ಕ್ರೈಂ ಧಾರವಾಹಿ ಪ್ರೇರಣೆ : 11 ವರ್ಷದ ಬಾಲಕನನ್ನು ಅಪಹರಿಸಿ ಕೊಂದ ಯುವಕರು

ಹಾವೇರಿ: ಇತ್ತೀಚಿನ ದಿನಗಳಲ್ಲಿ ಕ್ರೈಂ ಥ್ರಿಲ್ಲರ್ ಧಾರಾವಾಹಿಗಳು ಜನರ ಮೇಲೆ ಎಂತಹ ಪರಿಣಾಮ ಬೀರುತ್ತಿದೆ ಅನ್ನೋದಕ್ಕೆ ಈ ಸ್ಟೋರಿ ಬೆಸ್ಟ್ ಎಕ್ಸಾಂಪಲ್. ಬಾಲಾಪರಾಧಿ ಸೇರಿದಂತೆ ಇಬ್ಬರು ಯುವಕರು ಸೇರಿಕೊಂಡು 11 ವರ್ಷದ ಬಾಲಕನನ್ನು ಅಪಹರಿಸಿ ಕೊಲೆ ಮಾಡಿ ಸುಟ್ಟು ಹಾಕಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.

ಹಾವೇರಿಯ ಅಶ್ವಿನಿ ನಗರ ನಿವಾಸಿ ತೇಜಸ್ ಗೌಡ ಮಲ್ಲಿಕೇರಿ ಎಂಬ ಬಾಲಕ ಮಾರ್ಚ್ 7ರಂದು ನಾಪತ್ತೆಯಾಗಿದ್ದ. ಕುರಿತು ಬಾಲಕನ ತಂದೆ ಜಗದೀಶ್ ಮಲ್ಲಿಕೇರಿ ನಗರದ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಯುವಕನ ಮನೆ ಸಮೀಪದ ಯುವಕರಾದ ರಿತೇಶ್ ಬಿ ಮೇಟಿ(20) ಮತ್ತು ಆತನ 17 ವರ್ಷದ ಸಹೋದರ ಇಬ್ಬರು ಸೇರಿ ತೇಜಸ್ ಗೌಡ ಅನುಮಾನಾ ಸ್ಪದವಾಗಿ ವರ್ತಿಸುತ್ತಿದ್ದ. ಪೊಲೀಸರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಂತೆಯೇ ಕೊಲೆ ಹಿಂದಿನ ರಹಸ್ಯವನ್ನು ಬಾಯ್ಬಿಟ್ಟಿದ್ದಾರೆ.

https://kannada.newsnext.live/manipal-student-harassment-two-persons-arrest/


ತೇಜಸ್ ಗೌಡ ನನ್ನು ಅಪಹರಿಸಿ ಅವರ ತಂದೆಯಿಂದ ಹಣ ಪಡೆಯುವ ಉದ್ದೇಶ ಹೊಂದಿದ್ದರು. ಆದರೆ ಹುಡುಗನನ್ನು ಬಿಡುಗಡೆ ಮಾಡಿದ ನಂತರ ಆತ ಎಲ್ಲಿ ತಮ್ಮ ಗುರುತನ್ನು ಬಹಿರಂಗ ಪಡಿಸುತ್ತಾನೋ ಎಂಬ ಭಯದಿಂದ ಅದೇ ದಿನ ಬಾಲಕನ ಕತ್ತು ಹಿಸುಕಿ ಸಾಯಿಸಿ ನದಿಗೆ ಎಸೆದು ಬಂದಿದ್ದರು.

https://kannada.newsnext.live/model-preksha-mangalore-death-case-arrest/

ನಂತರ ಎಲ್ಲಿ ಆತನ ಮೃತದೇಹ ಮೇಲಕ್ಕೆ ಬಂದು ಪೊಲೀಸರು ತಮ್ಮನ್ನು ಬಂಧಿಸುತ್ತಾರೆ ಅಂತಾ ಹೆದರಿ ಮೃತದೇಹವನ್ನು ತಂದು ಅರೆಬರೆ ಸುಟ್ಟು ಪರಾರಿಯಾಗಿದ್ದರು. ಆದರೆ ಪ್ರಕರಣ ಬಗ್ಗೆ ತನಿಖೆಗೆ ಇಳಿದಿದ್ದ ಪೊಲೀಸರು ಕೊನೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Comments are closed.