Kundapura 4 Arrest : ಕುಂದಾಪುರದಲ್ಲಿ ಇಸ್ಪೀಟ್ ಆಡುತ್ತಿದ್ದ 4 ಮಂದಿಯ ಬಂಧನ

ಕುಂದಾಪುರ : Kundapura 4 Arrest : ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಆಟವಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಸಬಾ ಗ್ರಾಮದ ಮೀನು ಮಾರುಕಟ್ಟೆಯ ರಸ್ತೆಯಲ್ಲಿರುವ ನಾಗಬೊಬ್ಬರ್ಯ ದೇವಸ್ಥಾನದ ಬಳಿಯಲ್ಲಿ ನಡೆದಿದೆ. ಹಂಗೂರು ಗ್ರಾಮದ ನೇರಂಬಳ್ಳಿಯ ಸತೀಶ್ (35 ವರ್ಷ), ಕಸಬಾ ಗ್ರಾಮದ ಗಣೇಶ್ 32 ವರ್ಷ, ಕಸಬಾ ಗ್ರಾಮದ ಅನಿಲ್ ಡಿʼಸೋಜಾ (43 ವರ್ಷ) ಹಾಗೂ ಸಂದೇಶ (31 ವರ್ಷ) ಎಂಬವರೇ ಬಂಧಿತರರು.

ಕ್ರೈಂ ಪಿಎಸ್ ಐ ಪ್ರಸಾದ್ ಕುಮಾರ್ ಅವರು ರೌಂಡ್ಸ್ ನಲ್ಲಿ ಇರುವ ವೇಳೆಯಲ್ಲಿ ಕುಂದಾಪುರ ತಾಲೂಕು ಕುಂದಾಪುರ ಕಸಬಾ ಗ್ರಾಮದ ಮೀನು ಮಾರ್ಕೆಟ್ ರಸ್ತೆಯಲ್ಲಿರುವ ನಾಗ ಬೊಬ್ಬರ್ಯ ದೇವಸ್ಥಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಎಂಬ ಜುಗಾರಿ ಆಟ ಆಡುತ್ತಿರುವ ಕುರಿತು ಮಾಹಿತಿ ದೊರೆತಿದೆ. ಕೂಡಲೇ ತಮ್ಮ ಇಲಾಖೆಯ ಸಿಬ್ಬಂದಿಗಳೊಂದಿಗೆ ಸಂಜೆಯ ವೇಳೆಯಲ್ಲಿ ದಾಳಿ ನಡೆಸಿದ ಸಂದರ್ಭದಲ್ಲಿ ಇಸ್ಪೀಟು ಆಟವಾಡುತ್ತಿದ್ದು, ಹಣವನ್ನು ಪಣಕ್ಕಿಟ್ಟು ಅಂದರ್ ಬಾಹರ್ ಆಟವಾಡುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಸತೀಶ್, ಗಣೇಶ್, ಅನಿಲ್ ಡಿʼಸೋಜಾ ಹಾಗೂ ಸಂದೇಶ ಎಂಬವರನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ನಂತರ ಪೊಲೀಸರು ಅವರನ್ನು ವಿಚಾರಣೆ ನಡೆಸಿದ ವೇಳೆಯಲ್ಲಿ ತಾವು ಇಸ್ಪೀಟು ಆಟದಲ್ಲಿ ಹಣವನ್ನು ಪಣಕ್ಕಿಟ್ಟು ಜೂಜಾಟ ಆಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕುಂದಾಪುರ ಠಾಣೆಯ ಪೊಲೀಸರು ಆರೋಪಿಗಳ ವಿರುದ್ದ 87ಕೆಪಿ ಆಕ್ಟ್ ನಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಅಲ್ಲದೇ ಆರೋಪಿಗಳಿಂದ ಇಸ್ಪೀಟು ಜುಗಾರಿ ಆಟಕ್ಕೆ ಉಪಯೋಗಿಸಿದ 2140ರೂ. ನಗದು, ಹಳೆಯ ದಿನಪತ್ರಿಕೆ , 52 52 ಇಸ್ಪೀಟು ಎಲೆಗಳು ಇವುಗಳನ್ನು ಸ್ವಾಧೀನಪಡಿಸಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : Bail granted to president: ಉಡುಪಿಯ ಕಮಲಾಕ್ಷಿ ಸೊಸೈಟಿಯ ಅವ್ಯವಹಾರ ಪ್ರಕರಣ : ಅಧ್ಯಕ್ಷನಿಗೆ ಜಾಮೀನು ಮಂಜೂರು

ಇದನ್ನೂ ಓದಿ : Murder like Drishyam movie: ದೃಶ್ಯಂ ಸಿನಿಮಾ ರೀತಿಯಲ್ಲಿ ಪತಿಯನ್ನೇ ಕೊಂದ ಪತ್ನಿ: ಪೊಲೀಸರು ಪ್ರಕರಣ ಬೇಧಿಸಿದ್ದು ರೋಚಕ

ಇದನ್ನೂ ಓದಿ : Quarantine cancels: ವಿದೇಶಿ ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯ ಆದೇಶ ಹಿಂಪಡೆದ ಆರೋಗ್ಯ ಇಲಾಖೆ

Arrest of 4 people who were playing cards in Kundapura

Comments are closed.