ಮಂಗಳವಾರ, ಏಪ್ರಿಲ್ 29, 2025
HomeCinemaಮೇಘನಾ ರಾಜ್ ಸರ್ಜಾ ಆಸ್ಪತ್ರೆಗೆ ಭೇಟಿ : ಶೂಟಿಂಗ್ ಬಿಟ್ಟು ಓಡೋಡಿ ಬಂದ ಧ್ರುವ ಸರ್ಜಾ

ಮೇಘನಾ ರಾಜ್ ಸರ್ಜಾ ಆಸ್ಪತ್ರೆಗೆ ಭೇಟಿ : ಶೂಟಿಂಗ್ ಬಿಟ್ಟು ಓಡೋಡಿ ಬಂದ ಧ್ರುವ ಸರ್ಜಾ

- Advertisement -

ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್ ತುಂಬು ಗರ್ಭಿಣಿ. ಮೇಘನಾ ಇಂದು ಬೆಳಗ್ಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅತ್ತಿಗೆ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಧ್ರುವ ಸರ್ಜಾ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದ ಧ್ರುವ ಶೂಟಿಂಗ್ ಅರ್ಧದಲ್ಲಿಯೇ ನಿಲ್ಲಿಸಿ ಆಸ್ಪತ್ರೆಗೆ ಓಡೋಡಿ ಬಂದಿದ್ದಾರೆ.

ಒಂಬತ್ತು ತಿಂಗಳ ತುಂಬು ಗರ್ಭಿಣಿಯಾಗಿರುವ ಮೇಘನಾ ರಾಜ್ ಅವರಿಂದು ಬೆಂಗಳೂರಿ ಕೆ.ಆರ್.ರಸ್ತೆಯಲ್ಲಿರುವ ಅಕ್ಷ ಆಸ್ಪತ್ರೆಗೆ ಭೇಟಿಕೊಟ್ಟಿದ್ದಾರೆ. ವೈದ್ಯರು ಡೆಲಿವರಿ ಡೇಟ್ ಕೊಟ್ಟ ಹಿನ್ನೆಲೆಯಲ್ಲಿಯೇ ಆಸ್ಪತ್ರೆಗೆ ಬಂದಿದ್ದಾರೆ ಎನ್ನಲಾಗುತ್ತಿದೆ.

ಬೆಳಗ್ಗೆ ಮೇಘನಾ ರಾಜ್ ತಂದೆ ಸುಂದರ್ ರಾಜ್ ಸ್ವತಃ ಕಾರನ್ನು ಡ್ರೈವ್ ಮಾಡಿಕೊಂಡು ಮಗಳನ್ನು ಆಸ್ಪತ್ರೆಗೆ ಕರೆತಂದಿದ್ದಾರೆ. ಮಗಳ ಜೊತೆಗೆ ತಾಯಿ ಪ್ರಮೀಳಾ ಜೋಷಾಯ್ ಕೂಡ ತೆರಳಿದ್ದರು. ಅತ್ತಿಗೆ ಆಸ್ಪತ್ರೆಗೆ ಬಂದಿರುವ ವಿಷಯ ತಿಳಿಯುತ್ತಿದ್ದಂತೆಯೇ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದ ಧ್ರುವ ಸರ್ಜಾ ಪತ್ನಿ ಪ್ರೇರಣಾ ಜೊತೆಗೆ ಆಸ್ಪತ್ರೆಗೆ ಓಡೋಡಿ ಬಂದಿದ್ದಾರೆ.

ಇದನ್ನು ಓದಿ : ಚಿರು ಬರ್ತಡೇಯಲ್ಲಿ ಜ್ಯೂನಿಯರ್ ಗೆ ವೆಲ್ಕಂ ಸಾಂಗ್ ಹಾಡಿದ ಸರ್ಜಾ ಕುಟುಂಬ…!

