ಸೋಮವಾರ, ಜೂನ್ 16, 2025
HomeCrimeAccident 3 death : ಗಣೇಶ ಚೌತಿ ತಂತು ಆಪತ್ತು : ಟಾಟಾ ಏಸ್‌ ಬೈಕ್‌...

Accident 3 death : ಗಣೇಶ ಚೌತಿ ತಂತು ಆಪತ್ತು : ಟಾಟಾ ಏಸ್‌ ಬೈಕ್‌ ಢಿಕ್ಕಿ, ಮೂವರ ದುರ್ಮರಣ

- Advertisement -

ದಾವಣಗೆರೆ : ಗಣೇಶ ಮೂರ್ತಿ ಕೂರಿಸಲು ಪೊಲೀಸರಿಂದ ಅನುಮತಿ ಪಡೆದು ವಾಪಾಸಾಗುತ್ತಿದ್ದ ವೇಳೆಯಲ್ಲಿ ಟಾಟಾ ಏಸ್‌ ಹಾಗೂ ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ರಾಜಗೊಂಡನಹಳ್ಳಿಯಲ್ಲಿ ನಡೆದಿದೆ

ಚನ್ನಗಿರಿ ತಾಲೂಕಿನ ಮಲ್ಲೇಶ್ವರ ಗ್ರಾಮದ ಅಜ್ಜಯ್ಯ (21 ವರ್ಷ), ದೇವರಾಜ (18 ವರ್ಷ), ಮಂಜುನಾಥ್ (18 ವರ್ಷ) ಎಂಬವರೇ ಮೃತ ದುರ್ದೈವಿಗಳು. ಮೂವರು ಯುವಕರು ಒಂದೇ ಬೈಕಿನಲ್ಲಿ ಚೆನ್ನಗಿರಿ ಪೊಲೀಸ್‌ ಠಾಣೆಗೆ ತೆರಳಿದ್ದಾರೆ. ಗಣೇಶನನ್ನು ಕೂರಿಸಿಲು ಪೊಲೀಸರಿಂದ ಅನುಮತಿಯನ್ನು ಪಡೆದು ವಾಪಾಸಾಗುತ್ತಿದ್ದರು.

ಮೂವರು ಯುವಕರು ಬೈಕಿನಲ್ಲಿ ರಾಜಗೊಂಡನಹಳ್ಳಿಯ ಬಳಿಗೆ ಬರುತ್ತಿದ್ದಂತೆಯೇ ಟಾಟಾ ಏಸ್‌ ವಾಹನ ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಚೆನ್ನಗಿರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಅಂಡರ್‌ವೇರ್‌ ಜೇಬಿನಲ್ಲಿತ್ತು 9 ಕೆಜಿ ಚಿನ್ನ ! ಸಿನಿಮೀಯ ರೀತಿಯಲ್ಲಿ ಸೆರೆ ಹಿಡಿದ ಪೊಲೀಸರು

ಇದನ್ನೂ ಓದಿ : ಮನೆ ಬಿಟ್ಟು ಓಡಿ ಹೋಗಿದ್ದ 14 ವರ್ಷದ ಬಾಲಕಿಯ ಮೇಲೆ 13 ಮಂದಿಯಿಂದ ಅತ್ಯಾಚಾರ

(Three persons were killed on the spot in a serious accident between tata ace and bike while returning with permission at Rajagondanahalli in Chennagiri taluk of Davangere district )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular