ಕಾಂತಾರ 2 ಸಿದ್ಧತೆ ಬೆನ್ನಲ್ಲೇ ಪಂಜುರ್ಲಿ ದೈವದ ಆರ್ಶೀವಾದ ಪಡೆದ ನಟ ರಿಷಬ್‌ ಶೆಟ್ಟಿ

ಕಾಂತಾರ ಸಿನಿಮಾ ಸೂಪರ್‌ಹಿಟ್‌ ಬಳಿಕ ಡಿವೈನ್‌ ಸ್ಟಾರ್‌ ಎಂದು ಪ್ರಖ್ಯಾತಿ ಪಡೆದ ರಿಷಬ್ ಶೆಟ್ಟಿ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಕೂ ಭಡ್ತಿ ಪಡೆದುಕೊಂಡಿದ್ದಾರೆ. ಇದೀಗ ನಟ ರಿಷಬ್‌ ಶೆಟ್ಟಿ ಸಿನಿಪ್ರೇಕ್ಷಕರ ಬಹುಬೇಡಿಕೆ ಮೇರೆಗೆ “ಕಾಂತಾರ 2” ಸಿದ್ಧತೆಯಲ್ಲಿ (Kantara 2 preparation) ಬ್ಯುಸಿಯಾಗಿದ್ದು, ಅದರ ಬೆನ್ನಲ್ಲೇ ಪಂಜುರ್ಲಿ ದೈವ ಆಶೀರ್ವಾದ ಪಡೆದಿದ್ದಾರೆ. ಸದ್ಯ ಈ ಕುರಿತಂತೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವನ್ನು ನಟ ರಿಷಬ್ ಹಂಚಿಕೊಂಡಿದ್ದಾರೆ.

ನಟ ರಿಷಬ್‌ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾವನ್ನು ದೇಶದಾದ್ಯಂತ ಮಾತ್ರವಲ್ಲದೇ ಹೊರದೇಶದಲ್ಲೂ ಕೂಡ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಈ ಸಿನಿಮಾದ ಮೂಲಕ ನಟ ರಿಷಬ್‌ ಶೆಟ್ಟಿ ನಟನೆಯ ಜೊತೆ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದರು. ಅಷ್ಟೇ ಅಲ್ಲದೇ ಕರಾವಳಿ ಸೊಗಡು, ಭೂತಕೋಲದಲ್ಲಿ ಪಂಜುರ್ಲಿ ದೈವದ ಕಥೆಯನ್ನು ಅದ್ಭುತವಾಗಿ ತೆರೆಯ ಮೇಲೆ ತೋರಿಸಿದ್ದಾರೆ. ಇತ್ತೀಚೆಗೆ ನಟ ರಿಷಬ್‌ ಶೆಟ್ಟಿ ದಕ್ಷಿಣ ಕನ್ನಡ ಜಿಲ್ಲೆಯ ಮುತ್ತೂರು ನೆಟ್ಟಿಲ ಪಂಜುರ್ಲಿ (Panjurli) ದೈವ ನೇಮೋತ್ಸವದಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ : ಕೋಲಾರ, ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ಸ್ಯಾಂಡಲ್‌ವುಡ್‌ ನಟ ದರ್ಶನ್ ತೂಗುದೀಪ

ಇದನ್ನೂ ಓದಿ : Zia Khan Suicide Case : ಕುಮ್ಮಕ್ಕು ನೀಡಿದ ಆರೋಪದಿಂದ ಸೂರಜ್ ಪಾಂಚೋಲಿಗೆ ಖುಲಾಸೆಗೊಳಿಸಿದ ಸಿಬಿಐ ಕೋರ್ಟ್

ಆ ವೇಳೆಯಲ್ಲಿ ನಟ ರಿಷಬ್ ಶೆಟ್ಟಿ ಪಂಜುರ್ಲಿ ದೈವದ ಆಶೀರ್ವಾದ ಪಡೆದಿದ್ದಾರೆ. “ಕಾಂತಾರ” ಸಿನಿಮಾದಲ್ಲಿ ನಟ ರಿಷಬ್ ದೈವದ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಅದ್ಬುತ ಯಶಸ್ಸನ್ನು ಕಂಡಿತ್ತು. ಸಿನಿಮಾ ಯಶಸ್ಸಿನ ಬಳಿಕವೇ ದೈವಕ್ಕೆ ವಿಶೇಷ ಪೂಜೆ ಕೂಡ ಸಿನಿತಂಡದೊಂದಿಗೆ ಸಲ್ಲಿಸಿದ್ದರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ರಿಷಬ್ ಶೇರ್ ಮಾಡಿರುವ ಮುತ್ತೂರು ನೆಟ್ಟಿಲ ‘ಪಂಜುರ್ಲಿ’ ಕೋಲದ ವೀಡಿಯೋ ಸಖತ್ ಲೈಕ್ಸ್ ಪಡೆದುಕೊಂಡಿದೆ. ಈ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗುತ್ತಿದ್ದಂತೆ “ಕಾಂತಾರ 2” ಸಿನಿಮಾ ಬಗ್ಗೆ ಸಿನಿಪ್ರೇಕ್ಷಕರು ಅಪ್‌ಡೇಟ್ ಕೇಳಿದ್ದಾರೆ.

ಇದನ್ನೂ ಓದಿ : Filmfare Awards 2023 : ಆಲಿಯಾ ಭಟ್‌ಗೆ ಅತ್ಯುತ್ತಮ ನಟಿ ಪ್ರಶಸ್ತಿ, ರಾಜ್‌ಕುಮಾರ್ ಅತ್ಯುತ್ತಮ ನಟ, ಸಂಪೂರ್ಣ ವಿವರ ಇಲ್ಲಿದೆ

Kantara 2 preparation : Actor Rishabh Shetty who got Panjurli divina after Kantara 2 preparation.

Comments are closed.