ಸೋಮವಾರ, ಜೂನ್ 16, 2025
HomeCinemaChaitra kottoru: ಸಂಸಾರಕ್ಕೆ ಬೇಸತ್ತು ಸನ್ಯಾಸಿಯಾದ್ರಾ ನಟಿ…! ಚೈತ್ರಾ ಕೊಟೂರು ಹೇಳ್ತಿರೋದೇನು ಗೊತ್ತಾ…?!

Chaitra kottoru: ಸಂಸಾರಕ್ಕೆ ಬೇಸತ್ತು ಸನ್ಯಾಸಿಯಾದ್ರಾ ನಟಿ…! ಚೈತ್ರಾ ಕೊಟೂರು ಹೇಳ್ತಿರೋದೇನು ಗೊತ್ತಾ…?!

- Advertisement -

ಮದುವೆಯಾಗಿ ಹೊಸ ಬದುಕಿಗೆ ಕಾಲಿಟ್ಟ ದಿನವೇ ದೂರವಾದ ಪತಿ ಹಾಗೂ ಅದರೊಂದಿಗೆ ಸೃಷ್ಟಿಯಾದ ಕೋಲಾಹಲದಿಂದ ಬಿಗ್ ಬಾಸ್ ಸ್ಪರ್ಧಿ ಹಾಗೂ ನಟಿ ಚೈತ್ರಾ ಕೊಟೂರು ಬೇಸತ್ತು ಹೋಗಿದ್ದರು. ಆತ್ಮಹತ್ಯೆಗೂ ಯತ್ನಿಸಿದ್ದ ನಟಿ ಸದ್ಯ ಮನಃಶಾಂತಿಗಾಗಿ ಸನ್ಯಾಸದ ಮೊರೆ  ಹೋದ್ರಾ? ಇಲ್ಲಿದೆ ಡಿಟೇಲ್ಸ್.

ನಟಿ,ಬಿಗ್ ಬಾಸ್ ಸ್ಪರ್ಧಿ,ರಂಗಕಲಾವಿದೆ ಚೈತ್ರಾ ಕೊಟೂರು ಸಂಸಾರದ ಸಂಕಷ್ಟಕ್ಕೆ ಬೇಸತ್ತು ಸನ್ಯಾಸದ ಮೊರೆ ಹೋದ್ರು ಅನ್ನೋ ಸಂಗತಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆ ಹುಟ್ಟುಹಾಕಿತ್ತು. ಚೈತ್ರಾ ಓಶೋ ಧ್ಯಾನ ಮಂದಿರದಲ್ಲಿ ಮಾಡುತ್ತಿರುವ ನೃತ್ಯ ಹಾಗೂ ಪೋಟೋಗಳನ್ನು ಮುಂದಿಟ್ಟುಕೊಂಡು ಚೈತ್ರಾ ಸನ್ಯಾಸ ಸ್ವೀಕರಿಸಿದ್ದರು ಎನ್ನಲಾಗಿತ್ತು.

ಇದಕ್ಕೆ ಪೂರಕ ಎಂಬಂತೆ ಚೈತ್ರಾ ಓಶೋ ಧ್ಯಾನ ಮಂದಿರಕ್ಕೆ ಭೇಟಿ ನೀಡಿದ್ದಲ್ಲದೇ, ತಮ್ಮ ಹೆಸರು ಬದಲಾಯಿಸಿಕೊಂಡಿರುವುದರ ಮಾಹಿತಿ ನೀಡಿದ್ದರು.  ಮಾ ಪ್ರಜ್ಞಾ ಭಾರತಿ ಎಂದು ಗುರುಗಳು ನಾಮಕರಣ ಮಾಡಿದ್ದಾರೆ ಎಂದು ಆಶ್ರಮವಾಸಿಯಂತೆ ಪೋಟೋಕ್ಕೆ ಪೋಸ್ ನೀಡಿದ್ದರು.

ಈ ಪೋಟೋ ವೈರಲ್ ಆಗುತ್ತಿದ್ದಂತೆ ಚೈತ್ರಾ ಸನ್ಯಾಸ ಸ್ವೀಕರಿಸಿದ್ದಾರೆ ಎಂಬ ಚರ್ಚೆ ಮಾಧ್ಯಮಗಳಲ್ಲಿಆರಂಭವಾಗಿತ್ತು. ಅಭಿಮಾನಿಗಳು ವೈಯಕ್ತಿಕ ಜೀವನದ ದುಃಖಗಳನ್ನು ಮರೆಯಲು ಚೈತ್ರಾ ಸನ್ಯಾಸ ಸ್ವೀಕರಿಸಿದ್ದಾರೆ ಎಂದು ಮಾತನಾಡಲಾರಂಭಿಸಿದ್ದರು.

ಈ ಹೇಳಿಕೆಗಳಿಗೆ ಈಗ ನಟಿ ಚೈತ್ರಾ ಸ್ವತಃ ಸ್ಪಷ್ಟನೆ ನೀಡಿದ್ದು, ಓಶೋ ಸನ್ಯಾಸ ದೀಕ್ಷೆ ಎಂದರೇ ಎಲ್ಲವನ್ನು ತ್ಯಜಿಸುವುದಲ್ಲ.  ಮಠವಂತೂ ಅಲ್ಲವೇ ಅಲ್ಲ. ಎಲ್ಲದರೊಳಗೆ ಇದ್ದುಕೊಂಡು  ಬದುಕನ್ನು ಹೆಚ್ಚು  ಸಂತೋಸಮಯವಾಗಿ ಅರ್ಥಪೂರ್ಣವಾಗಿ ಬದುಕುವುದು ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ.

ಇದನ್ನೂ ಓದಿ : ನೀವು ಕೆಟ್ಟವರಲ್ಲ…. ಎನ್ನುತ್ತಲೇ ಬ್ಯಾಕ್ ಲೆಸ್ ಪೋಸ್ ಕೊಟ್ಟ ಶ್ರೀಲಂಕಾ ಬೆಡಗಿ…!!

ಇದರಿಂದ ಚೈತ್ರಾ ಸಂಸಾರ ಬಿಟ್ಟು ಸನ್ಯಾಸದ ಮೊರೆ ಹೋದ್ರು ಎಂಬ ಚರ್ಚೆಗಳಿಗೆ ಪೂರ್ಣವಿರಾಮ ಬಿದ್ದಿದೆ.

https://m.facebook.com/story.php?story_fbid=4152660641449225&id=100001159898076

ಕಳೆದ ಏಪ್ರಿಲ್ ನಲ್ಲಿ ಚೈತ್ರಾ ತಮ್ಮ ಪ್ರೇಮಿ ನಾಗಾರ್ಜುನ್ ಅವರೊಂದಿಗೆ ಬೆಂಗಳೂರಿನ ದೇವಾಲಯದಲ್ಲಿ ಸರಳವಾಗಿ ವಿವಾಹವಾಗಿದ್ದರು. ಆದರೆ ಬಳಿಕ ನಾಗಾರ್ಜುನ್ ಕುಟುಂಬ ಚೈತ್ರಾ ಫ್ಯಾಮಿಲಿ ನಡುವೆ,ಗಲಾಟೆ ಹೊಡೆದಾಟ ನಡೆದು ಮದುವೆ ಮುರಿದು ಬಿದ್ದಿತ್ತು. ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದ ಚೈತ್ರಾ ಈಗ ಆಧ್ಯಾತ್ಮದ ಕಡೆ ವಾಲಿದ್ದಾರೆ.

RELATED ARTICLES

Most Popular