ಆರಂಭದಿಂದಲೂ ಮೇಘನಾ ಸರ್ಜಾ ಅವರು ಅಕ್ಷ ಆಸ್ಪತ್ರೆಯಲ್ಲಿಯೇ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಇಷ್ಟು ಟೈಮ್ ಆಸ್ಪತ್ರೆಯಲ್ಲಿ ತಪಾಸಣೆಯನ್ನು ಮುಗಿಸಿ ವಾಪಾಸಾಗುತ್ತಿದ್ರು. ಇಂದೂ ಕೂಡ ಮಾಮೂಲಿ ಚೆಕ್ ಅಪ್ ಆಗಿದ್ದರೆ ಮೇಘನಾ ರಾಜ್ ಇಷ್ಟು ಹೊತ್ತಿಗೆ ವಾಪಾಸ್ ಹೊರಡಬೇಕಿತ್ತು. ಆದರೆ ಮೇಘನಾ ರಾಜ್ ಇನ್ನೂ ಆಸ್ಪತ್ರೆಯಲ್ಲಿಯೇ ಇದ್ದಾರೆ. ಹೀಗಾಗಿ ಇಂದೇ ಹೆರಿಗೆಯಾಗಬಹುದು ಎನ್ನಲಾಗುತ್ತಿದೆ.

ಇದನ್ನು ಓದಿ : ರೀಲ್ ನಲ್ಲಿ ಮಗು ಎತ್ತಿ ಮುದ್ದಾಡಿದ ಚಿರುಗೆ ರಿಯಲ್ ನಲ್ಲಿ ತಪ್ಪಿತು ಆ ಭಾಗ್ಯ…!! ಕಣ್ಣೀರು ತರಿಸುತ್ತೆ ವಿಡಿಯೋ

ಮೇಘನಾ ರಾಜ್ ತಂದೆ ತಾಯಿಯ ಜೊತೆಗೆ ಸರ್ಜಾ ಕುಟುಂಬದ ಸದಸ್ಯರು ಕೂಡ ಆಸ್ಪತ್ರೆಗೆ ತೆರಳಿದ್ದಾರೆ. ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಅವರ ತಾಯಿ ಅಮ್ಮಾಜಿ ಅವರೇ ಮೇಘನಾ ಅವರ ಜೊತೆ ಆಸ್ಪತ್ರೆಯಲ್ಲಿದ್ದಾರೆ. ಈ ಹಿಂದೆ ವೈದ್ಯರು ನವೆಂಬರ್ ತಿಂಗಳಲ್ಲಿ ಡೆಲಿವರಿ ಡೇಟ್ ಕೊಟ್ಟಿದ್ದರು. ಆದರೆ ಮಗುವಿನ ಬೆಳವಣಿಗೆ ಚೆನ್ನಾಗಿರೋದ್ರಿಂದಾಗಿ ಬೇಗನೆ ಹೆರಿಗೆಯಾಗಬಹುದು ಎಂದಿದ್ದರು.

ಇದನ್ನೂ ಓದಿ : ಚಿರು ಯಾವಾಗ ಭೂಮಿಗೆ ಬರಲು ಇಚ್ಚಿಸುತ್ತಾರೋ ಅವತ್ತು ಬರಲಿ….! ಮೇಘನಾ ಮನದಾಳ..!!

ಇದೇ ಕಾರಣದಿಂದಲೇ ಅಕ್ಟೋಬರ್ 17ರ ಚಿರು ಹುಟ್ಟು ಹಬ್ಬದ ದಿನವೇ ಮೇಘನಾ ರಾಜ್ ಅವರಿಗೆ ವೈದ್ಯರು ಡೆಲಿವರಿ ಡೇಟ್ ಕೊಟ್ಟಿದ್ದರು ಎನ್ನಲಾಗಿತ್ತು. ಆದರೆ ಮೇಘನಾ ಸರ್ಜಾ ಅವರ ಡೆಲಿವರಿ ಡೇಟ್ ಬಗ್ಗೆ ಕುಟುಂಬಸ್ಥರು ಗುಟ್ಟು ಬಿಟ್ಟುಕೊಟ್ಟಿಲ್ಲ.

ಮೇಘನಾ ಸರ್ಜಾ ಇದೀಗ ಆಸ್ಪತ್ರೆಗೆ ಭೇಟಿ ಕೊಟ್ಟಿರುವುದು ಅಭಿಮಾನಿಗಳಿಗೆ ಕುತೂಹಲ ಹೆಚ್ಚಿಸಿದೆ. ನವರಾತ್ರಿಯ ಕಾಲದಲ್ಲಿಯೇ ಜೂನಿಯರ್ ಚಿರು ಬರಲಿ ಅಂತಾನೂ ಲಕ್ಷಾಂತರ ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಆದರೆ ತಪಾಸಣೆ ನಡೆಸಿರುವ ವೈದ್ಯರು ಮೇಘನಾ ರಾಜ್ ಅವರನ್ನು ಮನೆಗೆ ಕಳುಹಿಸಿಕೊಟ್ಟಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular