ಭಾನುವಾರ, ಏಪ್ರಿಲ್ 27, 2025
HomeCoastal Newsಸರ ಕಳವಿನ ವೇಳೆ ಕೂಗಿಕೊಂಡ ಮಹಿಳೆ : ಚಿನ್ನದ ಸರ ಬಿಟ್ಟು ಪರಾರಿಯಾದ ಸರಗಳ್ಳರು.!

ಸರ ಕಳವಿನ ವೇಳೆ ಕೂಗಿಕೊಂಡ ಮಹಿಳೆ : ಚಿನ್ನದ ಸರ ಬಿಟ್ಟು ಪರಾರಿಯಾದ ಸರಗಳ್ಳರು.!

- Advertisement -

ಮಂಗಳೂರು : ಕರಾವಳಿ ಭಾಗದಲ್ಲೀಗ ಸರಗಳ್ಳರ ಹಾವಳಿ ಮಿತಿಮೀರಿದೆ. ಮಂಗಳೂರು ಹೊರವಲಯದ ತೊಕ್ಕಟ್ಟಿನಲ್ಲಿಯೂ ಸರಗಳವಿಗೆ ವಿಫಲ ಯತ್ನ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಅದೃಷ್ಟವಶಾತ್ ಮಹಿಳೆ ಕೂಗಿಕೊಳ್ಳುತ್ತಿದ್ದಂತೆಯೇ ಕತ್ತಿನಲ್ಲಿಯೇ ಸರಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ.

ಲಕ್ಷ್ಮೀ ಶೆಟ್ಟಿ (30 ವರ್ಷ) ಎಂಬಾಕೆ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆಯಲ್ಲಿ ಹಿಂಬದಿಯಿಂದ ಬೈಕಿನಲ್ಲಿ ಬಂದ ಇಬ್ಬರು ಸರಗಳ್ಳರು ಸರ ಕಳವಿಗೆ ಯತ್ನಿಸಿದ್ದಾರೆ. ಸರ ತುಂಡಾಗಿ ರಸ್ತೆಯಲ್ಲಿ ಬೀಳುತ್ತಿದ್ದಂತೆಯೇ ಕಳ್ಳರು ಸರ ಎತ್ತಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆಯಲ್ಲಿ ಮಹಿಳೆ ಜೋರಾಗಿ ಕೂಗಿಕೊಂಡಿದ್ದಾರೆ. ಇದರಿಂದ ಭಯಗೊಂಡ ಕಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ದಾರಿಯಲ್ಲಿ ಬರುತ್ತಿದ್ದ ಯುವಕರು ಬೈಕಿನಲ್ಲಿ ಕಳ್ಳರನ್ನು ಬೆನ್ನಟ್ಟಿದ್ದರೂ ಕೂಡ ಕಳ್ಳರು ಪರಾರಿಯಾಗಿದ್ದಾರೆ. ನಗರದಲ್ಲಿ ಸರಗಳ್ಳತನ ಪ್ರಕರಣ ಹೆಚ್ಚುತ್ತಿದ್ದು, ಜನರು ಒಬ್ಬಂಟಿಯಾಗಿ ಓಡಾಡೋದಕ್ಕೂ ಕೂಡ ಭಯ ಪಡುವ ವಾತಾವರಣ ನಿರ್ಮಾಣವಾಗಿದೆ.
ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಉಳ್ಳಾಲ ಠಾಣೆಯ ಪೊಲೀಸರು ಸರಗಳ್ಳರಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular