ಹೊಸಬರ “ಥಗ್ಸ್‌ ಆಫ್‌ ರಾಮಘಡ” ಟ್ರೇಲರ್‌ಗೆ ಮೆಚ್ಚುಗೆ ಸೂಚಿಸಿದ ಡಾಲಿ ಧನಂಜಯ್

ಸ್ಯಾಂಡಲ್‌ವುಡ್‌ನಲ್ಲಿ ಹೊಸಬರಿಗೆ ಅವಕಾಶಗಳನ್ನು ಕಲ್ಪಿಸುವುದರ ಜೊತೆಗೆ ಮುಂದುವರೆಯುವಂತೆ ಸ್ಟಾರ್‌ ನಟರು ಬೆನ್ನನ್ನು ತಟ್ಟಿ ಹುರಿದುಂಬಿಸುತ್ತಿದ್ದಾರೆ. ಅದೇ ಹೊಸಬರನು ಒಳಗೊಂಡ “ಥಗ್ಸ್‌ ಆಫ್‌ ರಾಮಘಡ” ಸಿನಿಮಾದ ಟ್ರೇಲರ್‌ಗೆ (Thugs of Ramaghada Movie) ಕನ್ನಡ ಸಿನಿರಂಗದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಿನಿಮಾವು ಜನವರಿ 6ರಂದು ತೆರೆಗೆ ಅಪ್ಪಳಿಸಲಿದ್ದು, ಅದಕ್ಕೆ ಬೇಕಾದ ಸಕಲ ಸಿದ್ಧತೆಯನ್ನು ಸಿನಿತಂಡ ಮಾಡಿಕೊಂಡಿದೆ.

ಈಗಾಗಲೇ ಸಿನಿಮಾದ ಟ್ರೇಲರ್‌ಗೆ ಖ್ಯಾತ ನಟ ಧನಂಜಯ್‌ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಇನ್ನೂ ಈ ಸಿನಿಮಾವನ್ನು ಕಾರ್ತಿಕ್‌ ಮಾರಲಭಾವಿ ನಿರ್ದೇಶಿಸಿದ್ದಾರೆ. ಇನ್ನೂ ಈ ಸಿನಿಮಾ ಕುರಿತು ನಿರ್ದೇಶಕರು, “ಈ ಸಿನಿಮಾಕ್ಕಾಗಿ ಒಂದೂ ವರೆ ವರ್ಷದಿಂದ ಇಡೀ ತಂಡ ಕಷ್ಟ ಪಟ್ಟಿದ್ದೀವೆ. ಸಿನಿಮಾ ಜನವರಿ 6ಕ್ಕೆ ತೆರೆ ಕಾಣಲಿದೆ. ಟ್ರೇಲರ್‌ ನೋಡಿ ಯಾಕಿಷ್ಟು ವೈಲೆನ್ಸ್‌ ಅನ್ನೋರಿಗೆ ಸಿನಿಮಾ ನೋಡಿದ ಮೇಲೆ ವೈಲೆನ್ಸ್‌ ಯಾಕೆ ಎಂದು ಅರ್ಥವಾಗುತ್ತದೆ. ನಾನು ಯಾದಗಿರಿಯ ಪುಟ್ಟ ಹಳ್ಳಿಯಿಂದ ಬಂದವನು. ಧನಂಜಯ್‌ ಅವರ ಜಯನಗರ ೪ನೇ ಬ್ಲಾಕ್‌ ಕಿರುಚಿತ್ರ ನೋಡಿ ಸ್ಪೂರ್ತಿ ಪಡೆದು ಸಿನಿರಂಗಕ್ಕೆ ಬಂದೆ. ನಾನು ಮೊದಲು ಕಿರುಚಿತ್ರ ನಿರ್ದೇಶನ ಮಾಡುವುದಕ್ಕೆ ಪ್ರಾರಂಭಿಸಿದೆ. ಇದು ನನ್ನ ಮೊದಲ ನಿರ್ದೇಶನದ ಸಿನಿಮಾ. ಊರಿನಲ್ಲಿ ನಮ್ಮ ಹಿರಿಯರು ಹಿಂದೆ ನಡೆದ ಘಟನೆ ಬಗ್ಗೆ ಕಥೆ ಹೇಳುತ್ತಿದ್ದರು. ಆ ಘಟನೆ ಆಧಾರವಾಗಿಟ್ಟುಕೊಂಡು ಕಥೆ ಹಣೆದು ಅದಕ್ಕೊಂದಿಷ್ಟು ಸಿನಿಮೇಟಿಕ್‌ ಟಚ್‌ ಕೊಟ್ಟಿದ್ದೇನೆ” ಎಂದು ಸಿನಿಮಾದ ಬಗ್ಗೆ ಹಂಚಿಕೊಂಡಿದ್ದಾರೆ.

