Father get suicide: ಕುಂದಾಪುರ : ಮಗು ಅನಾರೋಗ್ಯದಿಂದ ಸಾವು, ತಂದೆ ಆತ್ಮಹತ್ಯೆ

ಕುಂದಾಪುರ: (Father get suicide) ತನ್ನ ಮಗು ಅನಾರೋಗ್ಯದಿಂದ ಮೃತಪಟ್ಟಿದ್ದು, ಅದೇ ಚಿಂತೆಯಲ್ಲಿ ಕುಡಿತದ ಚಟ ಹೊಂದಿದ್ದ ವ್ಯಕ್ತಿ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ರವೀಂದ್ರ ಕುಲಾಲ್‌ (33 ವರ್ಷ) ಮೃತ ವ್ಯಕ್ತಿ.

ಕುಂದಾಪುರದ ಹೆಸ್ಕುತ್ತೂರಿನಲ್ಲಿ ಘಟನೆ (Father get suicide) ನಡೆದಿದ್ದು, ಮೃತ ರವೀಂದ್ರ ಕುಲಾಲ್‌ ಅವರ ಮಗು ಹುಟ್ಟಿ ಒಂದೂವರೆ ತಿಂಗಳಿಗೆ ಅನಾರೋಗ್ಯದ ಕಾರಣ ಸಾವನ್ನಪ್ಪುತ್ತದೆ. ಇದೇ ಚಿಂತೆಯಲ್ಲಿ ರವೀಂದ್ರ ಕುಲಾಲ್‌ ಅವರು ಕುಡಿತದ ಚಟವನ್ನು ಬೆಳಸಿಕೊಳ್ಳುತ್ತಾರೆ. ಮಗುವಿನ ಸಾವಿನ ನೋವಿನಲ್ಲಿದ್ದ ರವೀಂದ್ರ ಕುಲಾಲ್‌ ಅವರು ಜೀವನದಲ್ಲಿ ಜಿಗುಪ್ಸೆಗೊಂಡು ಭಾನುವಾರ ಮಧ್ಯಾಹ್ನ ಮೆನಯಲ್ಲಿ ಗಲಾಟೆ ಮಾಡಿ ಮನೆಯವರೆಲ್ಲರನ್ನು ಹೊರಗಡೆ ಕಳುಹಿಸಿ ಮನೆಯ ಬಾಗಿಲು ಹಾಕಿಕೊಂಡಿದ್ದಾರೆ.

ನಂತರದಲ್ಲಿ ಮನೆಯ ಮಾಡಿನ ಜಂತಿಗೆ ಚೂಡಿದಾರ ಶಾಲನ್ನು ಬಳಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮೃತ ವ್ಯಕ್ತಿಯ ಪತ್ನಿ ಶಕಿಲ ಅವರು ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ನಿಂತಿದ್ದ ಕಾರಿಗೆ ಇನ್ನೊಂದು ಕಾರು ಢಿಕ್ಕಿ: ಓರ್ವರಿಗೆ ಗಂಭೀರ ಗಾಯ

ಹೆಬ್ರಿ: ಅತಿವೇಗದಿಂದ ಬಂದ ಕಾರೊಂದು ರಸ್ತೆಬದಿಯಲ್ಲಿ ನಿಂತಿದ್ದ ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದಿದ್ದು, ನಿಂತಿದ್ದ ಕಾರಿನಲ್ಲಿದ್ದ ಓರ್ವ ಮಹಿಳೆಗೆ ತೀವ್ರ ಗಾಯಗಳಾಗಿದ್ದು, ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಹೆಬ್ರಿ ಗ್ರಾಮದ ಸಾಂತೋಳ್ಳಿ ಕ್ರಾಸ್‌ ಬಳಿಯಲ್ಲಿ ನಡೆದಿದೆ. ಕಾರಿನಲ್ಲಿ ಶೇಖರ, ನಂದ್ಯಪ್ಪ ಸುಶೀಲ ಹಾಗೂ ವಿನುತಾ ಎನ್ನುವವರು ಪ್ರಯಾಣಿಸುತ್ತಿದ್ದು, ಸುಶೀಲಾ ಎನ್ನುವವರಿಗೆ ತೀವ್ರ ಗಾಯಗಳಾಗಿವೆ.

ಮುದ್ರಾಡಿ ಕಡೆಯಿಂದ ಕೈಕಂಬ ಕಡೆಗೆ ಬರುತ್ತಿದ್ದ ಕಾರು ರಸ್ತೆಯ ಬದಿಯಲ್ಲಿ ನಿಂತಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಕಾರು ಪಲ್ಟಿಯಾಗಿದ್ದು, ಕಾರಿನಲ್ಲಿದ್ದ ಓರ್ವ ಮಹಿಳೆಗೆ ತೀವ್ರ ಗಾಯಗಳಾಗಿವೆ. ಉಳಿದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ : Inhuman behavior of husband: ಗರ್ಭಿಣಿ ಪತ್ನಿಯನ್ನು ಬೈಕ್ ಗೆ ಕಟ್ಟಿ ಎಳೆದೊಯ್ದ ಪತಿ : ಅಮಾನವೀಯ ವರ್ತನೆಗೆ ಬಾರೀ ಆಕ್ರೋಶ

ಈ ಬಗ್ಗೆ ಸಂದೇಶ ನಾಯ್ಕ ಎನ್ನುವವರು ದೂರು ನೀಡಿದ್ದು, ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Father get suicide: Kundapur: Child dies due to illness, father commits suicide

Comments are closed.