ಸೋಮವಾರ, ಜೂನ್ 16, 2025
HomeCoastal NewsLove dispute : ಪ್ರೀತಿಯಲ್ಲಿ ಮನಸ್ತಾಪ, ಮೊಬೈಲ್‌ ಟವರ್‌ ಏರಿ ಕುಳಿದ ಯುವಕ

Love dispute : ಪ್ರೀತಿಯಲ್ಲಿ ಮನಸ್ತಾಪ, ಮೊಬೈಲ್‌ ಟವರ್‌ ಏರಿ ಕುಳಿದ ಯುವಕ

- Advertisement -

ಮಂಗಳೂರು (Mangalore) : ಪ್ರೇಮಿಗಳ ನಡುವಿನ ಮನಸ್ತಾಪಕ್ಕೆ ಯುವಕನೋರ್ವ ಟವರ್‌ ಏರಿ ಕುಳಿತ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ. ಇದರಿಂದಾಗಿ ಕೆಲ ಕಾಲ ಸ್ಥಳದಲ್ಲಿ ಆತಂಕ ಸೃಷ್ಟಿಯಾಗಿತ್ತು. ಕೊನೆಗೆ ಪ್ರೇಯಸಿ ಸ್ಥಳಕ್ಕೆ ಬಂದು ಯುವಕನನ್ನು ಕೆಳಗೆ ಇಳಿಸಿದ್ದಾಳೆ.

ಬಂಟ್ವಾಳ ಮೂಲದ ಯುವಕನೋರ್ವ ಟವರ್ ಏರಿ ಕೆಲ ಕಾಲ ಆತಂಕ ಸೃಷ್ಟಿಸಿದ್ದಾನೆ. ಕಳೆದ ಕೆಲವು ವರ್ಷಗಳಿಂದಲೂ ಯುವಕ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಆದರೆ ಇಬ್ಬರ ನಡುವೆ ಕ್ಷುಲಕ ವಿಚಾರಕ್ಕೆ ಮನಸ್ತಾಪ ಉಂಟಾಗಿತ್ತು. ಇದರಿಂದ ಮನನೊಂದ ಯುವಕ ಕಟ್ಟಡದ ಮೇಲಿದ್ದ ಟವರ್‌ ಏರಿ ಕುಳಿತಿದ್ದಾನೆ. ಸ್ಥಳೀಯರು ಯುವಕ ಸ್ಥಿತಿ ಕಂಡು ಆತಂಕಗೊಂಡಿದ್ದರು.

ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ. ಆದರೆ ಯುವಕ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಎಷ್ಟೇ ಹರಸಾಹಸ ಪಟ್ಟರೂ ಕೂಡ ಯುವಕ ಕೆಳಗೆ ಇಳಿಯದ ಹಿನ್ನೆಲೆಯಲ್ಲಿ ಪ್ರೇಯಿಸಿಯನ್ನು ಸ್ಥಳಕ್ಕೆ ಕರೆಯಿಸಿದ್ದಾರೆ.

ಈ ವೇಳೆಯಲ್ಲಿ ಟವರ್‌ ಬಳಿ ಬಂದ ಯುವತಿ ಪ್ರಿಯಕರನ ಮನವೊಲಿಸಿದ್ದಾಳೆ. ನಂತರ ಯುವಕ ಟವರ್‌ ನಿಂದ ಕೆಳಗೆ ಇಳಿದಿದ್ದಾನೆ. ಸ್ಥಳದಲ್ಲಿದ್ದ ಹೊಯ್ಸಳ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ :  ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ, 4 ಗಂಟೆಗಳಲ್ಲಿ ಮೂವರು ಆರೋಪಿಗಳ ಬಂಧನ

ಇದನ್ನೂ ಓದಿ : ಸೆಲ್ಪಿ ತೆಗೆಯುವ ವೇಳೆ ಅವಘಡ : ಸೈಂಟ್‌ ಮೇರಿಸ್‌ ದ್ವೀಪದಲ್ಲಿ ಇಬ್ಬರು ವಿದ್ಯಾರ್ಥಿಗಳು ನೀರು ಪಾಲು

Love dispute The young man who climbed the mobile tower in Mangalore

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular