ದಶಕಗಳಿಂದ ಸ್ಯಾಂಡಲ್ ವುಡ್ ನಲ್ಲಿ ಮೋಡಿ ಮಾಡ್ತಿರೋ ಜಾದೂಗಾರನಂತಹ ಸಂಗೀತನಿರ್ದೇಶಕ ಅರ್ಜುನ್ ಜನ್ಯ. ಯಾವ ಅದ್ದೂರಿ ಚಿತ್ರ ಸೆಟ್ಟೇರಿದ್ರೂ ಕೇಳಿ ಬರೋದು ಅರ್ಜುನ್ ಜನ್ಯ. ಅಂತಹ ಫೇಮಸ್ ಸಂಗೀತ ನಿರ್ದೇಶಕ ಜನ್ಯ ಈಗ ಮತ್ತೊಂದು ಸಾಹಸಕ್ಕೆ ಮುನ್ನುಡಿ ಬರೆದಿದ್ದಾರೆ. ಹೌದು ಸಂಗೀತ ನಿರ್ದೇಶನದ ಜೊತೆಗೆ ಜನ್ಯ ಡೈರೈಕ್ಟರ್ ಕ್ಯಾಪ್ (Arjun Janya direction ) ಧರಿಸೋಕೆ ಸಿದ್ಧವಾಗಿದ್ದಾರೆ. ಇಷ್ಟಕ್ಕೂ ಜನ್ಯ ಆಕ್ಷ್ಯನ್ ಕಟ್ ಹೇಳೋದು ಯಾವ ಸಿನಿಮಾಗೆ? ನಾಯಕ ಯಾರು ಅನ್ನೋ ಕುತೂಹಲ ನಿಮಗಿದ್ದರೇ ಈ ಸ್ಟೋರಿ ಓದಿ.
ದಶಕಕದಿಂದಲೂ ಸಿನಿಮಾ ಸಂಗೀತದಲ್ಲಿ ತೊಡಗಿಸಿಕೊಂಡು ಒಂದಾದ ಮೇಲೊಂದರಂತೆ ಹಿಟ್ ಸಿನಿಮಾ ಕೊಟ್ಟಿರೋ ಅರ್ಜುನ್ ಜನ್ಯ ಈಗ ವೈಟ್ ಕ್ಯಾಪ್ ತೊಟ್ಟು, ಆಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ. ಇಷ್ಟಕ್ಕೂ ಜನ್ಯ ನಿರ್ದೇಶನಕ್ಕೆ ಮುಂದಾಗಿರೋದು ಸ್ಯಾಂಡಲ್ವುಡ್ ಮಂದಿಯ ಪ್ರೀತಿಯ ಅಣ್ಣ, ಸೆಂಚುರಿಸ್ಟಾರ್ ಶಿವಣ್ಣನಿಗೆ ಅನ್ನೋದು ಇನ್ನೊಂದು ವಿಶೇಷ. ಶಿವಣ್ಣನಿಗಾಗಿಯೇ ಅರ್ಜುಜ್ ಜನ್ಯ ಕಥೆಯೊಂದನ್ನು ಸಿದ್ಧಪಡಿಸಿದ್ದು, ಅದು ಸ್ವತಃ ಶಿವಣ್ಣನಿಗೆ ಸಖತ್ ಇಷ್ಟವಾಗಿದೆಯಂತೆ. ಈಗಾಗ್ಲೇ ಚಿತ್ರದ ಸ್ಕ್ರಿಪ್ಟ್ ವರ್ಕ್ ನಡಿತಿದ್ದು ಶಿವಣ್ಣ ಕೂಡ ಕಥೆ ಕೇಳಿ ಖುಷಿಯಾಗಿದ್ದಾರಂತೆ.
