Attack on bakery owner: ಬೆಂಗಳೂರಿನ ಬೇಕರಿಯೊಂದರಲ್ಲಿ ಬೈಂದೂರು ಯುವಕನ ಮೇಲೆ ಕಿಡಿಗೇಡಿಗಳಿಂದ ಹಲ್ಲೆ

ಬೆಂಗಳೂರು: (Attack on bakery owner) ಬೆಂಗಳೂರಿನಲ್ಲಿ ಮತ್ತೆ ಕಿಡಿಗೇಡಿಗಳ ಅಟ್ಟಹಾಸ ತಲೆಯೆತ್ತಿದೆ. ಈ ಹಿಂದೆ ಎಚ್‌ಎಎಲ್‌ ಬೇಕರಿ ಯುವಕರ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದರು. ಈ ಪ್ರಕರಣದ ಬಳಿಕ ಅದೇ ರೀತಿಯಲ್ಲಿ ಮತ್ತೊಂದು ಘಟನೆ ನಡೆದಿದ್ದು, ಬೈಂದೂರು ಮೂಲದ ಮಂಜುನಾಥ್‌ ಶೆಟ್ಟಿ ಅವರ ಬೇಕರಿಗೆ ನುಗ್ಗಿ ಕಿಡಿಗೇಡಿಗಳು ಅಟ್ಟಹಾಸ ಮೆರೆದ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ ನಡೆದಿದೆ.

ಈ ಹಿಂದೆ ಬೆಂಗಳೂರಿನ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬೈಂದೂರಿನ ಯುವಕರ ಮೇಲೆ ನಾಲ್ಕೈದು ಜನ ಕಿಡಿಗೇಡಿಗಳು ಹಲ್ಲೆ ನಡೆಸಿದ್ದರು. ಸಿಗರೇಟ್‌ ಖರೀದಿಸಿ ಹಣ ಪಾವತಿಸದೇ ಸುಮ್ಮನಾಗಿದ್ದು. ಹಣ ಕೇಳಿದ್ದಕ್ಕೆ ಯುವಕರ ಮೇಲೆ ಹಲ್ಲೆ ನಡೆಸಿದ್ದರು. ಇದೀಗ ಅದೇ ರೀತಿಯಲ್ಲಿ ಮತ್ತೊಂದು ಪ್ರಕರಣ ನಡೆದಿದ್ದು, ಬೈಂದೂರಿನ ಕಾಲ್ತೋಡು ಮೂಲದ ಮಂಜುನಾಥ್‌ ಶೆಟ್ಟಿ ಎನ್ನುವವರ ಬೇಕರಿಗೆ ಯುವಕರ ಗುಂಪೊಂದು ಬಂದಿದ್ದು, ಏಕಾಏಕಿ ಸಿಗರೇಟ್‌ ಬಂಡಲಿಗೆ ಕೈ ಹಾಕಿದ್ದಾರೆ. ಇದನ್ನು ನೋಡಿದ ಬೇಕರಿ ಮಾಲೀಕ ಮಂಜುನಾಥ್‌, ಇದನ್ನು ಪ್ರಶ್ನಿಸಿದ್ದು, ಕೇಳಿದರೇ ತಾನೇ ಕೊಡುವುದಿಲ್ಲವಾ? ಎಂದು ಕೇಳಿದ್ದಾನೆ. ಬೇಕರಿ ಮಾಲೀಕ ಇಷ್ಟು ಕೇಳಿದ್ದೇ ತಡ. ಕಿಡಿಗೇಡಿಗಳು ಬೇಕರಿಗೆ ನುಗ್ಗಿ ಬೇಕರಿ ಮಾಲೀಕ ಮಂಜುನಾಥ್‌ ಮೇಲೆ ಹಲ್ಲೆ ಮಾಡಿದ್ದಾರೆ. ಮಾಲೀಕನ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿರುವುದು ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ.

