ಭಾನುವಾರ, ಜೂನ್ 15, 2025
HomeBreakingಉಡುಪಿ : ಬ್ಯಾಂಕಿನಲ್ಲಿದ್ದ ಗ್ರಾಹಕನ ಕೈಯಿಂದ 1.90 ಲಕ್ಷ ರೂಪಾಯಿ ಹಣ ಕಸಿದು ಪರಾರಿ

ಉಡುಪಿ : ಬ್ಯಾಂಕಿನಲ್ಲಿದ್ದ ಗ್ರಾಹಕನ ಕೈಯಿಂದ 1.90 ಲಕ್ಷ ರೂಪಾಯಿ ಹಣ ಕಸಿದು ಪರಾರಿ

- Advertisement -

ಉಡುಪಿ : ಹಣವನ್ನು ಬ್ಯಾಂಕಿಗೆ ಜಮೆ ಮಾಡಲು ತಂದಿದ್ದ ವ್ಯಕ್ತಿಯ ಕೈಯಲ್ಲಿದ್ದ ಸುಮಾರು 1.90 ಲಕ್ಷ ರೂಪಾಯಿ ಹಣವನ್ನು ಕಳ್ಳನೋರ್ವ ಕಸಿದು ಪರಾರಿಯಾಗಿರುವ ಘಟನೆ ಉಡುಪಿ ನಗರದ ಕೋರ್ಟ್‌ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ ನಡೆದಿದೆ.

ಅಶೋಕ್‌ ಕುಮಾರ್‌ ಎಂಬವರೇ ಹಣವನ್ನು ಕಳೆದುಕೊಂಡ ಗ್ರಾಹಕ. ಅಶೋಕ್‌ ಕುಮಾರ್‌ ಅವರು ಉಡುಪಿ ನಗರದ ವಾದಿರಾಜ ಕಟ್ಟದಲ್ಲಿ ಶೇರು ವ್ಯವಹಾರವನ್ನು ನಡೆಸುತ್ತಿದ್ದರು. ಬ್ಯಾಂಕಿಗೆ ಹಣವನ್ನು ಜಮೆ ಮಾಡಲು ಕೆನರಾ ಬ್ಯಾಂಕ್‌ ಶಾಖೆಗೆ ಬಂದಿದ್ದಾರೆ. ಈ ವೇಳೆಯಲ್ಲಿ ಈ ಘಟನೆ ನಡದಿದೆ.

ಇದನ್ನೂ ಓದಿ : Monkeypox : ಕೊರೊನಾ ಬೆನ್ನಲ್ಲೇ ಮತ್ತೊಂದು ಶಾಕ್‌..!! ಪತ್ತೆಯಾಯ್ತು ಮಂಕಿಪಾಕ್ಸ್

ಕೂಡಲೇ ಅಶೋಕ್‌ ಕುಮಾರ್‌ ಅವರು ಕಳ್ಳನನ್ನು ಓಡಿಸಿಕೊಂಡು ಹೋಗಿದ್ದಾರೆ. ಆದರೆ ಕಳ್ಳ ಬೂದು ಬಣ್ಣದ ಇನ್ನೋವಾ ಕಾರಿನಲ್ಲಿ ಪರಾರಿಯಾಗಿದ್ದಾನೆ. ಸುಮಾರು ಐದಾರು ಮಂದಿಯ ತಂಡದಿಂದ ಈ ಕೃತ್ಯ ನಡೆದಿದೆ ಎನ್ನಲಾಗುತ್ತಿದ್ದು, ಪರಿಚಿತರೇ ಕಳವು ಮಾಡಿರುವ ಶಂಕೆ ವ್ಯಕ್ತವಾಗಿದೆ.

ಹಾಡುಹಗಲಲ್ಲೇ ನಡೆದ ಘಟನೆಯಿಂದ ಉಡುಪಿ ನಗರದ ಮಂದಿ ಬೆಚ್ಚಿಬಿದ್ದಿದ್ದಾರೆ. ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದು, ಬ್ಯಾಂಕ್‌ ಹಾಗೂ ಇತರ ಕಟ್ಟಡಗಳ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular