ಮೇಘನಾ ಸೀಮಂತ ಸಂಭ್ರಮಕ್ಕೆ ಸ್ಪೆಶಲ್ ಗಿಫ್ಟ್ ನೀಡಿದ ಚಾಲೆಂಜಿಂಗ್ ಸ್ಟಾರ್…!!

ಮೇಘನಾ ರಾಜ್.. ಸಿನಿಮಾ ಇಂಡಸ್ಟ್ರಿಯಲ್ಲಿ ಮನೆಮಗಳಂತೆ ಬೆಳೆದ ಹುಡುಗಿ. ಮದುವೆಯಾಗಿ ಎರಡು ವರ್ಷದಲ್ಲೇ ಪತಿಯನ್ನು ಕಳೆದುಕೊಂಡ ತುಂಬು ಗರ್ಭಿಣಿ ಮೇಘನಾ ದುಃಖಕ್ಕೆ ಕೊನೆಯೇ ಇಲ್ಲ. ಆದರೇ ಈ ದುಃಖದಲ್ಲೂ ಮೇಘನಾ ಬೆಂಬಲಕ್ಕೆ ಸ್ಯಾಂಡಲ್ ವುಡ್ ನಿಂತಿದೆ.

ಹೌದು,ಚಿರು ಅಗಲಿಕೆ ನೋವಲ್ಲೂ ಮೇಘನಾಗೆ ಚಿರು ಆಸೆಯಂತೆ ಧ್ರುವ್ ಸರ್ಜಾ ವಿಶೇಷವಾಗಿ ಅದ್ದೂರಿ ಸೀಮಂತ್ ಕಾರ್ಯಕ್ರಮ ಏರ್ಪಡಿಸಿದ್ದರು.ಆದರೆ ಈ ಕಾರ್ಯಕ್ರಮಕ್ಕೆ ಗೈರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಘನಾಗೆ ಫೋನ್ ಮಾಡಿ ಶುಭ ಹಾರೈಸಿದ್ದು ಸಪ್ರೈಸ್ ಗಿಫ್ಟ್ ನೀಡಿ ಶುಭಕೋರಿದ್ದಾರೆ.

ಅಣ್ಣನ ಆಸೆಯಂತೆ ಧ್ರುವ ಸರ್ಜಾ ಮೇಘನಾಗೆ ಅದ್ದೂರಿ ಸೀಮಂತ ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನ ಎಲ್ಲ ಹಿರಿಯ ನಟಿ-ನಟರು ಆಗಮಿಸಿ ಮೇಘನಾಗೆ ಹರಸಿದ್ದರು.

ಆದರೆ ಕಾರ್ಯಕ್ರಮಕ್ಕೆ ಗೈರಾದ ಚಿರು ಹಾಗೂ ಮೇಘನಾ ಆಪ್ತ ಸ್ನೇಹಿತ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶೇಷ ಗಿಫ್ಟ್ ನೀಡಿದ್ದಾರೆ. ಭೂಮಿಗೆ ಬರಲಿರೋ ಚಿರು ಕಂದನಿಗಾಗಿ ವಿಶೇಷ ತೊಟ್ಟಿಲೊಂದನ್ನು ನೀಡಿದ್ದಾರೆ.

ಈ ಹಿಂದೆ ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪುತ್ರಿಗಾಗಿ ಅಂಬರೀಶ್ ಕೂಡ ಸುಂದರವಾದ ಚನ್ನಪಟ್ಟಣದ ಬೊಂಬೆಯಿಂದ ಕೂಡಿದ ತೊಟ್ಟಿಲು ಮಾಡಿಸಿದ್ದರು. ಇದೀಗ ದರ್ಶನ್ ಕೂಡ ಮೇಘನಾಗೆ ಸುಂದರವಾದ ತೊಟ್ಟಿಲು ನೀಡಿ ಬರುವ ಕಂದನಿಗೆ ಶುಭಹಾರೈಸಿದ್ದಾರೆ.

ಧ್ರುವ ಸರ್ಜಾ ಅಣ್ಣನ ಕಟೌಟ್ ಗಳ ಜೊತೆ ಮೇಘನಾ ಪೋಟೋ ಹಾಕಿಸಿ ಅದ್ದೂರಿ ಸೆಟ್ ನಲ್ಲಿ ಸೀಮಂತ ಮಾಡಿಸಿದ್ದರೇ ದರ್ಶನ್ ಆಪ್ತವಾದ ಗಿಫ್ಟ್ ಮೂಲಕ ಮೇಘನಾ ದುಃಖವನ್ನು ಖುಷಿ, ಸಂಭ್ರಮದಲ್ಲಿ ಬದಲಿಸುವ ಪ್ರಯತ್ನ ಮಾಡಿದ್ದು ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ಮೇಘನಾ ರಾಜ್ ಸರ್ಜಾ ಅವರ ಬಗ್ಗೆ ಯಾರಿಗೆ ತಿಳಿದಿಲ್ಲ. ಮೊದಲು ಅವರು ಸುಂದರ್ ರಾಜ್ ಮತ್ತು ಪ್ರಮೀಳಾ ದೇಸಾಯಿ ಇವರ ಪುತ್ರಿ. ನಂತರ ಚಿರಂಜೀವಿ ಸರ್ಜಾ ಅವರನ್ನು ವಿವಾಹವಾಗಿದ್ದರು.

2018ರಲ್ಲಿ ಅದ್ದೂರಿಯಾಗಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.ಆದರೆ ಮದುವೆ ಆದ 2 ವರ್ಷಕ್ಕೆ ಚಿರು ಅವರು ಮರಣ ಹೊಂದಿದರು. ಮೇಘನಾ ಅವರ ಸೀಮಂತ ಮತ್ತು ದರ್ಶನ್ ಅವರ ಉಡುಗೊರೆ ಬಗ್ಗೆ ನಾವು ಇಲ್ಲಿ ತಿಳಿಯೋಣ.

ಚಿರು ಸತ್ತ ನಂತರ ಮೊದಲ ಸಂತೋಷದ ಕಾರ್ಯಕ್ರಮ ಮೇಘನಾ ರಾಜ್ ಅವರ ಸೀಮಂತ.ಮೇಘನಾ ರಾಜ್ ಅವರಿಗೆ ಸೀಮಂತ ಶಾಸ್ತ್ರ ಮಾಡಲಾಯಿತು. ಮೇಘನಾ ಅವರ ಸೀಮಂತ ಶಾಸ್ತ್ರವನ್ನು ಬಹಳ ಅದ್ದೂರಿಯಾಗಿ ನಡೆಸಲಾಗಿದೆ.ಎರಡೂ ಕುಟುಂಬಗಳು ಚಿರು ಅಗಲಿಕೆಯ ನೋವಿನಲ್ಲಿ ಅಂದರೆ ದುಃಖದ ನಡುವೆಯೂ ಕೂಡ ಸೀಮಂತ ಶಾಸ್ತ್ರವನ್ನು ಮಾಡಿ ಮುಗಿಸಿದ್ದಾರೆ.

ಕುಟುಂಬದ ಆಪ್ತರು ಮಾತ್ರ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.ಹುಟ್ಟುವ ಮಗುಗೆ ಹಾರೈಸಿದ್ದಾರೆ. ಇಲ್ಲಿ ವಿಶೇಷತೆ ಎಂದರೆ ನೆನಪಿಗಾಗಿ ಚಿರು ಅವರ ಸೆಟ್ ಹಾಕಿಸಲಾಗಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈ ಕುಟುಂಬಕ್ಕೆ ಬಹಳ ಆಪ್ತರಾಗಿದ್ದಾರೆ.ಆದರೆ ಕೊರೊನ ಕಾರಣದಿಂದ ಸೀಮಂತ ಕಾರ್ಯಕ್ರಮಕ್ಕೆ ಬರಲು ಆಗಲಿಲ್ಲ. ಆದರೂ ಇವರು ಒಂದು ದೊಡ್ಡ ಉಡುಗೊರೆಯನ್ನು ನೀಡಲಿದ್ದಾರೆ.

ಅದೇನೆಂದರೆ ಇಲ್ಲಿಗೆ ಬರಲಾಗದ ಕಾರಣ ಮೇಘನಾ ಅವರಿಗೆ ಕರೆ ಮಾಡಿದ್ದಾರೆ. ಕರೆಯಲ್ಲಿ ಶುಭ ಹಾರೈಸಿದ್ದಾರೆ. ಹಿಂದೆ ಯಶ್ ಮಗಳಿಗೆ ಅಂಬರೀಶ್ ಅವರು ತೊಟ್ಟಿಲನ್ನು ಉಡುಗೊರೆಯಾಗಿ ಕೊಟ್ಟಿದ್ದರು.

ಹಾಗೆಯೇ ದರ್ಶನ್ ಅವರು ಕೂಡ ಚಿರುವಿನ ಕುಡಿಗಾಗಿ ತೊಟ್ಟಿಲನ್ನು ಕೊಡಲಿದ್ದಾರೆ. ತೊಟ್ಟಿಲು ತಯಾರಿಸುವ ಪ್ರತಿಷ್ಠಿತ ಕಂಪನಿಯ ಜೊತೆ ತೊಟ್ಟಿಲು ಮಾಡಲು ಆರ್ಡರ್ ಕೊಟ್ಟಿದ್ದಾರೆ.ಇನ್ನು ಒಂದು ವಾರಕ್ಕೆ ಅದು ತಯಾರಿ ಆಗಲಿದೆ. ವಿಷಯ ತಿಳಿದು ಭಾವುಕರಾದ ಮೇಘನಾ ಚಿರು ಅವರ ಬಗ್ಗೆ ದರ್ಶನ್ ಅವರಿಗೆ ಇರುವ ಅಭಿಮಾನಕ್ಕೆ ಬಹಳ ಹೆಮ್ಮೆ ಪಟ್ಟಿದ್ದಾರೆ.

Comments are closed.