Cylinder Blast 2 Death : ಸಿಲಿಂಡರ್‌ ಸ್ಪೋಟ : ಬೆಂಕಿ ನಂದಿಸಲು ಬಂದ ಯುವಕರಿಬ್ಬರ ದುರ್ಮರಣ

ವಿಜಯನಗರ : ಎಗ್‌ ರೈಸ್‌ ಅಂಗಡಿಯಲ್ಲಿ ಸಿಲಿಂಡರ್‌ ಸ್ಪೋಟಗೊಂಡು (Cylinder Blast ) ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸಂಕ್ಲಾಪುರ ಎಂಬಲ್ಲಿ ನಡೆದಿದೆ.

ಶಿವಪ್ಪ (28 ವರ್ಷ), ಶ್ರೀಕಾಂತ್‌ (23 ವರ್ಷ) ಎಂಬವರೇ ಮೃತಪಟ್ಟವರು. ಕೂಡ್ಲಿಗಿ ತಾಲೂಕಿನ ಸಂಕ್ಲಾಪುರ ಎಂಬಲ್ಲಿರುವ ಮೊಂಡ ಬೋರಯ್ಯ ಎಂಬವರಿಗೆ ಸೇರಿದ ಎಗ್‌ರೈಸ್‌ ಅಂಡಗಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆಯಲ್ಲಿ ಶ್ರೀಕಾಂತ್‌ ಹಾಗೂ ಶಿವಪ್ಪ ಎಂಬವರು ಬೆಂಕಿ ನಂದಿಸಲು ಅಂಗಡಿಯ ಬಳಿಗೆ ಬಂದಿದ್ದರು. ಈ ವೇಳೆಯಲ್ಲಿ ಸಿಲಿಂಡರ್‌ ಒಮ್ಮಿಂದೊಮ್ಮೆಲೆ ಸ್ಪೋಟಗೊಂಡಿದೆ.

ಶ್ರೀಕಾಂತ್‌ ಹಾಗೂ ಶಿವಪ್ಪ ಘಟನೆಯಲ್ಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಅಂಗಡಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಅಲ್ಲದೇ ಅಕ್ಕ ಪಕ್ಕದ ಮನೆಗಳಿಗೂ ಬೆಂಕಿ ವ್ಯಾಪಿಸುವ ಆತಂಕ ಎದುರಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.

ಇದನ್ನೂ ಓದಿ : Tuition Center Rape Case : ಟ್ಯೂಷನ್‌ ನೆಪದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ

ಇದನ್ನೂ ಓದಿ : ಶಾಸಕರೊಬ್ಬರ ಮರ್ಸಿಡಿಸ್ ಕಾರಿನಲ್ಲಿ ಬಾಲಕಿಯ ಮೇಲೆ ಬಾಲಕರಿಂದ ಸಾಮೂಹಿಕ ಅತ್ಯಾಚಾರ

Cylinder Blast 2 Death in Vijayanagar

Comments are closed.