ಸದ್ಯ ನೈಜ ಘಟನೆಯಾಧರಿತ ಈ ಸಿನಿಮಾದಲ್ಲಿ ಚಂದನ್‌ ರಾಜ್‌, ಅಶ್ವಿನಿ ಹಾಸನ್‌, ಮಹಾಲಕ್ಷ್ಮೀ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರೆ, ಸೂರ್ಯ ಕಿರಣ್‌, ಪ್ರಭು ಹೊಸದುರ್ಗ, ಟೈಗರ್‌ ಗಂ, ಜಗದೀಶ್‌, ರಾಘವೇಂದ್ರ, ವಿಶಾಲ್‌ ಪಾಟೀಲ್‌, ರವಿ ಸಾಲಿಯನ್‌, ಲೋಕೇಶ್‌ ಗೌಡ, ಭೀಷ್ಮ, ಸುಧೀನ್‌ ನಾಯರ್‌ ಸೇರಿದಂತೆ ಹಲವು ರಂಗಭೂಮಿ ಕಲಾವಿದರನ್ನು ಒಳಗೊಂಡ ಬಹು ತಾರಾಂಗಣ ಈ ಸಿನಿಮಾಕ್ಕೆ ಇದೆ.

ಈ ಸಿನಿಮಾದ ನಾಯಕ ನಟ ಚಂದನ್‌ ರಾಜ್‌, ” ಈ ಸಿನಿಮಾದ ಹಿಂದೆ ಇಡೀ ಸಿನಿತಂಡದ ಪರಿಶ್ರಮವಿದೆ. ನೈಜ ಕಥೆಯಾಧರಿತ ಸಿನಿಮಾವಾಗಿದ್ದರಿಂದ ವೈಲೆನ್ಸ್‌ ಇದೆ. ಮುಂದಿನ ತಿಂಗಳಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾ ನೋಡಿ ಎಲ್ಲರೂ ಪ್ರೋತ್ಸಾಹಿಸಿ, ಸಿನಿಮಾ ಗೆದ್ದರೆ ನಮ್ಮೆಲ್ಲರ ಕನಸು ನನಸಾಗುತ್ತದೆ” ಎಂದು ಹೇಳಿದ್ದಾರೆ. ಈ ಸಿನಿಮಾದ ಇನ್ನೊರ್ವ ನಟನಾದ ಅಶ್ವಿನ್‌ ಹಾಸನ್, “ಈ ಸಿನಿಮಾ ಕಥೆಯನ್ನು ಲಾಕ್‌ಡೌನ್‌ನಲ್ಲಿ ಕೇಳಿದ್ದು, ಯಾವುದೇ ಸಿನಿಮಾವಿರಲಿ, ಪುಟ್ಟ ಪಾತ್ರವಿರಲಿ ದೊಡ್ಡ ಪಾತ್ರವಿರಲಿ ಎಲ್ಲಾ ಪಾತ್ರಗಳಲ್ಲಿ ಇಲ್ಲಿಯವರೆಗೂ ಮಾಡಿಕೊಂಡು ಬಂದಿದ್ದೇನೆ. ಇದರಲ್ಲಿ ಲೀಡ್‌ರೋಲ್‌ನಲ್ಲಿ ನಟಿಸಿದ್ದು, ಸ್ಯಾಮ್ಯುಯಲ್‌ ಪಾತ್ರಕ್ಕೆ ಬಣ್ಣ ಹಚ್ಚಿದ್ದೇನೆ. ಲೀಡ್‌ರೋಲ್‌ ಅಷ್ಟು ಸುಲಭವಲ್ಲ, ನಿರ್ದೇಶಕರು ನನ್ನ ಮೇಲೆ ನಂಬಿಕೆ ಇಟ್ಟು ಪಾತ್ರವನ್ನು ನೀಡಿದ್ದಾರೆ. ಅವರಿಗೆ ತೃಪ್ತಿಯಾಗುವ ಹಾಗೆ ನಟಿಸಿದ್ದೇನೆ. ಈ ಸಿನಿಮಾ ನಮ್ಮೆಲ್ಲರ ಕನಸು, ಗೆಲ್ಲಲೇಬೇಕು ಎಂದು ಸಿನಿಮಾವನ್ನು ಮಾಡಿದ್ದೇವೆ” ಎಂದು ಮಾತನಾಡಿದ್ದಾರೆ.

