Aravind Kaushik Arrest : ಸ್ಯಾಂಡಲ್‌ವುಡ್ ನಿರ್ದೇಶಕ ಅರವಿಂದ ಕೌಶಿಕ್‌ ಅರೆಸ್ಟ್‌

ಬೆಂಗಳೂರು : ಕಿರುತೆರೆಯಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿರುವ ಕಮಲಿ ಧಾರವಾಹಿ ನಿರ್ದೇಶಕ ಅರವಿಂದ ಕೌಶಿಕ್‌ ಅರೆಸ್ಟ್‌ (Aravind Kaushik Arrest) ಆಗಿದ್ದಾರೆ. ಧಾರವಾಹಿಗೆ ಹೂಡಿಕೆ ಮಾಡಿದ್ದ ಹಣವನ್ನು ವಂಚಿಸಿರುವ ಆರೋಪದ ಹಿನ್ನೆಲೆಯಲ್ಲಿ ವಯ್ಯಾಲಿಕಾವಲ್‌ ಠಾಣೆಯ ಪೊಲೀಸರು ಬಂಧಿಸಿದ್ದು, ವಿಚಾರಣೆಯನ್ನು ನಡೆಸುತ್ತಿದ್ದಾರೆ.

2018ರಲ್ಲಿ ಧಾರವಾಹಿ ನಿರ್ಮಾಣಕ್ಕಾಗಿ ರೋಹಿತ್‌ ಎಂಬವರಿಂದ ನಿರ್ದೇಶಕ ಅರವಿಂದ ಕೌಶಿಕ್‌ ಅವರು ಸುಮಾರು 73 ಲಕ್ಷ ರೂಪಾಯಿ ಹಣವನ್ನು ಪಡೆದುಕೊಂಡಿದ್ದರು. ಆದರೆ ಈ ಹಣವನ್ನು ವಾಪಾಸ್‌ ನೀಡದೆ ಅರವಿಂದ ಕೌಶಿಕ್‌ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ರೋಹಿತ್‌ ಅವರು ವಯ್ಯಾಲಿಕಾವಲ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ವಯ್ಯಾಲಿಕಾವಲ್‌ ಠಾಣೆಯ ಪೊಲೀಸರು ನಿರ್ದೇಶಕ ಅರವಿಂದ ಕೌಶಿಕ್‌ ವಿರುದ್ದ ಐಪಿಸಿ ಸೆಕ್ಷನ್‌ 506 ಮತ್ತು 420ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು, ಬಂಧಿಸಿದ್ದಾರೆ. ಅರವಿಂದ ಕೌಶಿಕ್‌ ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ನಮ್ಮ ಏರಿಯಾಲ್‌ ಒಂದಿನ, ತುಘಲಕ್‌, ಹುಲಿರಾಯ ಹಾಗೂ ಶಾರ್ದೂಲ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ಅಲ್ಲದೇ ಕಮಲಿ ಹಾಗೂ ಲಗ್ನ ಪತ್ರಿಕೆ ಧಾರವಾಹಿಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ :  ಕಿಚ್ಚ ಸುದೀಪ- ಅಜಯ್​ ದೇವಗನ್​ ನಡುವೆ ಭಾಷಾ ವಾರ್​ ಶುರುವಾಗಿದ್ದು ಹೇಗೆ? ಇಲ್ಲಿದೆ ಕಂಪ್ಲೀಟ್​ ಡೀಟೆಲ್ಸ್​

ಇದನ್ನೂ ಓದಿ : ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿದ ಸಿಂಧೂ ಲೋಕನಾಥ್: ಡ್ರಗ್ಸ್ ಕುರಿತ ರೋಚಕ ಕಥೆ ‘1975’

Kamali serial Director Aravind Kaushik Arrest

Comments are closed.