ಸದ್ಯ ಈ ಪ್ರಕರಣದ ಕುರಿತು ಬೇಕರಿ ಮಾಲೀಕ ಬೈಂದೂರು ಮೂಲದ ಮಂಜುನಾಥ್‌ ಶೆಟ್ಟಿ ಪೊಲೀಸರಿಗೆ ದೂರು ನೀಡಿದ್ದು, ಪುಟ್ಟೇನಹಳ್ಳಿಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಹಿಂದೆಯೂ ನಡೆದಿತ್ತು ಬೈಂದೂರು ಯುವಕರ ಮೇಲೆ ಹಲ್ಲೆ

ಬ್ರಹ್ಮಲಿಂಗೇಶ್ವರ ಬೇಕರಿಯೊಂದರಲ್ಲಿ ಬೈಂದೂರಿನ ಯುವಕರು ಕೆಲಸ ಮಾಡುತ್ತಿದ್ದರು. ಈ ವೇಳೆ ನಾಲ್ಕೈದು ಜನರಿದ್ದ ಯುವಕರ ಗುಂಪೊಂದು ಬಂದು ಸಿಗರೇಟ್ ಖರೀದಿಸಿ, ಹಣ ಪಾವತಿಸದೆ ಸುಮ್ಮನಾಗಿದ್ದಾರೆ. ಹಣ ಕೊಡಿ ಎಂದು ಅಂಗಡಿಯಾತ ಕೇಳಿದಾಗ ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿ ನಿಮ್ಮ ಓನರ್ ಯಾರು? ಎಲ್ಲಿದ್ದಾನೆ ಎಂದು ಕೇಳಿದ್ದಾನೆ. ಇದಕ್ಕೆ ಉತ್ತರವಾಗಿ, ಅಂಗಡಿ ಮಾಲೀಕ ಊರಿನಲ್ಲಿ ಇದ್ದಾನೆ ಎಂದು ಓರ್ವ ಯುವಕ ಹೇಳಿದ್ದಾನೆ. ಈ ವೇಳೆ ಮತ್ತೊಬ್ಬ ಯುವಕ ಏಕಾಏಕಿ ಅಂಗಡಿಯೊಳಗೆ ನುಗ್ಗಿ, ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಅಂಗಡಿಯೊಳಗಿದ್ದ ಇನ್ನೊಬ್ಬ ಯುವಕ, ತಡೆಯಲು ಬಂದಾಗ ಆತನ ಮೇಲೂ ಹಲ್ಲೆ ಮಾಡಿದ್ದಾರೆ.

ಇದನ್ನೂ ಓದಿ : KUWJ Endowment Award: ಮಾಧ್ಯಮ ಅಕಾಡೆಮಿಯಲ್ಲಿ ಕೆಯುಡಬ್ಲ್ಯೂಜೆ ದತ್ತನಿಧಿ ಪ್ರಶಸ್ತಿ ಸ್ಥಾಪನೆ

ಇದನ್ನೂ ಓದಿ : Negligency of BBMP: ಮತ್ತೆ ಮತ್ತೆ ಕುಸಿಯುತ್ತಿವೆ ಬೆಂಗಳೂರಿನ ರಸ್ತೆಗಳು: ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಸಾರ್ವಜನಿಕರಿಂದ ಆಕ್ರೋಶ

ಇಷ್ಟಾಗುತ್ತಿದ್ದಂತೆ ಯುವಕರ ಗುಂಪು ಅಂಗಡಿಯೊಳಗೆ ನುಗ್ಗಿ, ಅಲ್ಲಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ, ಹೆಲ್ಮೆಟ್​ ಮುಂತಾದ ವಸ್ತುಗಳಿಂದ ಥಳಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ ಅಂಗಡಿಯಲ್ಲಿದ್ದ ಅಮಾಯಕ ಹುಡುಗರ ಮುಖ ಹಾಗೂ ಹೊಟ್ಟೆಯ ಭಾಗಕ್ಕೆ ಹಲ್ಲೆ ಮಾಡಿದ್ದಾರೆ. ಪುಡಿಗೇಡಿಗಳು ಯುವಕರ ಮೇಲೆ ಹಲ್ಲೆ ನಡೆಸಿದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕೊನೆಯಲ್ಲಿ ಈ ರೀತಿಯಾಗಿ ಪಕ್ಕದ ಬೇಕರಿ ಮಾಲೀಕನೇ ಸುಪಾರಿ ಕೊಟ್ಟು ಮಾಡಿಸಿದ್ದು ಎಂಬ ವಿಚಾರ ತನಿಖೆಯ ನಂತರ ತಿಳಿದುಬಂದಿತ್ತು.

Attack on bakery owner: Byundur youth attacked by miscreants in a bakery in Bangalore

Comments are closed.