Anirudh Controversy: ಬ್ಯಾನ್ ತೂಗುಗತ್ತಿಯಿಂದ ‘ಸೂರ್ಯವಂಶ’ ಪಾರು; ಮುನಿಸು ಮರೆತು ಒಂದಾದ ಅನಿರುದ್ಧ್- ಆರೂರು

ಬೆಂಗಳೂರು: Anirudh Controversy: ಜೊತೆಜೊತೆಯಲಿ ಧಾರಾವಾಹಿ ಖ್ಯಾತಿಯ ನಟ ಅನಿರುದ್ಧ್ ಹಾಗೂ ನಿರ್ಮಾಪಕರ ಸಂಘದ ನಡುವಿನ ಹಗ್ಗಜಗ್ಗಾಟ ಕೊನೆಗೂ ಅಂತ್ಯಕಂಡಿದೆ. ಜೊತೆ ಜೊತೆಯಲಿ ಧಾರಾವಾಹಿ ವಿವಾದಕ್ಕೂ ಇಂದು ತೆರೆ ಬಿದ್ದಿದ್ದು, ಬ್ಯಾನ್ ತೂಗುಗತ್ತಿಯಿಂದ ಪಾರಾಗಿರುವ ನಟ ಅನಿರುದ್ಧ್ ಸೂರ್ಯವಂಶ ಧಾರಾವಾಹಿಯಲ್ಲಿ ಯಾವುದೇ ಅಡ್ಡಿ ಇಲ್ಲದೇ ಮುಂದುವರಿಯಲಿದ್ದಾರೆ.

ಜೀ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ ಜೊತೆಜೊತೆಯಲಿ ಧಾರಾವಾಹಿ ಬಹಳಷ್ಟು ಹೆಸರು ಪಡೆದಿತ್ತು. ಇತ್ತೀಚೆಗೆ ನಟ ಅನಿರುದ್ಧ್ ಹಾಗೂ ನಿರ್ದೇಶಕ ನಡುವೆ ಮನಸ್ತಾಪಗಳು ಉಂಟಾಗಿ ಅನಿರುದ್ಧ್ ಅವರನ್ನು ಧಾರಾವಾಹಿಯಿಂದ ತೆಗೆದುಹಾಕಲಾಗಿತ್ತು. ಅಲ್ಲದೇ 2 ವರ್ಷಗಳ ಕಾಲ ಕಿರುತೆರೆಯಿಂದ ಬ್ಯಾನ್ ಮಾಡುವಂತೆ ಆಗ್ರಹ ಕೇಳಿಬಂದಿತ್ತು. ಈ ನಡುವೆ ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಅವರು ಅನಿರುದ್ಧ್ ಅವರನ್ನು ಸೂರ್ಯವಂಶ ಧಾರಾವಾಹಿಗೆ ನಾಯಕ ನಟನಾಗಿ ಆಯ್ಕೆ ಮಾಡಿದ್ದರು. ಈ ಬೆನ್ನಲ್ಲೇ ತಣ್ಣಗಾಗಿದ್ದ ವಿವಾದಕ್ಕೆ ಮತ್ತೆ ಜೀವಬಂದಿತ್ತು. ಇದರಿಂದ ಬೇಸತ್ತ ಅನಿರುದ್ಧ್ ನಿನ್ನೆ ಫಿಲ್ಮ್ ಚೇಂಬರ್ ಮೊರೆ ಹೋಗಿದ್ದರು. ಅಲ್ಲದೇ ಸುದ್ದಿಗೋಷ್ಠಿ ನಡೆಸಿ ಅಸಮಾಧಾನ ಹೊರಹಾಕಿದ್ದರು. ಆದರೆ ಇಂದು ಜೊತೆಜೊತೆಯಲಿ ವಿವಾದ ಹಾಗೂ ಬ್ಯಾನ್ ವಿಚಾರದಿಂದ ಅನಿರುದ್ಧ್ ಪಾರಾಗಿದ್ದಾರೆ.

