ಭಾನುವಾರ, ಜೂನ್ 15, 2025
HomeBreakingಸಹೋದರಿಯನ್ನು ಉಳಿಸಿಕೊಳ್ಳಲು ನೆರವಾಗಿ...! ನಾಗಮಂಡಲ ವಿಜಯಲಕ್ಷ್ಮೀ ಮನವಿ...!!

ಸಹೋದರಿಯನ್ನು ಉಳಿಸಿಕೊಳ್ಳಲು ನೆರವಾಗಿ…! ನಾಗಮಂಡಲ ವಿಜಯಲಕ್ಷ್ಮೀ ಮನವಿ…!!

- Advertisement -

ನಾಗಮಂಡಲ‌ ಖ್ಯಾತಿಯ ನಟಿ ವಿಜಯಲಕ್ಷ್ಮೀ ಮತ್ತೊಮ್ಮೆ ಸಂಕಷ್ಟಕ್ಕಿ ಡಾಗಿದ್ದು ಸ್ಯಾಂಡಲ್ ವುಡ್ ನಟರ ಸಹಾಯ ಕೋರಿದ್ದಾರೆ. ಅಕ್ಕನನ್ನು ಉಳಿಸಿಕೊಡಿ ಎಂದು ಮನವಿ ಮಾಡಿದ್ದಾರೆ.

ವಿಜಯಲಕ್ಷ್ಮೀ ಸಹೋದರಿ ಉಷಾದೇವಿ ಗರ್ಭಕೋಶ ಸಮಸ್ಯೆಯಿಂದ‌ ಬಳಲುತ್ತಿದ್ದು, ವಿಜಯಲಕ್ಷ್ಮೀ ಅವರಿಗೆ ಚೈನೈನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿ ದ್ದಾರೆ. ಆದರೆ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಉಷಾ ದೇವಿ ಆರೋಗ್ಯ ಹದಗೆಟ್ಟಿದೆ ಎನ್ನಲಾಗಿದೆ.

ಮಾತು ಆಡಲಾರದ ಸ್ಥಿತಿಯಲ್ಲಿರೋ ಉಷಾದೇವಿ ಯನ್ನು ಉಳಿಸಿ ಕೊಳ್ಳಲು ಸಹಾಯ ಮಾಡಿ ಎಂದು ವಿಜಯಲಕ್ಷ್ಮೀ ಕೈಮುಗಿದು ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ ಈ ವಿಡಿಯೋವನ್ನು ಶಿವಣ್ಣನ ಗಮನಕ್ಕೆ ತನ್ನಿ ಎಂದು ಮನವಿ ಮಾಡಿದ್ದಾರೆ.

ಕಳೆದ ತಿಂಗಳು ಅಕ್ಕನಿಗೆ ಚೆನ್ನೈನಲ್ಲಿ ಅಕ್ಕನಿಗೆ ಆಫರೇಶನ್ ಮಾಡಿಸಿದ್ವಿ. ಆದರೆ ಅದು ಸಕ್ಸಸ್ ಆಗಲಿಲ್ಲ. ಈಗ ಅಕ್ಕ ಕ್ರಿಟಿಕಲ್ ಕಂಡಿಶನ್ ನಲ್ಲಿದ್ದಾರೆ. ಮತ್ತೆ ಆಸ್ಪತ್ರೆಗೆ ಕರ್ಕೊಂಡು ಹೋದರೇ ಕೊವೀಡ್ ಇದೆ ಬರಬೇಡಿ ಎನ್ನುತ್ತಿದ್ದಾರೆ.

https://kannada.newsnext.live/rohini-sindoori-beautiful-dynamic-dc-personal-life/

ಏನು ಮಾಡಬೇಕು‌ಗೊತ್ತಾಗುತ್ತಿಲ್ಲ. ದಯವಿಟ್ಟು ಕನ್ನಡಿಗರು‌ಸಹಾಯ ಮಾಡಿ ಎಂದು ವಿಜಯಲಕ್ಷ್ಮೀ ಬೇಡಿಕೊಂಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಕಳೆದ ವರ್ಷ ವಿಜಯಲಕ್ಷ್ಮೀ ಅನಾರೋಗ್ಯಕ್ಕೆ ತುತ್ತಾದಾಗಲೂ ಅವರ ಸಹೋದರಿ ಉಷಾದೇವಿ ಕನ್ನಡ ನಟರ ಸಹಾಯಕೋರಿದ್ದರು. ನಟ‌ ಶಿವರಾಜ್ ಕುಮಾರ್ ಸೇರಿದಂತೆ ಹಲವರು ವಿಜಯಲಕ್ಷ್ಮೀ ಕುಟುಂಬ ಕ್ಕೆ ಸಹಾಯ ನೀಡಿದ್ದರು.

ಈಗ ವಿಜಯಲಕ್ಷ್ಮೀ ಮತ್ತೆ ಸಹಾಯದ ನೀರಿಕ್ಷೆಯಲ್ಲಿದ್ದಾರೆ. ಕನ್ನಡದಲ್ಲಿ ನಾಗಮಂಡಲ ಸೇರಿದಂತೆ‌ ಹಲವು ಚಿತ್ರಗಳಲ್ಲಿ ನಟಿಸಿದ ವಿಜಯಲಕ್ಷ್ಮೀ ಬಳಿಕ ಹಲವು ಕಹಿ ಘಟನೆಗಳಿಂದ ಸ್ಯಾಂಡಲ್ ವುಡ್ ತೊರೆದಿದ್ದರು.

https://kannada.newsnext.live/coronavirus-infection-of-210-people-in-a-single-monastery/
Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular