Bengaluru Murder Case: ಚಾಕುವಿನಿಂದ ಇರಿದು ನಡುರಸ್ತೆಯಲ್ಲಿ ಯುವಕನ ಬರ್ಬರ ಹತ್ಯೆ

ಬೆಂಗಳೂರು: (Bengaluru Murder Case) ಯುವಕನೋರ್ವನನ್ನು ನಡು ರಸ್ತೆಯಲ್ಲಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಂಗಳೂರಿನ ಸಂಪಿಗೆಹಳ್ಳಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಹೆಗಡೆ ನಗರದ ನಿವಾಸಿ ಸಲ್ಮಾನ್‌ ಕೊಲೆಯಾದ ದುರ್ದೈವಿ.

ಮೃತ ಸಲ್ಮಾನ್‌ ತನ್ನ ತಂದೆಯ ಫರ್ನಿಚರ್‌ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ರಾತ್ರಿ ಸುಮಾರು ಹನ್ನೊಂದು ಗಂಟೆಯ ಸುಮಾರಿಗೆ ಕೆಲಸ ಮುಗಿಸಿ ಆತ ಮನೆಗೆ ವಾಪಾಸ್‌ ಆಗುತ್ತಿದ್ದ ವೇಳೆಯಲ್ಲಿ ದುಷ್ಕರ್ಮಿಗಳು ಆತನ ಮೇಲೆ ಹಲ್ಲೆ (Bengaluru Murder Case) ನಡೆಸಿದ್ದಾರೆ. ಈ ವೇಳೆ ನಡುರಸ್ತೆಯಲ್ಲಿ ಸಲ್ಮಾನ್‌ ಗೆ ಚಾಕು ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಘಟನೆಯ ಮಾಹಿತಿ ತಿಳಿದ ಸಂಪಿಗೆಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸಿಸಿಟಿವಿಯನ್ನು ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ಸಂಪಿಗೆಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಯಾವ ಕಾರಣಕ್ಕಾಗಿ ದುಷ್ಕರ್ಮಿಗಳು ಆತನನ್ನು ಕೊಲೆ ಮಾಡಿದ್ದಾರೆ ಎಂಬ ಮಾಹಿತಿ ತಿಳಿದಿಲ್ಲ. ಹಂತಕನಿಗೂ ಹಾಗೂ ಮೃತ ಸಲ್ಮಾನ್‌ ಗೂ ಯಾವುದಾದರೂ ವಿಚಾರಕ್ಕೆ ವೈರತ್ವ ಇರಬಹುದಾ? ಎನ್ನುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Lovers get suicide: ಒಂದೇ ನೇಣಿನ ಕುಣಿಕೆಗೆ ಕೊರಳೊಡ್ಡಿದ ಪ್ರೇಮಿಗಳು

ಇದನ್ನೂ ಓದಿ : ಕಾರಿನೊಳಗೆ ಟೆಕ್ಕಿ ವಿಚಿತ್ರ ಆತ್ಮಹತ್ಯೆ : ಜೀವಕ್ಕೆ ಮುಳುವಾಯ್ತು ಗೂಗಲ್ ಸರ್ಜ್

ಇದನ್ನೂ ಓದಿ : Telangana Kidnap case: ತಂದೆಯ ಎದುರೇ ಯುವತಿಯ ಅಪಹರಣ: ವಿಡಿಯೋ ವೈರಲ್‌

ಇದನ್ನೂ ಓದಿ : SriLanka Drug Mafia: ಶಸ್ತ್ರಾಸ್ತ್ರ, ಡ್ರಗ್ಸ್‌ ಕಳ್ಳ ಸಾಗಾಣಿಕೆ : ಪಾಕ್‌ ನಂಟು ಹೊಂದಿದ 9 ಮಂದಿಯ ಬಂಧನ

ಇದನ್ನೂ ಓದಿ : Bangalore Suicide case: ಮಕ್ಕಳಿಗೆ ಮದುವೆ ಆಗಿಲ್ಲ ಎಂಬ ಚಿಂತೆ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ

(Bengaluru Murder Case) The incident of brutally killing a young man with a knife in the middle of the road took place in Sampigehalli, Bengaluru on Tuesday night. Salman, a resident of Hegde city, is unfortunate to have been murdered.

Comments are closed.