ಇದನ್ನೂ ಓದಿ : Shah Rukh Khan : ಬೇಶರಂ ರಂಗ್​ ವಿವಾದ : ಶಾರೂಕ್​​ ಖಾನ್​​ರನ್ನು ಜೀವಂತ ಸುಡುವ ಎಚ್ಚರಿಕೆ ನೀಡಿದ ಸ್ವಾಮೀಜಿ

ಇದನ್ನೂ ಓದಿ : ಜಾಕ್ವೆಲಿನ್ ಫರ್ನಾಂಡೀಸ್ ವಿದೇಶಕ್ಕೆ ತೆರಳಲು ಅನುಮತಿ : ನಿರ್ದೇಶನಕ್ಕೆ ಇಡಿಗೆ ನ್ಯಾಯಾಲಯದ ಸೂಚನೆ

ಇದನ್ನೂ ಓದಿ : Besharam Rang:‘ಬೇಷರಂ ರಂಗ್​’ ವಿರುದ್ಧ ದನಿಯೆತ್ತಿದ್ದ ಮತ್ತೊಬ್ಬ ಬಿಜೆಪಿ ನಾಯಕ : ಸಿನಿಮಾ ರಿಲೀಸ್​ ಮಾಡಿದ್ರೆ ಪ್ರತಿಭಟನೆಯ ಎಚ್ಚರಿಕೆ

ಕಾರ್ತಿಕ್‌ ಮಾರಲಭಾವಿ ನಿರ್ದೇಶಿಸಿರುವ “ಥಗ್ಸ್‌ ಆಫ್‌ ರಾಮಘಡ” ಸಿನಿಮಾಕ್ಕೆ ಭಾರತ್‌ ಟಾಕೀಸ್‌ನಡಿ ಜೈ ಕುಮಾರ್‌ ಮತ್ತು ಕೀರ್ತಿ ರಾಜ್‌ ನಿರ್ಮಾಣ ಮಾಡಿದ್ದಾರೆ. ಇನ್ನೂ ಈ ಸಿನಿಮಾಕ್ಕೆ ಮನು ದಾಸಪ್ಪ ಛಾಯಾಗ್ರಹಣ ಹಾಗೂ ಶ್ರೀಧರ್‌ ಸಂಕಲನ ಹಾಗೂ ವಿವೇಕ್‌ ಚಕ್ರವರ್ತಿ ಸಂಗೀತ ನಿರ್ದೇಶನವನ್ನು ನೀಡಿದ್ದಾರೆ. ಇನ್ನೂ ಈ ಸಿನಿಮಾದಲ್ಲಿ ನಾಲ್ಕು ಹಾಡುಗಳಿದ್ದು, ಅದಕ್ಕೆ ರಾಜೇಶ್‌ ಕೃಷ್ಣನ್‌, ಶಶಾಂಕ್‌ ಶೇಷಗಿರಿ, ಅನುರಾಧ ಭಟ್‌ ಈ ಸಿನಿಮಾದ ಹಾಡುಗಳಿಗೆ ತಮ್ಮ ಮಧುರ ಕಂಠದಿಂದ ದನಿಯಾಗಿದ್ದಾರೆ.

Thugs of Ramaghada Movie: Dolly Dhananjay appreciates the trailer of the new movie “Thugs of Ramaghada”.

Comments are closed.