Crazy Star Ravichandran : ಮನೆ ಖಾಲಿ ಮಾಡಿದ ಹಿಂದಿನ ಸತ್ಯ ಬಿಚ್ಚಿಟ್ಟ ಕ್ರೇಜಿಸ್ಟಾರ್ ರವಿಚಂದ್ರನ್‌

ಕನ್ನಡ ಚಿತ್ರರಂಗದಲ್ಲಿ ಪ್ರೇಮಲೋಕವನ್ನು ಸೃಷ್ಟಿಸಿದ ಖ್ಯಾತಿ ಕ್ರೇಜಿಸ್ಟಾರ್‌ ರವಿಚಂದ್ರನ್‌(Crazy Star Ravichandran)ಗೆ ಸಲ್ಲುತ್ತದೆ. ಕನ್ನಡ ಸಿನಿಮಾಲೋಕದಲ್ಲಿ ವಿಭಿನ್ನವಾದ ಪ್ರೇಮಕಥೆಯನ್ನು ಹಣೆಯುವ ಮೂಲಕ ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೆ ಏರಿಸಿದ್ದಾರೆ. ಮಗನ ಮದುವೆಯನ್ನೂ ಇತ್ತೀಚಿಗಷ್ಟೇ ಅದ್ದೂರಿಯಾಗಿ ನೆರವೇರಿಸಿರುವ ರವಿಚಂದ್ರನ್, ಕೆಲವೇ ದಿನಗಳಲ್ಲಿ ಮನೆಯನ್ನು ಖಾಲಿ ಮಾಡಿದ್ದಾರೆ. ಈ ಕುರಿತು ಸಾಕಷ್ಟು ಊಹಾಪೋಹಗಳು ಹರಿದಾಡಿದ್ದವು. ಆದ್ರೆ ಈ ಕುರಿತು ಖುದ್ದು ರವಿಚಂದ್ರನ್ ಅವರೇ ಸ್ಪಷ್ಟನೆಯನ್ನು ನೀಡಿದ್ದಾರೆ.

ರವಿಚಂದ್ರನ್‌(Crazy Star Ravichandran) ಕುಟುಂಬ ಸಾಕಷ್ಟು ವರ್ಷಗಳಿಂದಲೂ ರಾಜಾಜಿನಗರದಲ್ಲಿರುವ ಮನೆಯಲ್ಲಿ ವಾಸವಾಗಿದ್ದರು. ಆದ್ರೀಗ ಏಕಾಏಕಿ ಆ ಮನೆಯನ್ನು ಬಿಟ್ಟು ಹೊಸಕೆರೆ ಹಳ್ಳಿಯಲ್ಲಿರುವ ಮತ್ತೊಂದು ಮನೆಗೆ ಶಿಫ್ಟ್ ಆಗಿದ್ದಾರೆ. ಮೂಲಗಳ ಪ್ರಕಾರ, ರಾಜಾಜಿನಗರದಲ್ಲಿ ಮನೆಯ ರೂಂಗಳನ್ನು ರಿನೋವೇಷನ್‌ ಮಾಡಿಸುವ ಸಲುವಾಗಿ ಬದಲಾಯಿದ್ದಾರೆ ಎನ್ನಲಾಗುತ್ತಿದೆ.ಅಷ್ಟೇ ಅಲ್ಲದೇ ಅಲ್ಲಿರುವ ಮನೆಯ ವಾಸ್ತು ಸರಿ ಇಲ್ಲದೆ ಇರುವ ಕಾರಣದಿಂದ ಸ್ವಲ್ಪ ದಿನದವರೆಗೆ ಮನೆ ಬಿಡುವಂತೆ ಅವರ ಆಪ್ತರು ಸಲಹೆ ನೀಡಿದ್ದಾರಂತೆ, ಈ ಎಲ್ಲಾ ಕಾರಣಗಳಿಂದ ರಾಜಾಜಿನಗರದಲ್ಲಿರುವ ಮನೆಯಿಂದ ಹೊಸೆಕೆರೆ ಹಳ್ಳಿಯಲ್ಲಿರುವ ಮನೆಗೆ ಶಿಪ್ಟ್‌ ಆಗಿದ್ದಾರೆ ಎನ್ನಲಾಗುತ್ತಿದೆ.

