mangalore : ಒಂದೇ ಆಶ್ರಮದ 210 ಜನರಿಗೆ ಒಕ್ಕರಿಸಿದ ಕೊರೊನಾ ಸೋಂಕು

ಬೆಳ್ತಂಗಡಿ  : ಆಶ್ರಮದಲ್ಲಿ ವಾಸವಾಗಿದ್ದ 210 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.

ನೆರಿಯ ಗ್ರಾಪಂ ವ್ಯಾಪ್ತಿಯ ಗಂಡಿಬಾಗಿಲು ಎಂಬಲ್ಲಿರುವ ಸಿಯೋನ್ ಎಂಬ ಅನಾಥಾಶ್ರಮದಲ್ಲಿ ಸುಮಾರು 270 ಜನರು ವಾಸವಾಗಿದ್ದು, ಈ ಪೈಕಿ ಬರೋಬ್ಬರಿ 210 ಜನರಿಗೆ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಆತಂಕ ಶುರುವಾಗಿದೆ.

ಆಶ್ರಮದಲ್ಲಿರುವ ಕೆಲವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ತಲಾಸಣೆಗೆ ಒಳಪಡಿಸಿ ದಾಗ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಅಶ್ರಮದ ಎಲ್ಲರನ್ನೂ ಕೊರೊನಾ ತಪಾಸಣೆ ನಡೆಸಿದಾಗ ಆಘಾತ ಕಾರಿ ಮಾಹಿತಿ ಹೊರಬಿದ್ದಿದೆ.

https://kannada.newsnext.live/rohini-sindoori-beautiful-dynamic-dc-personal-life/

ಕೊರೊನಾ ಸೋಂಕಿಗೆ ಒಳಗಾದವರನ್ನು ಧರ್ಮಸ್ಥಳದ ರಜತಾದ್ರಿ ವಸತಿ ಗೃಹಕ್ಕೆ ಸ್ಥಳಾಂತರಿಸಲಾಗಿದ್ದು, ಶಾಸಕ ಹರೀಶ್ ಪೂಂಜಾ ಅವರ ನೇತೃತ್ವದಲ್ಲಿ ಕೋವಿಡ್ ಕೇರ್ ಸೆಂಟರ್ ಗೆ ವರ್ಗಾಯಿಸುವ ಕಾರ್ಯ ನಡೆಯುತ್ತಿದೆ.

Comments are closed.