Cooker blast: ಯಕ್ಷಗಾನದಲ್ಲೂ ಕುಕ್ಕರ್‌ ಬ್ಲಾಸ್ಟ್ : ಕುಕ್ಕರ್ ನೋಡಿ ಓಡಿ ಹೋದ ಕಲಾವಿದ

ಮಂಗಳೂರು : (Cooker blast) ಮಂಗಳೂರಿನ ನಾಗುರಿಯಲ್ಲಿ ಆಟೋದಲ್ಲಿ ನಡೆದಿದ್ದ ಕುಕ್ಕರ್ ಬ್ಲಾಸ್ಟ್ ಇದೀಗ ಯಕ್ಷಗಾನದಲ್ಲೂ ಪ್ರತಿಧ್ವನಿಸಿದೆ. ಮಂಗಳೂರಿನಲ್ಲಿ ನಡೆದ ಯಕ್ಷಗಾನ ಪ್ರಸಂಗದಲ್ಲಿ ಹಾಸ್ಯ ಕಲಾವಿದ ತನ್ನ ಚೀಲದಿಂದ ಕುಕ್ಕರ್ ತೆಗೆಯುತ್ತಿದ್ದಂತೆಯೇ ಕಲಾವಿದ ರಂಗಸ್ಥಳವನ್ನು ಬಿಟ್ಟು ಓಡಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗುತ್ತಿದೆ.

ಯಕ್ಷಗಾನ ಕರಾವಳಿಯ ಗಂಡು ಕಲೆ. ಯಕ್ಷಗಾನ ಪ್ರಸಂಗಗಳ ಮೂಲಕ ಸಮಾಜದ ಕಣ್ಣು ತೆರೆಯಿಸುವ ಕಾರ್ಯವನ್ನು ಕಲಾವಿದರು ಮಾಡುತ್ತಿದ್ದಾರೆ. ಜೊತೆಗೆ ಕೆಲವೊಂದು ಘಟನೆಗಳ ಕುರಿತು ವಿಡಂಭನೆಯೂ ನಡೆಯುತ್ತಿದೆ. ಇದೀಗ ಯಕ್ಷಗಾನ ಪ್ರಸಂಗದ ಹಾಸ್ಯ ದೃಶ್ಯದಲ್ಲಿ ಮಂಗಳೂರು ನಗರದಲ್ಲಿ ನಡೆದಿದ್ದ ಕುಕ್ಕರ್ ಬ್ಲಾಸ್ಟ್ (Cooker blast) ಸನ್ನಿವೇಶ ಕಂಡು ಬಂತು. ಹಾಸ್ಯ ಕಲಾವಿದ ಕುಕ್ಕರ್ ತೆಗೆಯುತ್ತಿದ್ದಂತೆಯೇ ಮತ್ತೋರ್ವ ಕಲಾವಿದ ರಂಗಸ್ಥಳ ಬಿಟ್ಟು ಓಡಿದ್ದಾನೆ. ಈ ಸನ್ನಿವೇಶವನ್ನು ನೋಡಿದ ಪ್ರೇಕ್ಷಕರು ನಗೆಗಡಲಲ್ಲಿ ತೇಲಾಡಿದ್ದಾರೆ.

ಮೂಲ್ಕಿ ಬಪ್ಪನಾಡಿನ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯ ಯಕ್ಷಗಾನ ಪ್ರದರ್ಶನ ಮಂಗಳೂರು ನಗರದಲ್ಲಿ ನಡೆದಿದೆ. ಹಾಸ್ಯ ಕಲಾವಿದರಾಗಿರುವ ದಿನೇಶ್ ಕೊಡಪದವು ಅವರು ಚೀಲವೊಂದನ್ನು ಹಿಡಿದು ರಂಗಸ್ಥಳ ಪ್ರವೇಶಿಸಿದ್ದಾರೆ. ಈ ವೇಳೆಯಲ್ಲಿ ಮತ್ತೋರ್ವ ಕಲಾವಿದ ಚೀಲ ಪರಿಶೀಲನೆಗೆ ಮುಂದಾಗಿದ್ದಾನೆ. ಚೀಲದಲ್ಲಿದ್ದ ಒಂದೊಂದೆ ವಸ್ತುಗಳನ್ನು ಕಲಾವಿದ ದಿನೇಶ್ ಕೊಡಪದವು ಹೊರ ತೆಗೆದಿದ್ದಾರೆ. ಅಂತಿಮವಾಗಿ ಹಾಸ್ಯ ಕಲಾವಿದ ಕುಕ್ಕರ್ ಅನ್ನು ಚೀಲದಿಂದ ಹೊರ ತೆಗೆದಿದ್ದಾರೆ. ಈ ವೇಳೆಯಲ್ಲಿ ನೆರೆದಿದ್ದವರು ಮಂಗಳೂರು ಕುಕ್ಕರ್ ಬ್ಲಾಸ್ಟ್ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ : CM Yogi Adityanath : ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಕೃಷ್ಣ ನಗರಿ ಉಡುಪಿಗೆ ಆಗಮನ

ಇದನ್ನೂ ಓದಿ : Kodi Habba 2022 : ಕೊಡಿ‌ಹಬ್ಬದಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ಬೇಡ : ವಿಶ್ವ ಹಿಂದೂ ಪರಿಷತ್ ಆಗ್ರಹ

ಸದ್ಯ ಈ ವಿಡಿಯೋದ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಯಕ್ಷಗಾನ ರಂಗದಲ್ಲಿ ಇಂತಹ ಸನ್ನಿವೇಶಗಳ ತುಣುಕುಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದಕ್ಕೆ ಹೊಸ ಸೇರ್ಪಡೆಯಾಗಿರುವುದು ಕುಕ್ಕರ್ ಬ್ಲಾಸ್ಟ್ ಪ್ರಕರಣ.

https://www.youtube.com/watch?v=tRhWX0epdIE

(Cooker blast) The cooker blast that took place in an auto in Mangalore’s Naguri has now echoed in Yakshagana as well. At the Yakshagana event in Mangalore, the comedian ran away from the stage just as the comedian was taking out the cooker from his bag. Currently, this video is going viral on social media.

Comments are closed.