ಸೋಮವಾರ, ಏಪ್ರಿಲ್ 28, 2025
HomeCinema"ನಾನು ಒಳ್ಳೆ ಹುಡುಗಿಯಲ್ಲ, ದಯಾಮರಣ ಕೊಡಿ" ಅಂತಿರೋದ್ಯಾಕೆ ನಟಿ ಜಯಶ್ರೀ

“ನಾನು ಒಳ್ಳೆ ಹುಡುಗಿಯಲ್ಲ, ದಯಾಮರಣ ಕೊಡಿ” ಅಂತಿರೋದ್ಯಾಕೆ ನಟಿ ಜಯಶ್ರೀ

- Advertisement -

ಬೆಂಗಳೂರು : ಸ್ಯಾಂಡಲ್ ವುಡ್ ನಟಿ, ಬಿಗ್ ಬಾಸ್ ಖ್ಯಾತಿ ಜಯಶ್ರೀ ರಾಮಯ್ಯ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ಮೂರು ದಿನಗಳ ಹಿಂದೆಯಷ್ಟೇ ಆತ್ಮಹತ್ಯೆಗೆ ಯತ್ನಿಸಿದ್ದ ನಟಿ ಜಯಶ್ರೀ ಇದೀಗ ಫೇಸ್ ಬುಕ್ ಲೈವ್ ನಲ್ಲಿ ತನ್ನ ನೋವನ್ನ ಹಂಚಿಕೊಂಡಿದ್ದಾರೆ. ನಾನು ಒಳ್ಳೆಯ ಹುಡುಗಿಯಲ್ಲ, ನನಗೆ ದಯಾಮರಣ ಕೊಡಿ ಅಂತಾ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಜಯಶ್ರೀ ಅವರ ಅಜ್ಜ ಹಾಗೂ ಅಜ್ಜನಿಗೆ ಸೇರಿದ ಆಸ್ತಿಯ ಕುರಿತು ಸಮಸ್ಯೆಯಿದೆ. ನನಗೆ ಕುಟುಂಬಸ್ಥರೇ ಮೋಸ ಮಾಡಿದ್ದಾರೆ. ಚಿಕ್ಕ ವಯಸ್ಸಲ್ಲಿ ನನ್ನ ಜೀವನದಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ. ನನ್ನಿಂದ ಅದ್ಯಾವುದನ್ನೂ ಮರೆಯಲು ಸಾಧ್ಯವಾಗುತ್ತಿಲ್ಲ. ಫೇಸ್ ಬುಕ್ ನಲ್ಲಿ ಕೆಟ್ಟದಾಗಿ ಕಾಮೆಂಟ್ಸ್ ಮಾಡುತ್ತಿದ್ದಾರೆ. ಇದು ತನಗೆ ನೋವನ್ನು ತರಿಸಿದೆ.

ನಾನು ಹಣಕ್ಕೆ ಇಷ್ಟಪಟ್ಟಿಲ್ಲ ಯಾರ ಜೊತೆಯೂ ಧನಸಹಾಯ ಕೇಳಿಲ್ಲ. ಸುದೀಪ್​ ಸರ್​ ಹತ್ತಿರವೂ ಆರ್ಥಿಕ ಸಹಾಯವನ್ನು ಕೇಳಿಲ್ಲ. ನನಗೆ ಹಣದ ಸಮಸ್ಯೆ ಏನೂ ಇಲ್ಲ. ನನಗೀಗ ಬೇಕಾಗಿರುವುದು ಒಂದೇ ಅದು ನನ್ನ ಸಾವು. ನಾನು ತುಂಬಾ ಖಿನ್ನತೆಯಲ್ಲಿದ್ದೇನೆ. ನನ್ನ ಕೈಯಲ್ಲಿ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಜಯಶ್ರೀಯವರು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ ಬೆನ್ನಲ್ಲೇ ಹಲವರು ಸಮಾಧಾನ ಮಾಡುವ ಕಾರ್ಯವನ್ನು ಮಾಡುತ್ತಿದ್ದಾರೆ.

https://www.facebook.com/jayshreeramaiah6/videos/2585013688403249
Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular