ಬಿಜೆಪಿ ಶಾಸಕ‌ ಹರೀಶ್ ಪೂಂಜಾಗೆ ಅಭಿನಂದನೆ ಸಲ್ಲಿಸಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಸಹೋದರ : ಮಾಜಿ‌ ಶಾಸಕ‌ ವಸಂತ‌ ಬಂಗೇರ ಗರಂ

ಬೆಳ್ತಂಗಡಿ : ಬಿಜೆಪಿ‌ ಶಾಸಕ ಹರೀಶ್ ಪೂಂಜಾ ಅವರು ಮೂರು ವರ್ಷದ ಪೂರೈಸಿದ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ‌ ಹರೀಶ್ ಕುಮಾರ್ ಸಹೋದರ ಕಾಂಗ್ರೆಸ್ ನಾಯಕ ಯೋಗೀಶ್ ಕುಮಾರ್ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಿ ಅಭಿನಂದನೆ ಸಲ್ಲಿಸಿ ದ್ದರು. ಆದರೆ ಈ‌ ನಡೆಯ ಬಗ್ಗೆ ಕಾಂಗ್ರೆಸ್ ಮಾಜಿ ಶಾಸಕ ವಸಂತ ಬಂಗೇರ ಗರಂ ಆಗಿದ್ದಾರೆ.

ವಸಂತ ಬಂಗೇರ ಅವರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಆಪ್ತರೊಂದಿಗೆ ಈ ಬಗ್ಗೆ ಗಂಭೀರವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಶಾಸಕ ವಸಂತ ಬಂಗೇರ ಈ ಬಗ್ಗೆ ನಾನು ಹೈಕಮಾಂಡ್ ಮುಂದೆ ದೂರು ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ನಾನು ಕಾಂಗ್ರೆಸ್ ಪಕ್ಷದ ಎಲ್ಲ ಸ್ಥಾನಗಳಿಗೂ ರಾಜೀನಾಮೆ ನೀಡುವುದಾಗಿ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಹರೀಶ್ ಕುಮಾರ್ ಅವರ ಸೋದರ ಅಲ್ಲದೆ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪೀತಾಂಬರ ಹೆರಾಜೆ, ಹಿರಿಯ ಕಾಂಗ್ರೆಸ್ ನಾಯಕ ಪಿಕೆ ರಾಜು ಪೂಜಾರಿ ಸಹ ಹರೀಶ್ ಪೂಂಜಾ ಅವರನ್ನು ಅಭಿನಂದಿಸಿ ಪತ್ರಿಕೆಯಲ್ಲಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಆದರೆ ಹರೀಶ್ ಪೂಂಜಾ ಬಗ್ಗೆ ಸತತ ಆರೋಪ ಮಾಡುತ್ತಾ ಬಂದಿರುವ ಮಾಜಿ ಶಾಸಕ ವಸಂತ ಬಂಗೇರ ರಿಗೆ ಇದು ಮುಜುಗುರವಾಗಿದ್ದು ಜಿಲ್ಲಾಧ್ಯಕ್ಷರ ನಡೆಯನ್ನು ಖಾರವಾಗಿ ಪ್ರಶ್ನಿಸಿದ್ದಾರೆ.

ಒಟ್ಟಿನಲ್ಲಿ ಶಾಸಕ ಹರೀಶ್ ಪೂಂಜಾ ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್ ನ ನಾಯಕರುಗಳಿಂದ ಹೊಗಳಲು ಪಟ್ಟದ್ದು ಈಗ ಕಾಂಗ್ರೆಸಿಗೆ ಮುಜುಗರ ತಂದಿದ್ದು, ಇದರಿಂದ ಬಂಗೇರ ಬಹಳಷ್ಟು ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ.

Comments are closed.