ಇನ್ನು ಈ ಚಿತ್ರವನ್ನು ಸ್ಯಾಂಡಲ್ವುಡ್ನ ಖ್ಯಾತ ನಿರ್ಮಾಪಕ ರಮೇಶ್ ರೆಡ್ಡಿ ನಿರ್ಮಾಣ ಮಾಡಲಿದ್ದು, ಅದಕ್ಕಾಗಿ ಮಾತುಕತೆ ಕೂಡ ನಡೆದಿದೆಯಂತೆ. ಈಗಾಗಲೇ ರಮೇಶ್ ರೆಡ್ಡಿ ಉಪ್ಪು ಹುಳಿ ಖಾರ, ೧೦೦, ಗಾಳಿಪಟ-2 ಚಿತ್ರಗಳನ್ನ ನಿರ್ಮಿಸಿದ ಅನುಭವ ಹೊಂದಿದ್ದಾರೆ. ಮಾತ್ರವಲ್ಲ ರಮೇಶ್ರೆಡ್ಡಿ ಜನ್ಯ ನಿರ್ದೇಶಿಸೋ ಈ ಚಿತ್ರವನ್ನೂ ಅಷ್ಟೇ ಅದ್ದೂರಿಯಾಗಿ ನಿರ್ಮಾಣ ಮಾಡೋ ಯೋಚನೆಯಲ್ಲಿದ್ದಾರಂತೆ. ಸದ್ಯ ಈ ಚಿತ್ರದ ಕೆಲಸ ಶುರುವಾಗಿದ್ದು, ಈ ವರ್ಷದ ಅಂತ್ಯದೊಳಗೆ ಪ್ರೀ ಪ್ರೊಡಕ್ಷನ್ ವರ್ಕ್ ಕಂಪ್ಲೀಟ್ ಆಗಲಿದ್ದು, ಪ್ರೀ ಪ್ರೊಡಕ್ಷನ್ ಕೆಲಸ ಮುಗಿದ ಮೇಲೆ ಈ ಸಿನಿಮಾ ಸೆಟ್ಟೇರೋ ಸಾಧ್ಯತೆ ಇದೆ..
ಅದೇನೆ ಇರಲಿ ಸ್ಯಾಂಡಲ್ವುಡ್ನ ಗ್ರೇಟ್ ಮ್ಯೂಸಿಕ್ ಡೈರೆಕ್ಟರ್ ಅಂತಲೇ ಕರೆಸಿಕೊಳ್ಳೊ ಹರಿಕೃಷ್ಣ ಕೂಡ ಈಗಾಗಲೇ ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿದ್ದಾರೆ.. ಇದೀಗ ಅರ್ಜುನ್ ಜನ್ಯ ಕೂಡ ಅದೇ ದಾರಿಯಲ್ಲಿ ಹೋಗ್ತಿದ್ದು, ಅವರಿಗೆ ಶಿವಣ್ಣ ಸಾಥ್ ಕೊಟ್ಟಿರೋದು ಇಲ್ಲಿನ ಮತ್ತೊಂದು ಪ್ಲಸ್ ಪಾಯಿಂಟ್. ಜನ್ಯ ಸಂಗೀತವನ್ನು ಮೆಚ್ಚಿಕೊಂಡ ಅಭಿಮಾನಿಗಳಿಗೆ ಜನ್ಯ ನಿರ್ದೇಶನವೂ ಇಷ್ಟವಾಗಬಹುದೆಂದು ನೀರಿಕ್ಷಿಸಲಾಗ್ತಿದ್ದು, ಸದ್ಯ ಸಂಗೀತ ನಿರ್ದೇಶಕ ಜನ್ಯ ಡೈರೈಕ್ಟರ್ ಆಗ್ತಿರೋ ಸುದ್ದಿ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿದೆ.
ಇದನ್ನೂ ಓದಿ : ನಗುವಿನ ಹೂಗಳ ಮೇಲೆ ಚಿತ್ರದ ಫಸ್ಟ್ ಲುಕ್ ರಿಲೀಸ್ : ಅಭಿಷೇಕ್ ಗೆ ಜೋಡಿಯಾಗಿ ಮಿಂಚಿದ ಶರಣ್ಯಾ
ಇದನ್ನೂ ಓದಿ : Meghana Raj : ಅಮ್ಮಾ ಅನ್ನೋ ಮೇಘನಾಗೆ ಅಪ್ಪಾ ಎಂದ ಮಗ : ವೈರಲ್ ವಿಡಿಯೋ ಕಣ್ಣಿರಿಟ್ಟ ಅಭಿಮಾನಿಗಳು
Arjun Janya direction Shiva Rajkumar Acting Movie