Hamsalekha – Sa Re Ga Ma Pa : ಸರಿಗಮಪದಿಂದ ಹೊರಬಂದ್ರಾ ಮಹಾಗುರುಗಳು: ಹಂಸಲೇಖ ಗೈರಿನ ಬಗ್ಗೆ ವಾಹಿನಿ ಹೇಳಿದ್ದೇನು ಗೊತ್ತಾ?!

ಬೆಂಗಳೂರು : ಪೇಜಾವರ ಶ್ರೀಗಳ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಇದೇ ಮೊದಲ ಬಾರಿಗೆ ವಿವಾದಕ್ಕಿಡಾಗಿದ್ದ ನಾದಬ್ರಹ್ಮ ಹಂಸಲೇಖ ಖಾಸಗಿ ( Zee Kannada ) ವಾಹಿನಿಯ ಸರಿಗಪಮ ಶೋದಿಂದ (Hamsalekha – Sa Re Ga Ma Pa) ನಾಪತ್ತೆಯಾಗಿದ್ದಾರೆ. ಇದು ಸರಿಗಮಪ ಅಭಿಮಾನಿಗಳು ಹಾಗೂ ನಾದಬ್ರಹ್ಮ,ಮಹಾಗುರು ಖ್ಯಾತಿಯ ಹಂಸಲೇಖ ಅಭಿಮಾ‌ನಿಗಳಿಗೆ ಶಾಕ್ ನೀಡಿದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಸಂಗೀತ ನಿರ್ದೇಶಕ ಹಂಸಲೇಖ ಪೇಜಾವರ ಶ್ರೀಗಳ ಬಗ್ಗೆ ಲಘುವಾಗಿ ಮಾತನಾಡುವ ಮೂಲಕ ವಿವಾದ ಸೃಷ್ಟಿಸಿದ್ದರು. ಇದೇ ವಿಚಾರದಿಂದ ವಿವಾದಕ್ಕೆ ಸಿಲುಕಿದ ಹಂಸಲೇಖ ಅವರಿಗೆ ಮಹಾಗುರು ಖ್ಯಾತಿ ತಂದುಕೊಟ್ಟ ಸರಿಗಮಪ ಶೋಕ್ಕೆ ಗೈರಾಗಿದ್ದಾರೆ.

ವಿವಾದಾತ್ಮಕ ಹೇಳಿಕೆ ಬಳಿಕ ಪೊಲೀಸ್ ವಿಚಾರಣೆ ಎದುರಿಸಿದ್ದ ಹಂಸಲೇಖ ಇದಾದ ಬಳಿಕವೂ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಮಾತ್ರವಲ್ಲ ಸರಿಗಮಪ ಶೋದ ಈ ವಾರದ ಎಪಿಸೋಡ್ ನಿಂದ ಹಂಸಲೇಖ ಹೊರಗುಳಿದಿದ್ದಾರೆ. ಈ ಮಧ್ಯೆ ಪೇಜಾವರ ಶ್ರೀಗಳ ವಿರುದ್ಧ ಲಘುವಾಗಿ ಮಾತನಾಡಿದ್ದಕ್ಕೆ ಭಕ್ತರ ಆಕ್ರೋಶಕ್ಕೆ ಗುರಿಯಾಗಿದ್ದ ಹಂಸಲೇಖ ಅವರನ್ನು ಝೀ ವಾಹಿನಿ ತಮ್ಮ ರಿಯಾಲಿಟಿ ಶೋದಿಂದ ಹೊರಗಿಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನವೂ ಜೋರಾಗಿತ್ತು.