ಇದನ್ನೂ ಓದಿ: Anurag Kashyap: ಕಾಂತಾರ ಸಿನಿಮಾ ಸಕ್ಸಸ್ ಆಯ್ತು ಅಂತ ರಿಷಬ್ ಶೆಟ್ಟಿ ‘ಆ’ ತಪ್ಪನ್ನು ಮಾಡಬಾರದು; ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ವಾರ್ನಿಂಗ್

ನಟ ಅನಿರುದ್ಧ್ ಅವರ ಬ್ಯಾನ್ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ಮಹತ್ವದ ಸಭೆ ನಡೆಸಲಾಗಿತ್ತು. ಕಿರುತೆರೆ ನಿರ್ಮಾಪಕರು ಹಾಗೂ ಟೆಲಿವಿಷನ್ ಅಸೋಸಿಯೇಷನ್ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಚರ್ಚೆಗಳು ನಡೆದು ಅನಿರುದ್ಧ್ ಅವರ ಬ್ಯಾನ್ ವಿಚಾರದಿಂದ ಹಿಂದೆ ಸರಿಯಲು ನಿರ್ಧಾರ ಕೈಗೊಳ್ಳಲಾಗಿದೆ.

ಸಭೆ ಬಳಿಕ ಮಾತನಾಡಿದ ಹಿರಿಯ ನಿರ್ದೇಶಕ ಪಿ. ಶೇಷಾದ್ರಿ ಅನಿರುದ್ಧ್ ಅವರ ವಿವಾದಗಳು ಇತ್ಯರ್ಥವಾಗಿದೆ. ಬ್ಯಾನ್ ನಿರ್ಧಾರ ಕೈಬಿಡಲಾಗಿದ್ದು, ಸೂರ್ಯವಂಶ ಧಾರಾವಾಹಿಯಲ್ಲಿ ಅವರು ನಟಿಸುತ್ತಾರೆ ಎಂದರು. ಈ ನಡುವೆ ಜೊತೆ ಜೊತೆಯಲಿ ಧಾರಾವಾಹಿ ನಿರ್ದೇಶಕ ಆರೂರು ಜಗದೀಶ್ ಮತ್ತು ಅನಿರುದ್ಧ್ ಮನಸ್ತಾಪ ಮರೆತು ಒಂದಾದ್ರು.

ಅನಿರುದ್ಧ್ ಮಾತನಾಡಿ, ಕುಟುಂಬದಲ್ಲಿ ಅಸಮಾಧಾನಗಳು ಬರುವುದು ಸಹಜ. ವಿವಾದಗಳು ಬಗೆಹರಿದಿವೆ. ಆರೂರು ಜಗದೀಶ್ ಅವರಿಗೆ ಒಳ್ಳೆಯದಾಗಲಿ, ನನ್ನ ಬೆಂಬಲಕ್ಕೆ ನಿಂತ ಅಭಿಮಾನಿಗಳಿಗೆ ಧನ್ಯವಾದಗಳು ಎಂದರು.

ಆರೂರು ಜಗದೀಶ್ ಮಾತನಾಡಿ, ಶಿಸ್ತನ್ನು ಕಲಿಸಬೇಕು ಎಂಬ ಉದ್ದೇಶದಿಂದ ಈ ರೀತಿ ಮಾಡಿದ್ದೆವು. ಅನಿರುದ್ಧ್ ಅವರಿಗೆ ಒಳ್ಳೆಯದಾಗಲಿ ಎಂದು ಶುಭಹಾರೈಸಿದರು. ಈ ಮೂಲಕ ಕಳೆದ 4 ತಿಂಗಳಿನಿಂದ ನಡೆಯುತ್ತಿದ್ದ ವಿವಾದಗಳು ಇಂದು ಸುಖಾಂತ್ಯ ಕಂಡಿವೆ.

ಇದನ್ನೂ ಓದಿ: Sulochana Chavan Passes Away:ಲಾವಣಿಗಳ ಖ್ಯಾತಿ ಪಡೆದ ಗಾಯಕಿ ಸುಲೋಚನಾ ಚವಾಣ್ ನೆನಪು ಮಾತ್ರ

Anirudh Controversy: producers decided not to ban actor Anirudh and Aarooru jagadeesh reunited after meeting

Comments are closed.