ಆದರೆ ಇದರ ಬಗ್ಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳ ವೇದಿಕೆಯಲ್ಲಿ ಇದರ ಬಗ್ಗೆ ಮೊದಲ ಬಾರಿ ಮಾತನಾಡಿ ಭಾವುಕರಾಗಿದ್ದಾರೆ.”ಒಂದು ತಿಂಗಳ ಹಿಂದೆ ರಾಜಾಜಿನಗರದಲ್ಲಿರುವ ಮನೆಯನ್ನು ಖಾಲಿ ಮಾಡಿದ್ದೇನೆ. ದುಡ್ಡು ಕಳೆದುಕೊಂಡು ಮನೆ ಮಾರಿದ ಎಂದು ಎಲ್ಲರೂ ಮಾತನಾಡಿಕೊಂಡರು. ಆದರೆ ನಾನು ದುಡ್ಡನ್ನು ಇಂದು ಕಳೆದಿದ್ದಲ್ಲ. 30 ವರ್ಷದಿಂದಲೂ ಕಳೆದುಕೊಂಡೆ ಬಂದಿದ್ದೇನೆ. ಕಳೆದುಕೊಂಡೇ ನಗುತ್ತಾ ಬಂದಿದ್ದೇನೆ. ಆದರೆ ಈವರೆಗೂ ನಿಮಗೆ ಯಾರಿಗೂ ಅರ್ಥವಾಗಿಲ್ಲ. ನಾನು ಕಳೆದುಕೊಂಡಿರುವುದೆಲ್ಲ ನಿಮಗಾಗಿ. ನಿಮ್ಮ ಮನಸ್ಸನ್ನು ಗೆಲ್ಲುವುದಕ್ಕಾಗಿ ಎಲ್ಲವನ್ನು ಕಳೆದುಕೊಂಡು ಬಿಟ್ಟಿದ್ದೇನೆ. ಆದರೆ ನನಗೆ ಬೇಸರ ಇಲ್ಲ. ಮತ್ತೆ ಗೆಲ್ಲುತ್ತೇನೆ ಎಂಬ ಆವೇಶ ಎಂದಿಗೂ ಕಡಿಮೆ ಆಗುವುದಿಲ್ಲ. ಯಾರು ಏನೇ ಮಾಡಲಿ ರವಿಚಂದ್ರನ್‌ಗೆ ರವಿಚಂದ್ರನೇ ಸಾಟಿ. ನಾನು ಯಾರನ್ನು ಗೆಲ್ಲುವ ಅಗತ್ಯವಿಲ್ಲ ನಾನು ನನ್ನನ್ನು ನಾನೇ ಮತ್ತೆ ಗೆಲ್ಲಬೇಕಿದೆ. ನಾನು ದುಡ್ಡನ್ನು ದುಡಿದು ಇಲ್ಲ, ನನಗೆ ದುಡ್ಡು ಬೇಕಾಗಿಯೂ ಇಲ್ಲ. ನನಗೆ ದುಡ್ಡು ಬೇಕಿರುವುದು ಸಿನಿಮಾ ಮಾಡೋದಕ್ಕೆ ಅದೊಂದೆ ಕಾರಣಕ್ಕೆ ಇವತ್ತಿಗೂ ನಾನಿಲ್ಲಿ ಬಂದು ಕುಳಿತಿದ್ದೇನೆ. ನಾನು ದುಡ್ಡು ಸಂಪಾದನೆ ಮಾಡುವುದು ರಾಯಲ್‌ ಆಗಿ ಬದುಕುವುದಕ್ಕೆ ಅಲ್ಲ, ರಾಯಲ್‌ ಆಗಿ ಸಿನಿಮಾ ಮಾಡುವುದಕ್ಕೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Film Fare awards 2022 :‌ ಫಿಲ್ಮ್ ಫೇರ್ ನಲ್ಲಿ ಚಿರುಗೆ ಅವಾರ್ಡ್: ಪ್ರಶಸ್ತಿ ಸ್ವೀಕರಿಸಿದ ಮೇಘನಾ ಭಾವುಕ

ಇದನ್ನೂ ಓದಿ : Nayanthara In trouble: ಸಿಹಿ ಸುದ್ದಿಕೊಟ್ಟ ನಯನತಾರಾ ದಂಪತಿಗೆ ‘ಬಾಡಿಗೆ’ ಸಂಕಷ್ಟ

ಇನ್ನೂ ” ಒಂದು ತಿಂಗಳಿಂದ ನನ್ನನ್ನು ನಾನು ಬದಲಾಯಿಸಿಕೊಳ್ಳಬೇಕು ಅನಿಸಿದೆ. ಸಿನಿಮಾ ಸೋತಿದ್ದರಿಂದ ನನಗೆ ಬೇಜಾರಾಯಿತು ಅಂತ ನಿಮಗೆ ಅನಿಸಿದರೆ ಅದು ಸುಳ್ಳು. ನಾನು ನಿಮ್ಮನ್ನು ಮೆಚ್ಚಿಸಲು ಆಗಲಿಲ್ಲ ಎಂದು ನನಗೆ ಬೇಸರವಾಗುತ್ತದೆ. ನನ್ನ ಸಿನಿಮಾಗೆ ನಿಮಗೆಲ್ಲಾ ನುಗ್ಗಿ ಅಭ್ಯಾಸ. ಆ ತರಹದ ಸಿನಿಮಾ ಮಾಡೇ ಮಾಡುತ್ತೀನಿ. ಆಗ ನೀವೆಲ್ಲ ನನ್ನ ಸಿನಿಮಾಕ್ಕೆ ನುಗ್ಗಿಯೇ ನುಗ್ಗುತ್ತೀರಾ. ಇದು ಆ ಕುರಿತು ನಾನು ಮಾತು ಕೊಡುತ್ತೇನೆ ಎಂದಿದ್ದಾರೆ. ನನ್ನ ಜೊತೆಯಲ್ಲಿ ಕೆಲಸಕ್ಕೆ ಇದ್ದವರು ಇವತ್ತು ನನಗೆ ಒಂದೂವರೆ ಕೋಟಿ ಕೊಟ್ಟು ಸಿನಿಮಾಕ್ಕೆ ಕೆರೆಯುವಷ್ಟು ಮಟ್ಟಿಗೆ ಬೆಳೆದಿದ್ದಾರೆ. ಇನ್ನೂ ಕೆಲವರು ರವಿಚಂದ್ರನ್‌ ಮಾತಾಡಿದ್ದರೆ ಪ್ರೇಮಲೋಕ ಹಾಗೂ ರಣಧೀರ ಸಿನಿಮಾ ಮಾತನಾಡುತ್ತಾರೆ ಎಂದು ಹೇಳುತ್ತಾರೆ. ಯಾರದಾರೂ ಹುಟ್ಟಿಸಿದ ತಂದೆ – ತಾಯಿಯ ಬಗ್ಗೆ ಮಾತನಾಡದೇ ಇರಲು ಸಾಧ್ಯನಾ” ಎಂದು ಖಡಕ್‌ ಆಗಿ ಹೇಳಿದ್ದಾರೆ.

Crazy star Ravichandran revealed the truth behind vacating the house

Comments are closed.