ಗೃಹಸಾಲಗಳ ಮೇಲಿನ ಬಡ್ಡಿದರ ಇಳಿಕೆ ಸದ್ಯಕ್ಕೆ ಅಸಾಧ್ಯ : ಆರ್‌ಬಿಐ ಗವರ್ನರ್ ಎಚ್ಚರಿಕೆ

ನವದೆಹಲಿ : ಹೆಚ್ಚಿನ ಸಾಲಗಳ ಮೇಲಿನ ಬಡ್ಡಿದರಗಳು ಸದ್ಯಕ್ಕೆ ಇಳಿಯುವ ಯಾವುದೇ ಲಕ್ಷಣಗಳಿಲ್ಲ. ಈಗಾಗಲೇ ಭಾರತೀಯ ರಿಸರ್ವ್ ಬ್ಯಾಂಕ್ (RBI) ಗೃಹ ಸಾಲ, ಕಾರು ಸಾಲ ಮತ್ತು ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿದರಗಳು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಬಹುದು ಎಂದು ಮುನ್ಸೂಚನೆ (RBI Governor’s statement) ನೀಡಿದೆ. ರಷ್ಯಾ- ಉಕ್ರೇನ್ ಸಂಘರ್ಷ ಮುಂದುವರಿದರೆ ಬಡ್ಡಿ ದರಗಳು ದೀರ್ಘ ಕಾಲದವರೆಗೆ ಹೆಚ್ಚಿನ ಮಟ್ಟದಲ್ಲಿಯೇ ಉಳಿಯಬಹುದು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಅದೇ ಸಮಯದಲ್ಲಿ ಪೂರೈಕೆ ಸರಪಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸುಧಾರಿಸಬಹುದು. ಇದು ಹಣದುಬ್ಬರವನ್ನು ಕಡಿಮೆ ಮಾಡುತ್ತದೆ ಎಂದು ಶಕ್ತಿಕಾಂತ ದಾಸ್‌ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ಸಂದರ್ಶನವೊಂದರಲ್ಲಿ ಮಾತನಾಡಿದ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್, ‘ಫೆಬ್ರವರಿಯಲ್ಲಿ ನಡೆಯಲಿರುವ ಹಣಕಾಸು ನೀತಿ ಸಮಿತಿ ಸಭೆಯ (ಎಂಪಿಸಿ ಸಭೆ) ನಿರ್ಧಾರಗಳ ಮುನ್ಸೂಚನೆ ನೀಡುತ್ತಿಲ್ಲ ಎಂದು ಹೇಳಿದ್ದಾರೆ. ಆದರೆ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಈಗಿರುವಂತೆಯೇ ಉಳಿದಿದ್ದರೆ, ಬಡ್ಡಿದರಗಳು ದೀರ್ಘಕಾಲದವರೆಗೆ ಉನ್ನತ ಮಟ್ಟದಲ್ಲಿಯೇ ಇರಲಿವೆ ಎಂದು ಹೇಳಿದ್ದಾರೆ. ಇದು ಅಮೆರಿಕದಲ್ಲಿ ಮಾತ್ರವಲ್ಲದೆ ಇಡೀ ಪ್ರಪಂಚದಲ್ಲಿ ಕೂಡ ಬಡ್ಡಿದರಗಳು ಏರಿಕೆ ಆಗಬಹುದು” ಎಂದು ತಿಳಿಸಿದ್ದಾರೆ.

ಹಣದುಬ್ಬರ ಕಡಿಮೆಯಾಗುವ ಸಾಧ್ಯತೆ ಇದೆ :
ಶಕ್ತಿಕಾಂತ ದಾಸ್‌ ಅವರು ಕೆಲವು ಭರವಸೆಯ ಮಾತುಗಳನ್ನಾಡಿದ್ದಾರೆ. ನಿರಂತರ ಭೌಗೋಳಿಕ ರಾಜಕೀಯ ಒತ್ತಡದ ಹೊರತಾಗಿಯೂ, ಈ ಹೊಸ ಪರಿಸ್ಥಿತಿಗೆ ಹೇಗೆ ಹೊಂದಿಕೊಳ್ಳಬೇಕೆಂದು ಮಾನವ ಸಮಾಜಕ್ಕೆ ತಿಳಿದಿದೆ. ಜಾಗತಿಕ ಪೂರೈಕೆ ಸರಪಳಿಯು ಈಗಾಗಲೇ ಸುಧಾರಿಸಿದೆ. ಪ್ರಪಂಚದ ಬಹುತೇಕ ದೇಶಗಳು ಹೊಸ ಪೂರೈಕೆ ಮೂಲಗಳ ಕಡೆಗೆ ನೋಡುತ್ತಿವೆ. ಇದು ಹಣದುಬ್ಬರವನ್ನು ಕಡಿಮೆ ಮಾಡಲಿದೆ ಎಂದು ಹೇಳಿದರು.

