ಬೆಂಗಳೂರು : ಬ್ಯಾಡರಹಳ್ಳಿಯಲ್ಲಿ ನಡೆದಿರುವ ಒಂದೇ ಮನೆಯ ಐವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಮಾಲೀಕ ಶಂಕರ್ಗೆ ಇದೀಗ ಬಂಧನದ ಭೀತಿ ಎದುರಾಗಿದೆ. ಆತ್ಮಹತ್ಯೆ ಪ್ರಚೋದನೆ ಪ್ರಕರಣದ ಅಡಿಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿರುವ ಶಾಸಕ ಪತ್ರಿಕೆಯ ಸಂಪಾದಕ ಶಂಕರ್ ಮನೆಯಲ್ಲಿ ಶಂಕರ್ ಅವರ ಎರಡನೇ ಮಗಳು ಸಿಂಧೂರಾಣಿ ಅವರ 9 ತಿಂಗಳ ಮಗುವನ್ನು ಕೊಲೆಗೈದು, ನಂತರ ಪತ್ನಿಭಾರತಿ (50 ವರ್ಷ), ಮಗಳು ಸಿಂಚನ(33 ವರ್ಷ), 2 ನೇ ಮಗಳು ಸಿಂಧುರಾಣಿ (30 ವರ್ಷ), ಮಗ ಮಧುಸಾಗರ್ (27 ವರ್ಷ) ಮನೆಯಲ್ಲಿ ಸಾಮೂಹಿಕವಾಗಿ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದರು. ಆತ್ಮಹತ್ಯೆಯ ಬೆನ್ನಲ್ಲೇ ಸಾವಿಗೆ ಮನೆ ಮಾಲೀಕ ಶಂಕರ್ ಕಾರಣ ಅನ್ನೋದು ಬಯಲಿಗೆ ಬಂದಿತ್ತು. ಸ್ವತಃ ಮಕ್ಕಳಾದ ಸಿಂಚನ, ಸಿಂಧೂರಾಣಿ ಹಾಗೂ ಮಧುಸಾಗರ್ ಪ್ರತ್ಯೇಕವಾಗಿ ಡೆತ್ನೋಟ್ ಬರೆದಿಟ್ಟಿದ್ದರು. ಅದ್ರಲ್ಲೂ ಮಧುಸಾಗರ್ ತನ್ನ ತಂದೆಗೆ ಐವರು ಮಹಿಳೆಯರ ಜೊತೆಗೆ ಅನೈತಿಕ ಸಂಬಂಧವಿದೆ ಅಂತಾ ಗಂಭೀರ ಆರೋಪವನ್ನೂ ಮಾಡಿದ್ದಾನೆ.
ಮಗ ಮಧುಸಾಗರ್ ಹಾಗೂ ಶಂಕರ್ ನಡುವೆ ನಡೆದಿರುವ ಮೊಬೈಲ್ ಮಸೇಜ್ ಸಂಭಾಷಣೆಯೂ ಈಗಾಗಲೇ ಪೊಲೀಸರಿಗೆ ಲಭ್ಯವಾಗಿದ್ದು, ಈ ವೇಳೆಯಲ್ಲಿ ಮಗ ಮಧುಸಾಗರ್ ತಂದೆಯ ವಿರುದ್ದ ಹರಿಹಾಯ್ದಿರುವುದು ಕಂಡು ಬಂದಿದೆ. ಅಲ್ಲದೇ ಶಂಕರ್ ಕುಟುಂಬಸ್ಥರು ಈ ಹಿಂದೆಯೇ ಪೊಲೀಸ್ ಠಾಣೆಯಲ್ಲಿ ಶಂಕರ್ ವಿರುದ್ದ ಪ್ರಕರಣ ದಾಖಲು ಮಾಡಲು ಮುಂದಾಗಿದ್ದರು. ಪೊಲೀಸರು ಮನೆಯಲ್ಲಿಯೇ ಕುಳಿತು ಸಮಸ್ಯೆ ಪರಿಹಾರ ಮಾಡಿಕೊಳ್ಳುವಂತೆಯೂ ಸಲಹೆ ನೀಡಿದ್ದರು ಎನ್ನಲಾಗುತ್ತಿದೆ.
ಇದನ್ನೂ ಓದಿ : ನನ್ನಪ್ಪ ಕಾಮುಕ, ಕುಡುಕ, ಸಹೋದರಿಯರ ಬಾಳು ಹಾಳು ಮಾಡಿದ : ಮಧುಸಾಗರ್ ಗಂಭೀರ ಆರೋಪ
ಮನೆಯಲ್ಲಿ ಮಹಜರು ಕಾರ್ಯದ ವೇಳೆಯಲ್ಲಿ ಸಿಕ್ಕಿರುವ ಲ್ಯಾಪ್ಟಾಪ್, ಮೊಬೈಲ್ನಲ್ಲಿರುವ ಮೆಸೇಜ್ಗಳನ್ನು ಈಗಾಗಲೇ ಪೊಲೀಸರು ರಿಟ್ರೀವ್ ಮಾಡಿದ್ದಾರೆ. ತನ್ನ ತಂದೆಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿವುದಾಗಿಯೂ ಡೆತ್ನೋಟ್ನಲ್ಲಿ ಬರೆದಿಟ್ಟಿದ್ದಾರೆ. ಇದೇ ಕಾರಣಕ್ಕೆ ಶಂಕರ್ ಅವರನ್ನು ಪೊಲೀಸರು ಈಗಾಗಲೇ ಮೂರು ಬಾರಿ ಕರೆದು ವಿಚಾರಣೆಯನ್ನು ನಡೆಸಿದ್ದಾರೆ. ಆದರೆ ಶಂಕರ್ ತಾನು ಮಕ್ಕಳಿಗೆ ಯಾವುದೇ ರೀತಿಯಲ್ಲಿಯೂ ಕಿರುಕುಳವನ್ನು ನೀಡಿಲ್ಲ. ತನ್ನ ಪತ್ನಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, ಆಕೆಗೆ ಚಿಕಿತ್ಸೆಯನ್ನು ಕೊಡಿಸಲಾಗುತ್ತಿತ್ತು. ಮಕ್ಕಳ ಮನಸ್ಸನ್ನು ತಾಯಿ ಕೆಡಿಸಿದ್ದಳು ಅಂತಾನೂ ಹೇಳಿಕೆಯನ್ನು ನೀಡಿದ್ದಾನೆ.
ಆದ್ರೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಬ್ಯಾಡರಹಳ್ಳಿ ಠಾಣೆಯ ಪೊಲೀಸರು ಸಿಕ್ಕಿರುವ ಸಾಕ್ಷಾಧಾರಗಳ ಆಧಾರದ ಮೇಲೆ ಕಾನೂನು ತಜ್ಞರ ಸಲಹೆಯನ್ನು ಪಡೆದುಕೊಂಡಿದ್ದಾರೆ. ಮೇಲ್ನೋಟಕ್ಕೆ ಶಂಕರ್ ಅವರು ತನ್ನ ಕುಟುಂಬಕ್ಕೆ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಶಂಕರ್ ವಿರುದ್ದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಐಪಿಸಿ ಸೆಕ್ಷನ್ 306 ರ ಅಡಿಯಲ್ಲಿ ಪ್ರಕರಣ ದಾಖಲು ಮಾಡುವ ಸಾಧ್ಯತೆಯಿದೆ.
ಇದನ್ನೂ ಓದಿ : ಐವರ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : 3 ಡೆತ್ ನೋಟ್ ಪತ್ತೆ, ಅನೈತಿಕ ಸಂಬಂಧಕ್ಕೆ ಬಲಿಯಾತ್ತ ಕುಟುಂಬ !
ಒಂದೊಮ್ಮೆ ಶಂಕರ್ ವಿರುದ್ದ ಪ್ರಕರಣ ದಾಖಲಾದ್ರೆ ಬಂಧನಕ್ಕೊಳಗಾಗುವುದು ಖಚಿತ. ಇನ್ನೊಂದೆಡೆ ಶಂಕರ್ ಅಳಿಯಂದಿರ ವಿರುದ್ದವೂ ಮಕ್ಕಳು ಡೆತ್ನೋಟ್ನಲ್ಲಿ ಆರೋಪ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ದವೂ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲೀಗ ಶಂಕರ್ ಹಾಗೂ ಇಬ್ಬರೂ ಅಳಿಯಂದಿರಿಗೆ ಬಂಧನದ ಭೀತಿ ಎದುರಾಗಿದೆ.
ಇದನ್ನೂ ಓದಿ : ಪತ್ರಿಕೆ ಸಂಪಾದಕನ ಕುಟುಂಬದ ಐವರು ಆತ್ಮಹತ್ಯೆ : ಐಎಎಸ್ ಕನಸು ಕಂಡವರು ಸಾವಿಗೆ ಶರಣಾಗಿದ್ಯಾಕೆ
( Byadarahalli’s five suicide case: Fear of arrest for Shankar )