ಹೊಂಬಾಳೆಗೆ ಜೊತೆಯಾದ ನಿರ್ದೇಶಕ ರಿಷಬ್ ಶೆಟ್ಟಿ ….! ತೆರೆಗೆ ಬರಲಿದೆ ಕಾಂತಾರದ ದಂತಕಥೆ…!!

ಸ್ಯಾಂಡಲ್ ವುಡ್ ನಲ್ಲಿ  ಬಿಗ್ ಬಜೆಟ್ ಸಿನಿಮಾಗಳಿಗೆ ಹೆಸರಾದ ಹೊಂಬಾಳೆ ಫಿಲ್ಸ್ಮ್ ಮತ್ತೊಂದು ಬಿಗ್ ಬಜೆಟ್ ಸಿನಿಮಾ ಘೋಷಿಸಿದ್ದು, ವಿಭಿನ್ನ ಟೈಟಲ್ ನ ಜೊತೆ ವಿಭಿನ್ನ ಸಿನಿಮಾ ಗೆ ಹೆಸರಾದ ರಿಷಬ್ ಶೆಟ್ಟಿ ಕಾಂತಾರವನ್ನು ತೆರೆಗೆ ತರಲಿದೆ.

ಮೊನ್ನೆ ಮೊನ್ನೆಯಷ್ಟೇ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿರ್ದೇಶನ ಹಾಗೂ ನಾಯಕನಾಗಿ ನಟಿಸುವ ರಿಚರ್ಡ್ ಆಂಟನಿ ಸಿನಿಮಾ ಘೋಷಿಸಿದ್ದ ಹೊಂಬಾಳೆ ಫಿಲ್ಸ್ಮ್ ನಿನ್ನೆಯಷ್ಟೇ ಅಗಸ್ಟ್ 6 ರಂದು ತಮ್ಮ 11 ನೇ ಸಿನಿಮಾದ ಟೈಟಲ್ ಹಾಗೂ ಫರ್ಸ್ಟ್ ಲುಕ್ ರಿವೀಲ್ ಮಾಡುವುದಾಗಿ ಹೇಳಿಕೊಂಡಿತ್ತು.

ನುಡಿದಂತೆ 11.43 ಕ್ಕೆ ಹೊಂಬಾಳೆ ಫಿಲ್ಸ್ಮ್ ತನ್ನ 11 ನೇ ಸಿನಿಮಾವನ್ನು ರಿಷಬ್ ಶೆಟ್ಟಿಗಾಗಿ ನಿರ್ಮಿಸುವುದಾಗಿ ಘೋಷಿಸಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಸಿನಿಮಾಗೆ ಕಾಂತಾರ ಎಂದು ಹೆಸರಿಡಲಾಗಿದೆ.

ಪೋಸ್ಟರ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಜಾನಪದ ಕ್ರೀಡೆ ಕಂಬಳದ ಪೋಟೋವನ್ನು ಬಳಸಲಾಗಿದ್ದು, ಜೊತೆಗೆ ಕಾಂತಾರ ಟೈಟಲ್ ಗೆ ಒಂದು ದಂತಕತೆ ಎಂಬ ಟ್ಯಾಗ್ ಲೈನ್ ನೀಡಲಾಗಿದೆ. ಹೀಗಾಗಿ ಕಂಬಳದ ಮೂಲಕಥಾ ವಸ್ತುವನ್ನು ಹೊಂದಿದ ಚಿತ್ರಕತೆಯೊಂದಿಗೆ ಸಿನಿಮಾ ತೆರೆಗೆ ಬರಲಿದೆ ಎಂದು ಊಹಿಸಲಾಗುತ್ತಿದೆ. ಈ ಬಗ್ಗೆ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಸಹ ಟ್ವೀಟ್ ಮಾಡಿದ್ದಾರೆ.

ಬಹಳ ಸಮಯದ ನಂತರ ಹೊಸ ಕಿಚ್ಚಿನೊಂದಿಗೆ ಮತ್ತೆ ನಿರ್ದೇಶಕನಾಗಿ ಕತೆ ಹೇಳಲು ಬರುತ್ತಿದ್ದೇನೆ. ಈ ಕಿಚ್ಚು ನಮ್ಮ ಸುತ್ತಲೂ ಸದ್ಯ ಕವಿದಿರುವ ಕರಾಳತೆಯನ್ನು ದಹಿಸುತ್ತದೆ ಎಂಬ ನಂಬಿಕೆಯೊಂದಿಗೆ ಎಂದು ಬರೆದಿದ್ದಾರೆ.

Comments are closed.