ಮಂದಗತಿಯಲ್ಲಿ ಆರ್ಥಿಕತೆ ಸುಧಾರಣೆ :
ಜಾಗತಿಕ ಆರ್ಥಿಕ ಕುಸಿತ ಈ ಮೊದಲು ಅಂದುಕೊಂಡಿದ್ದಕ್ಕಿಂತಲೂ ಸುಧಾರಿಸುತ್ತಿದೆ ಎಂದು ದಾಸ್ ಹೇಳಿದರು. ‘ಐರೋಪ್ಯ ಒಕ್ಕೂಟ ಮತ್ತು ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಉಂಟಾಗಲಿದೆ ಎಂದು ಆರು ತಿಂಗಳ ಹಿಂದೆ ಎಲ್ಲರೂ ಭಾವಿಸಿದ್ದರು. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ. ಆದರೆ ಬಡ್ಡಿದರಗಳು ದೀರ್ಘಕಾಲದವರೆಗೆ ಹೆಚ್ಚಿನ ಮಟ್ಟದಲ್ಲೇ ಉಳಿಯಲಿವೆ. ಈ ಎಲ್ಲ ಅನಿಶ್ಚಿತಗಳಿದ್ದು, ಎಲ್ಲಕ್ಕೂ ಸಿದ್ಧವಾಗಿರಬೇಕು ಎಂದು ಹೇಳಿದರು.

ಇದನ್ನೂ ಓದಿ : ಹಳೆಯ ಪಿಂಚಣಿ ಯೋಜನೆ ವಿಸ್ತರಣೆ : ಈ ಜನರಿಗೆ ಸಿಗುವ ಲಾಭವೆಷ್ಟು ಗೊತ್ತಾ ?

ಇದನ್ನೂ ಓದಿ : ಅಡಿಕೆ ಬೆಳೆಗಾರರಿಗೆ ಕಹಿ ಸುದ್ಧಿ : ಮಾರುಕಟ್ಟೆಯಲ್ಲಿ ಮತ್ತೆ ಇಳಿಕೆ ಕಂಡ ಅಡಿಕೆ ಬೆಲೆ

ದರ ಹೆಚ್ಚಿಸುವುದು ಅಗತ್ಯ :
ಆರ್‌ಬಿಐ ಗವರ್ನರ್ ಪ್ರಕಾರ, ಕಳೆದ ಬಾರಿಯ ಬಡ್ಡಿ ದರ ಏರಿಕೆಯಿಂದ ಹಣದುಬ್ಬರ ಇಳಿಕೆಯಾಗಲು ಏಳರಿಂದ ಎಂಟು ತಿಂಗಳು ಬೇಕಾಗಿದೆ “ಸುಗಮ ಆರ್ಥಿಕತೆಯ ಪರಿಸ್ಥಿತಿಯಲ್ಲಿ ಲಿಕ್ವಿಡಿಟಿ ಹೆಚ್ಚಿರುತ್ತದೆ. ಆದರೆ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಇದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆರ್‌ಬಿಐನಲ್ಲಿ ನಮ್ಮ ಸಂಶೋಧನೆಯು ಪರಿಣಾಮ ಬೀರಲು ನಾಲ್ಕು ತ್ರೈಮಾಸಿಕ ತೆಗೆದುಕೊಳ್ಳುತ್ತದೆ ಎಂದು ತೀರ್ಮಾನಿಸಿದೆ. ಬೆಲೆ ಏರಿಕೆಯಾದಾಗ ಹಣದುಬ್ಬರವನ್ನು ನಿಯಂತ್ರಿಸಲು ಆರ್‌ಬಿಐ ಬಡ್ಡಿದರಗಳನ್ನು ಹೆಚ್ಚಿಸಬೇಕು ಎಂದು ಅವರು ಒತ್ತಿ ಹೇಳಿದರು. ಏಕೆಂದರೆ ಭಾರತೀಯ ರಿಸರ್ವ್ ಬ್ಯಾಂಕ್ (RBI)ನ ಹೆಚ್ಚಿನ ಹಣದುಬ್ಬರವನ್ನು ಸಹಿಸಿಕೊಳ್ಳುತ್ತದೆ ಎಂದು ಭಾವಿಸಿ, ವ್ಯಾಪಾರಿಗಳು ಸರಕುಗಳ ಬೆಲೆ ಮತ್ತಷ್ಟು ಹೆಚ್ಚಿಸುತ್ತಾರೆ. ಹೀಗಾಗಿ ಹಣದುಬ್ಬರದ ಸಮಯದಲ್ಲಿ ಆರ್‌ಬಿಐ ಬಡ್ಡಿದರ ಏರಿಸಬೇಕಾಗುತ್ತದೆ ಎಂದು ಹೇಳಿದರು.

RBI Governor’s statement : Interest rate reduction on home loans is impossible for now : RBI Governor’s warning

Comments are closed.