ಹೀಗಾಗಿ ಸಂಗೀತ ನಿರ್ದೇಶಕ ಹಂಸಲೇಖ ಅವರನ್ನು ರಿಯಾಲಿಟಿ ಶೋದಿಂದ ಕೈಬಿಟ್ಟರು ಎಂಬ ಮಾತು ಕೇಳಿಬಂದಿತ್ತು. ಇದಕ್ಕೆ ಪೂರಕ ಎಂಬಂತೆ ಹಂಸಲೇಖ ಕೂಡ ಪೊಲೀಸ್ ವಿಚಾರಣೆ ವೇಳೆ, ನಾನು ಯಾಕೆ ಹೀಗೆ ಮಾತನಾಡಿದೆ ಎಂಬುದು ಗೊತ್ತಿಲ್ಲ. ಇದರಿಂದ ನನ್ನ ಕೆಲಸಕ್ಕೂ ಹಿನ್ನಡೆಯಾಗಿದೆ ಎಂದು ಕಣ್ಣೀರಾಗಿದ್ದರಂತೆ. ಸರಿಗಮಪ ಝೀ ವಾಹಿನಿಯ ಪ್ರತಿಷ್ಠಿತ ರಿಯಾಲಿಟಿಶೋಗಳಲ್ಲಿ ಒಂದಾಗಿದ್ದು ಆರಂಭದಿಂದಲೂ ಹಂಸಲೇಖ ಮಹಾಗುರುಗಳಾಗಿ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ಈಗ ದಿಢೀರ್ ಕಾಣಿಸದ ಕೊಳ್ಳದೇ ಇರೋದು ಹಲವು ಅನುಮಾನ ಹುಟ್ಟಿಹಾಕಿತ್ತು.

ಆದರೆ ಈ ಎಲ್ಲ ಅನುಮಾನಗಳಿಗೆ ಝೀ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ್ ಹುಣಸೂರು ಸ್ಪಷ್ಟನೆ ನೀಡಿದ್ದಾರೆ. ಮಹಾಗುರುಗಳು ತಮ್ಮ ಆರೋಗ್ಯ ಹಾಗೂ ವೈಯಕ್ತಿಕ ಕಾರಣಕ್ಕಾಗಿ ಒಂದು ವಾರ ಹೊರಗುಳಿಯಲು ನಿರ್ಧರಿಸಿದರು. ಅವರ ಈ ನಿರ್ಧಾರವನ್ನು ನಾವು ಗೌರವಿಸಿ ಒಂದು ವಾರ ಹೊರಗುಳಿಯಲು ಅವಕಾಶ ಕಲ್ಪಿಸಿದ್ದೇವೆ. ಮುಂದಿನ‌ ವಾರದಿಂದ ಮಹಾಗುರುಗಳು ಎಂದಿನಂತೆ ನಮ್ಮೊಂದಿಗೆ ಇರುತ್ತಾರೆ ಎಂದು ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ.

ಅಲ್ಲದೇ ನನ್ನ ಆರೋಗ್ಯ ಸ್ಥಿರವಾಗಿದೆ. ಸರಿಗಮಪ ನನ್ನ ಪ್ರೀತಿಯ ಭೂಮಿಕೆ.ಅದು ಮನಸ್ಸು ಮನಸ್ಸುಗಳನ್ನು ನೇಯುವ ಸುಂದರ ವೇದಿಕೆ.ಸುಧಾರಣೆಗಳ ಸುಂದರ ಕತೆಯನ್ನು ಓದಿಕೊಳ್ಳುತ್ತಿದ್ದೇನೆ. ಬೇಗ ಬಂದು ಸೇರಿಕೊಳ್ಳುತ್ತೇನೆ ಎಂಬ ಹಂಸಲೇಖ ಸಂದೇಶವನ್ನು ಶೇರ್ ಮಾಡಿ ವಿವಾದಗಳಿಗೆ ಅಂತ್ಯಹಾಡಿದ್ದಾರೆ.

ಇದನ್ನೂ ಓದಿ : ಸಂಕಷ್ಟಕ್ಕೆ ಸಿಲುಕಿದ ಹಂಸಲೇಖ : ನಾದಬ್ರಹ್ಮನ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು

ಇದನ್ನೂ ಓದಿ : Hamsalekaha Case : ಕೊನೆಗೂ ಪೊಲೀಸ್ ಠಾಣೆಗೆ ಬಂದ ಹಂಸಲೇಖ : ನಾದಬ್ರಹ್ಮನಿಗೆ ಸಾಥ್ ನೀಡಿದ ನಟ ಚೇತನ್, ಹಿಂದೂ ಸಂಘಟನೆಗಳ ವಿರೋಧ

( Hamsalekha resign from the Sa re ga ma pa Show, You know what Zee Kannada said about this)

Comments are closed.