Lorry driver death: ಅನುಮಾನಸ್ಪದ ರೀತಿಯಲ್ಲಿ ಲಾರಿ ಚಾಲಕ ಸಾವು: ಇನ್ನೋರ್ವ ಚಾಲಕನೇ ಕೊಲೆ ಮಾಡಿರುವ ಶಂಕೆ

ಕಾರ್ಕಳ: (Lorry driver death) ಗೇರು ಬೀಜದ ಫ್ಯಾಕ್ಟರಿಯೊಂದಕ್ಕೆ ಗೇರು ಪೂರೈಕೆ ಮಾಡುತ್ತಿದ್ದ ಲಾರಿ ಚಾಲಕನೋರ್ವ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು, ಸಹ ಚಾಲಕನೇ ಆತನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ತಮಿಳುನಾಡು ಮೂಲದ ಮಣಿ (36 ವರ್ಷ) ಎಂಬಾತ ಮೃತ ವ್ಯಕ್ತಿ.

ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಮುಡ್ರಾಲು ಎಂಬಲ್ಲಿ ಇರುವ ಶ್ರೀ ದೇವಿ ಕ್ಯಾಶ್ಯೂ ಫ್ಯಾಕ್ಟರಿಗೆ ಪ್ರತಿವರ್ಷ ತಮಿಳುನಾಡಿನಿಂದ ಗೇರು ಬೀಜ ಲೋಡ್‌ ಬರುತ್ತಿತ್ತು. ಹೀಗೆ ಎಂದಿನಂತೆ ಜ. 30 ರಂದು ಸಂಜೆ ಕೂಡ ಗೇರುಬೀಜದ ಲೋಡ್‌ ಇರುವ ಲಾರಿಗಳು ಬಂದಿದ್ದು, ಅನ್‌ ಲೋಡ್‌ ಮಾಡಿ ಹೋಗಿದ್ದರು. ಆದರೆ ಮತ್ತೆರಡು ಲಾರಿಗಳು ತಡವಾಗಿ ಬಂದಿದ್ದರಿಂದ ಅನ್‌ ಲೋಡ್‌ ಆಗದೆ ಫ್ಯಾಕ್ಟರಿಯ ಬಳಿಯೇ ನಿಂತುಕೊಂಡಿದ್ದವು. ಲಾರಿಗಳ ಚಾಲಕ ಹಾಗೂ ಸಹ ಚಾಲಕರು ಕೂಡ ಅಲ್ಲಿಯೇ ಇದ್ದರು.

ರಾತ್ರಿ ಸುಮಾರು 8:30 ರ ವೇಳೆ ಪ್ರವೀಣ್‌ ಪೂಜಾರಿ ಎನ್ನುವವರು ಫ್ಯಾಕ್ಟರಿಯ ಮೇಲ್ಗಡೆ ಕೆಲಸ ಮಾಡುತ್ತಿದ್ದಾಗ ಲಾರಿ ನಿಲ್ಲಿಸಿದ ಸ್ಥಳದಿಂದ ಜೋರಾಗಿ ಬೊಬ್ಬೆ ಕೇಳಿ ಬಂದಿದೆ. ಹೀಗೆ ಬೊಬ್ಬೆ ಕೇಳಿದಾಗ ಪ್ರವೀಣ್‌ ಪೂಜಾರಿ ಅಲ್ಲಿಗೆ ಹೋಗಿ ನೋಡಿದ್ದಾರೆ. ಈ ವೇಳೆ ಒಂದು ಲಾರಿಯ ಚಾಲಕ ಮಣಿ ಎಂಬಾತ ಲಾರಿಯ ಎದುರುಗಡೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತನ ಎಡ ಕಾಲರ್‌ ಬೋನ್‌ ನ ಬಳಿ ಆಯುಧದಿಂದ ಇರಿದು ಗಾಯಗೊಳಿಸಿ ಕೊಲೆ ಮಾಡಿರುವುದು ತಿಳಿದುಬಂದಿದೆ.

ಇದನ್ನೂ ಓದಿ : Explosion in pharma factory: ಫಾರ್ಮಾ ಫ್ಯಾಕ್ಟರಿಯಲ್ಲಿ ಭಾರಿ ಸ್ಫೋಟ: 1 ಸಾವು, 3 ಮಂದಿಗೆ ಗಾಯ

ಇದನ್ನೂ ಓದಿ : Woman shot dead: ನಡುರಸ್ತೆಯಲ್ಲೇ ಮಹಿಳೆಯ ಗುಂಡಿಕ್ಕಿ ಹತ್ಯೆ

ಅದರಂತೆ ಲಾರಿಯ ಇನ್ನೋರ್ವ ಚಾಲಕ ವೀರಬಾಹು ಹಾಗೂ ಮೃತ ಮಣಿ ಗಲಾಟೆ ಮಾಡಿಕೊಳ್ಳುತ್ತಿದ್ದು, ಯಾವುದೋ ಕಾರಣಕ್ಕೆ ಲಾರಿಯ ಇನ್ನೋರ್ವ ಚಾಲಕ ವೀರಬಾಹು ಚಾಲಕ ಮಣಿಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿರುವುದಾಗಿ ಪ್ರವೀಣ್‌ ಪೂಜಾರಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Lorry driver death: Lorry driver death in suspicious manner: Another driver is suspected of murder

Comments are closed.