ಸೋಮವಾರ, ಏಪ್ರಿಲ್ 28, 2025
HomeCrimeರಸ್ತೆಯಲ್ಲಿ ಸಿಕ್ಕ ನಾಯಿ ಮರಿಯನ್ನು ಆರೈಕೆ ಮಾಡಿದ್ದೇ ತಪ್ಪಾಯ್ತು : ಯುವಕನಿಗೆ ಬಿತ್ತು ಗುಂಡೇಟು…! ಅಷ್ಟಕ್ಕೂ...

ರಸ್ತೆಯಲ್ಲಿ ಸಿಕ್ಕ ನಾಯಿ ಮರಿಯನ್ನು ಆರೈಕೆ ಮಾಡಿದ್ದೇ ತಪ್ಪಾಯ್ತು : ಯುವಕನಿಗೆ ಬಿತ್ತು ಗುಂಡೇಟು…! ಅಷ್ಟಕ್ಕೂ ಆಗಿದ್ದೇನು ಗೊತ್ತಾ ?

- Advertisement -

ಪಾಟ್ನಾ : ಬಹುತೇಕರು ರಸ್ತೆ ಬದಿಯಲ್ಲಿ ಸಿಕ್ಕ ನಾಯಿ ಮರಿಯನ್ನು ಮನೆಗೆ ತಂದು ಆರೈಕೆ ಮಾಡ್ತಾರೆ. ಆದರೆ ಇಲ್ಲೊಬ್ಬ ಯುವಕನಿಗೆ ನಾಯಿ ಮರಿಯನ್ನು ಆರೈಕೆ ಮಾಡಿದ್ದೇ ತಪ್ಪಾಗಿ ಹೋಗಿದ್ದು, ಮಾಡದ ತಪ್ಪಿಗೆ ಗುಂಡೇಟು ತಿಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಷ್ಟಕ್ಕೂ ಈ ಘಟನೆ ನಡೆದಿರೋದು ಬಿಹಾರದ ಔರಂಗಬಾದ್ ಜಿಲ್ಲೆಯಲ್ಲಿ.

ರಾಜ್ ಕುಮಾರ್ (22 ವರ್ಷ) ಎಂಬಾತನೇ ಗುಂಡೇಟಿನಿಂದ ಗಾಯಗೊಂಡ ಯುವಕ. ಬಿಹಾರದ ಔರಂಗಬಾದ್ ಜಿಲ್ಲೆಯ ದೌಡ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ಮ್ ಖುರ್ದ್ ಗ್ರಾಮದ ನಿವಾಸಿ ರಾಜಕುಮಾರ್ ಎಂಬಾತ ಬೀದಿ ಬದಿಯಲ್ಲಿ ಸಿಕ್ಕಿದ್ದ ನಾಯಿಮರಿಯೊಂದನ್ನು ರಕ್ಷಣೆ ಮಾಡಿದ್ದ. ನಂತರದಲ್ಲಿ ರಾಜು ನಾಯಿಯ ಮರಿಯನ್ನು ತನ್ನ ಗೆಳೆಯನ ಮನೆಯಲ್ಲಿ ಇರಿಸಿದ್ದಾನೆ.

ಇದನ್ನು ಅರಿತು ಅಲ್ಲಿಗೆ ಬಂದ ಸುಧೀರ್ ಕುಮಾರ್ ಹಾಗೂ ರೋಷನ್ ಕುಮಾರ್ ಎಂಬವರು ನಾಯಿ ಮರಿ ತಮ್ಮದು. ತಮಗೆ ನಾಯಿ ಮರಿಯನ್ನು ಕೊಡುವಂತೆ ಕೇಳಿಕೊಂಡಿದ್ದಾರೆ. ಆದರೆ ಇದಕ್ಕೆ ರಾಜ್ ಕುಮಾರ್ ಒಪ್ಪದೇ ಇದ್ದಾಗ ಸುಧೀರ್ ಕುಮಾರ್ ರಾಜ್ ಕುಮಾರ್ ಮೇಲೆ ಗುಂಡು ಹಾರಿಸಿದ್ದಾನೆ.

ಘಟನೆ ನಡೆಯುತ್ತಿದ್ದಂತೆಯೇ ಇಬ್ಬರೂ ಕೂಡ ಸ್ಥಳದಿಂದ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ರಾಜ್ ಕುಮಾರ್ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ದೌಡ್ ನಗರ ಠಾಣೆಯ ಪೊಲೀಸರು ಇಬ್ಬರನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular