Teen Body Found : ನೇತ್ರಾವತಿ ನದಿಯಲ್ಲಿ ಬಾಲಕನ ಶವಪತ್ತೆ : ಸಾವಿನ ಸುತ್ತ ಹಲವು ಅನುಮಾನ

ಮಂಗಳೂರು : ಆತ ಮನೆಯಲ್ಲಿ ಸ್ನೇಹಿತರ ಜೊತೆಗೆ ಆಟವಾಡಲು ಹೋಗುವುದಾಗಿ ಮನೆಯಿಂದ ತೆರಳಿದ್ದ. ಆದರೆ ಸಂಜೆಯಾದ್ರೂ ಮಗ ಮನೆಗೆ ಬಂದಿರಲಿಲ್ಲ. ಎಲ್ಲಿ ಹುಡುಕಿದ್ರೂ ಮಗನ ಸುಳಿವು ಸಿಗದೇ ಇದ್ದಾಗ, ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಆಟವಾಡಲು ತೆರಳಿದ್ದ ಮಗ ನದಿಯಲ್ಲಿ ಶವವಾಗಿ (Teen Body Found ) ಪತ್ತೆಯಾಗಿದ್ದಾನೆ. ಈ ಘಟನೆ ನಡೆದಿರೋದು ಮಂಗಳೂರಲ್ಲಿ. ಹೌದು, 9 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 16 ವರ್ಷದ ಬಾಲಕನೋರ್ವನ ಶವ ಮಂಗಳೂರು ಹೊರವಲಯದ ಹೊಯ್ಗೆ ಬಜಾರ್‌ ಬಳಿಯ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಆದರೆ ಬಾಲಕ ಸಾವು ಇದೀಗ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಮಂಗಳೂರು ಹೊರವಲಯದ ಮಹಾಕಾಳಿ ಪಡ್ಬುವಿನ ನಿವಾಸಿ ದುಶ್ಯಂತ್‌ ( 16 ವರ್ಷ) ಎಂಬಾತನೇ ಶವವಾಗಿ ಪತ್ತೆಯಾಗಿರುವ ಬಾಲಕ. ನಗರದ ಪಾಂಡೇಶ್ವರದಲ್ಲಿರುವ ರೊಸಾರಿಯೋ ಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದ. ಆದರೆ ಭಾನುವಾರ ಶಾಲೆಗೆ ರಜೆ ಇದ್ದ ಕಾರಣಕ್ಕೆ ಸ್ನೇಹಿತರ ಜೊತೆಗೆ ಆಟವಾಡಲ ಹೋಗುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದ.

ಸಂಜೆಯಾದರೂ ಮಗ ಮನೆಗೆ ಬಾರದ ಹಿನ್ನೆಲೆಯಲ್ಲಿ ತಾಯಿ ಆಶಾ ಅವರು ಮಗನ ಸ್ನೇಹಿತನ ಬಳಿಯಲ್ಲಿ ಈ ಕುರಿತು ವಿಚಾರಿಸಿದ್ದಾರೆ. ಆದ್ರೆ ಮಗ ಪತ್ತೆಯಾಗದ ಹಿನ್ನೆಲೆಯಲ್ಲಿ ಪಾಂಡೇಶ್ವರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಇದೀಗ ಬಾಲಕನ ಶವ ಹೊಯ್ಗೆ ಬಜಾರ್‌ ಬಳಿಯಲ್ಲಿರುವ ನದಿಯಲ್ಲಿ ಪತ್ತೆಯಾಗಿದೆ.

ಬಾಲಕನ ಸಾವು ಇದೀಗ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಸ್ನೇಹಿತರ ಜೊತೆಗೆ ಆಟವಾಡಲು ತೆರಳಿದ್ದ ಬಾಲಕ ನದಿಗೆ ಇಳಿದು ಈಜಿದ್ದಾನೆಯೇ. ಇಲ್ಲ ಯಾರಾದ್ರೂ ಆತನನ್ನು ನದಿಗೆ ನೂಕಿದ್ದಾರೆಯೇ ಅನ್ನುವ ಕುರಿತು ಸಂಶಯ ವ್ಯಕ್ತವಾಗುತ್ತಿದೆ. ಸದ್ಯಕ್ಕೆ ಪ್ರಕರಣ ದಾಖಲು ಮಾಡಿಕೊಂಡಿರುವ ಪಾಂಡೇಶ್ವರ ಠಾಣೆಯ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ : ಬ್ರಹ್ಮಾವರದ ದೇವಸ್ಥಾನದಲ್ಲಿ ಕಳವಿಗೆ ಯತ್ನ, ಕಳ್ಳರು ಪರಾರಿ

ಇದನ್ನೂ ಓದಿ : ಕುಂದಾಪುರದಲ್ಲಿ ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ರವಾನೆ : ಖಾಸಗಿ ಕಾಲೇಜು PRO ವಿರುದ್ದ ಸಿಡಿದೆದ್ದ ವಿದ್ಯಾರ್ಥಿಗಳು

Teen Body found in nethravathi River in Hoige Bajar Mangalore

Comments are closed.