ಸಹಾಯಕ ನಿರ್ದೇಶಕ, ಸಹ ನಿರ್ದೇಶಕ, ಸಂಕಲನ ಸಹಾಯಕ, ಬರಹಗಾರ ಹಾಗೂ ಸಂಭಾಷಣೆಗಾರರಾಗಿ ಚಿತ್ರರಂಗದಲ್ಲಿ ಕೆಲಸ ಮಾಡಿದ್ದ ಎ.ಆರ್.ಸಾಯಿರಾಮ್ ಈಗ ಪೂರ್ಣ ಪ್ರಮಾಣದಲ್ಲಿ ನಿರ್ದೇಶಕರಾಗಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಕಳೆದೊಂದು ದಶಕದಲ್ಲಿ ಸುಮಾರು 15 ಚಿತ್ರಗಳಿಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಏಳುಬೀಳುಗಳನ್ನು ಕಂಡು ಕಠಿಣ ಪರಿಶ್ರಮದಿಂದ ಇಂದು ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನ ಬಡ್ತಿ ಹೊಂದಿದ್ದಾರೆ.

ಇದೀಗ ತನ್ನ ಚೊಚ್ಚಲ ನಿರ್ದೇಶನ “ಅಶ್ವ” ಚಿತ್ರದ ಮೂಲಕ , ಪರಿಣಿತರ ತಂತ್ರಜ್ಞರ ತಂಡದ ಜೊತೆಗೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಈಗಾಲೇ ಲಾಂಚ್ ಆಗಿದ್ದು, ಉದಯೋನ್ಮುಖ ನಟ ಹೊಸ ಪ್ರತಿಭೆ “ವಿವಾನ್ ಕೆ ಕೆ” ಅಶ್ವ” ಚಿತ್ರದ ನಾಯಕ ಹಾಗೂ ಪ್ರಮುಖ ಪಾತ್ರದಲ್ಲಿ ನಾಗೇಂದ್ರ ಅರಸ್, ಬಲರಾಜ್ವಾಡಿ, ಪವನ್ ಕುಮಾರ್(ಪಚ್ಚಿ), ,ಯಶ್ ಶೆಟ್ಟಿ ನಂದಗೋಪಾಲ್, ಸೂರಿ ಹಾಗೂ ಮತ್ತಿತರ ತಾರಾಬಳವಿದೆ.

ಚಿತ್ರದ ನಾಯಕಿಯರಾಗಿ ಸಾರಿಕಾ ಮತ್ತು ಸಾಗರಿಕ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾಕ್ಕೆ ಬಿ.ಅಜನೀಶ್ ಲೋಕನಾಥ್ ರವರ ಸಂಗೀತ ಕಾಮಲ್ ಮಾಡಲಿದ್ದು, ಛಾಯಾಗ್ರಾಹಕ ವಿಕುಮಾರ್ ಸನ ಅವರು ಕ್ಯಾಮರಾ ವರ್ಕ್ ಮಾಡುತ್ತಿದ್ದಾರೆ.

ಶ್ರೀಕಾಂತ ಗೌಡ ಸಂಕಲನ, ನೃತ್ಯ ಧನಂಜಯ್, ಸಾಹಸ ಕುನ್ಫ್ಯೂ ಚಂದ್ರು ಹಾಗೂ ತುಳಸಿ ರಾಮ್ ರಾಜ್ ಪ್ರಚಾರ ವಿನ್ಯಾಸಕರಾಗಿ ಕೆಲಸ ಮಾಡಿದ್ದಾರೆ.