A terrible accident : ಕಾರು – ಬಸ್ ನಡುವೆ ಭೀಕರ ಅಪಘಾತ  : 11‌ಮಂದಿ ದಾರುಣ ಸಾವು

ಮಧ್ಯ ಪ್ರದೇಶ : (A terrible accident)ಬಸ್ ಹಾಗೂ ಕಾರು‌ ನಡುವೆ ನಡೆದ ಭೀಕರ ಅಪಘಾತದಲ್ಲಿ 11‌ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮದ್ಯಪ್ರದೇಶದ ಬೇತುಲ್‌ ಜಿಲ್ಲೆಯಲ್ಲಿ ನಡೆದಿದೆ.  ಮೃತಪಟ್ಟವರು ಬಚಿಖ್ಲಾರ್, ಮಹದ್ಗಾಂವ್ ಮತ್ತು ಜಲ್ಲಾರ್ ಗ್ರಾಮದ ನಿವಾಸಿಗಳು.  ಅಮರಾವತಿಯಿಂದ ಕೂಲಿ ಕೆಲಸ ಮುಗಿಸಿಕೊಂಡು ಹಿಂತಿರುಗುತ್ತಿದ್ದ ವೇಳೆಯಲ್ಲಿ ಈ ದುರಂತ(A terrible accident) ಸಂಭವಿಸಿದೆ.  ಬೇತುಲ್‌ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ತನಿಖೆ ನಡೆಸಲಾಗುತ್ತಿದೆ

ಚಿಖ್ಲಾರ್, ಮಹದ್ಗಾಂವ್ ಮತ್ತು ಜಲ್ಲಾರ್ ಗ್ರಾಮದ ನಿವಾಸಿಗಳು ಬೆಳಿಗ್ಗೆ  2 ಗಂಟೆಯ ಹೊತ್ತಿಗೆ ಅಮರಾವತಿಯಿಂದ ಎಸ್‌ಯುವಿಯಲ್ಲಿ ಹಿಂತಿರುಗುತ್ತಿರುವ ಸಂದರ್ಭದಲ್ಲಿ ಕಾರಿಗೆ ಬಸ್ ಡಿಕ್ಕಿ(A terrible accident) ಹೊಡೆದಿದೆ. ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು , ಘಟನೆಯಲ್ಲಿ 11 ಜನರು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ . ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ .

ಇದನ್ನೂ ಓದಿ : Physician negligence : ವೈದ್ಯರ ನಿರ್ಲಕ್ಷಕ್ಕೆ ಗರ್ಭಿಣಿ, ಅವಳಿ ಶಿಶು ಸಾವು ; ಸರಕಾರದಿಂದ ಮಾರ್ಗಸೂಚಿ ಪ್ರಕಟ

ಇದನ್ನೂ ಓದಿ : Honnali Chandrashekar Death : ಹೊನ್ನಾಳಿ : ಚಂದ್ರಶೇಖರ್ ಸಾವು, ಕೊಲೆ ಪ್ರಕರಣ ದಾಖಲು

“ಚಿಖ್ಲಾರ್, ಮಹದ್ಗಾಂವ್ ಮತ್ತು ಜಲ್ಲಾರ್ ಗ್ರಾಮದ ನಿವಾಸಿಗಳು  ಅಮರಾವತಿಯಿಂದ ಎಸ್‌ಯುವಿಯಲ್ಲಿ ಬೇತುಲ್‌ ಕಡೆಗೆ  ಹಿಂತಿರುಗುತ್ತಿದ್ದಾಗ ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯ ವಿಷಯ ತಿಳಿದ ಪೋಲೀಸರು ಸ್ಥಳಕ್ಕೆ ದಾವಿಸಿದ್ದಾರೆ . ತನಿಖೆ ನಡೆಸಿದ ಪೋಲೀಸರು ಏಳು ಶವಗಳನ್ನು ವಾಹನದಿಂದ ಹೊರತೆಗೆದಿದ್ದು , ನಾಲ್ಕು ದೇಹಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಪೋಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ . ಮರಣೋತ್ತರ ಪರೀಕ್ಷೆಯ ನಂತರ ಶವಗಳನ್ನು  ಹಸ್ತಾಂತರಿಸಲಾಗಿದೆ.

ಇದನ್ನೂ ಓದಿ : Assault by head : ಸಿದ್ದಾಪುರ : ಕ್ಷಮೆ ಕೇಳಲು ಕೊರಗಜ್ಜನ ಸನ್ನಿಧಿಗೆ ಕರೆಯಿಸಿ ತಲವಾರಿನಿಂದ ಹಲ್ಲೆ

ಇದು ಮಧ್ಯಪ್ರದೇಶದಲ್ಲಿ ನಡೆದ ಮೂರನೇ ದೊಡ್ಡ ಅಪಘಾತವಾಗಿದೆ. ಇತ್ತೀಚೆಗೆ, ಮೊರೆನಾದಲ್ಲಿ ಡಂಪ್ ಟ್ರಕ್ ವಾಹನಕ್ಕೆ ಡಿಕ್ಕಿ ಹೊಡೆದು ಐದು ಜನರು ಸಾವನ್ನಪ್ಪಿದರೆ, ಯುಪಿಯ 15 ಜನರು ರೇವಾದ ಅಪಘಾತದಲ್ಲಿ ಸಾವನ್ನಪ್ಪಿದರು. ರಾತ್ರಿಯ ಅವಧಿಯಲ್ಲಿ ಹತ್ತಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ಅಪಘಾತದ ಬಗ್ಗೆ ದುಃಖ ವ್ಯಕ್ತಪಡಿಸಿದ ಪ್ರಧಾನಿಯವರು ಪರಿಹಾರವನ್ನು ಘೋಷಿಸಿದ್ದು , ” ಬೆತುಲ್‌ನಲ್ಲಿ ನಡೆದ ಅಪಘಾತದಿಂದ ಆಗಿರುವ  ಪ್ರಾಣಹಾನಿಯಿಂದ ನೋವಾಗಿದೆ. ಮೃತ ಕುಟುಂಬಗಳಿಗೆ ಸಂತಾಪ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ. ಎಕ್ಸ್ ಗ್ರೇಷಿಯಾ ರೂ. ಪಿಎಂಎನ್‌ಆರ್‌ಎಫ್‌ ನಿಂದ 2 ಲಕ್ಷ ರೂ.ಗಳನ್ನು ಮೃತರ  ಸಂಬಂಧಿಕರಿಗೆ ನೀಡಲಾಗುತ್ತದೆ ಮತ್ತು ಗಾಯಾಳುಗಳಿಗೆ 50,000  ರೂ . ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿಯವರ ಕಚೇರಿ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ .

(A terrible accident) In a terrible accident between a bus and a car, 11 people have died in Betul district of Madhya Pradesh. The deceased were residents of Bachikhlar, Mahdgaon and Jallar villages. A terrible accident happened when the laborer was returning from Amravati after finishing his work. A case has been registered at Betul police station and investigation is on

Comments are closed.