಲಿ ಈ ವಿಚಾರ ಹುಡುಕಿದ್ರೆ ಖಾಲಿಯಾಗುತ್ತೆ ನಿಮ್ಮ ಬ್ಯಾಂಕ್‌ ಬ್ಯಾಲೆನ್ಸ್‌ !

ನಿಮ್ಮಲ್ಲಿನ ತಾಂತ್ರಿಕ ದೋಷದಿಂದಲೇ ಗೃಹಲಕ್ಷ್ಮೀ ಯೋಜನೆಯ ಹಣ ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾವಣೆ ಆಗಲಿಲ್ಲವೇ ಎಂದು ಖಚಿತ ಪಡಿಸಿಕೊಳ್ಳಿ. ಒಂದೊಮ್ಮೆ ರೇಷನ್‌ ಕಾರ್ಡ್‌ (Ration Card), ಬ್ಯಾಂಕ್‌ ಖಾತೆಯ ಲಿಂಕ್‌ ( Bank SB Account) ಹಾಗೂ ಆಧಾರ್‌ ಲಿಂಕಿಂಗ್‌ ( aadhaar Link)ಮಾಡದೇ ಇದ್ದರೂ ಕೂಡ ನಿಮ್ಮ ಖಾತೆಗೆ ಹಣ ಜಮೆ ಆಗುವುದಿಲ್ಲ. ಈ ಕುರಿತು ನೀವು ಖಚಿತ ಪಡಿಸಿಕೊಳ್ಳುವುದು ಉತ್ತಮ.

Gruha Lakshmi Yojana 2nd installment not credited to your account ? Karnataka government has given good news

Comments are closed.