murder at bengaluru : 50 ರೂಪಾಯಿಗಾಗಿ ಸ್ನೇಹಿತರ ನಡುವೆ ಕಿತ್ತಾಟ :ಆಪ್ತಮಿತ್ರನಿಂದಲೇ ಸ್ನೇಹಿತನ ಕಗ್ಗೊಲೆ

ಬೆಂಗಳೂರು : murder at bengaluru : ಸಂಬಂಧ ಯಾವುದೇ ಇರಲಿ. ಅಲ್ಲಿ ಹಣದ ವ್ಯವಹಾರ ಬರಬಾರದು. ಅದು ಎಂತಹ ಒಳ್ಳೆಯ ಸಂಬಂಧವನ್ನಾದರೂ ಹಾಳು ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದೇ ಮಾತಿಗೆ ಸ್ಪಷ್ಟ ಉದಾಹರಣೆ ಎಂಬಂತೆ ಬೆಂಗಳೂರಿನ ಬಸವೇಶ್ವರ ನಗರ ಠಾಣಾ ವ್ಯಾಪ್ತಿಯಲ್ಲಿ ಕೇವಲ 50 ರೂಪಾಯಿಗಾಗಿ ಸ್ನೇಹಿತರ ನಡುವೆ ನಡೆದಿದ್ದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ. ಮಂಗಳವಾರ ರಾತ್ರಿ ವೇಳೆಗೆ ಈ ಘಟನೆ ಸಂಭವಿಸಿದೆ. ಕೊಲೆಯಾದ ಯುವಕನನ್ನು 24 ವರ್ಷದ ಶಿವಮಾಧು ಎಂದು ಗುರುತಿಸಲಾಗಿದೆ. ಶಿವಮಾಧು ಸ್ನೇಹಿತ ಶಾಂತ ಕುಮಾರ್​ ಎಂಬಾತ ಚಾಕುವಿನಿಂದ ಇರಿದು ಈ ಕೊಲೆಗೈದಿದ್ದಾನೆ.


ಆರೋಪಿ ಶಾಂತಕುಮಾರ್​ ಹಾಗೂ ಶಿವಮಾಧು ಬಾಲ್ಯದ ಸ್ನೇಹಿತರು. ಕುರುಬರಹಳ್ಳಿ ಸರ್ಕಲ್​​ ಬಳಿಯೇ ಇದ್ದ ಇಬ್ಬರು ಕೆಲವು ವರ್ಷಗಳ ಹಿಂದೆ ಲಗ್ಗೆರೆ ಶಿಫ್ಟ್​ ಆಗಿದ್ದರು. ಶಾಂತ ಕುಮಾರ್​ ವೃತ್ತಿಯಲ್ಲಿ ಜೊಮ್ಯಾಟೋ ಡೆಲಿವರಿ ಬಾಯ್​ ಆಗಿದ್ದರೆ ಮೃತ ಶಿವ ಮಾಧು ಆಟೋ ಚಾಲಕ. ಇಬ್ಬರು ಆಗಾಗ ತಮ್ಮ ಹಳೆಯ ಅಡ್ಡಾಗಳಿಗೆ ಭೇಟಿ ನೀಡುತ್ತಿದ್ದರು. ಮಂಗಳವಾರ ಕೂಡ ಇವರು ಕ್ರಿಕೆಟ್​ ಆಡಬೇಕೆಂದು ಒಬ್ಬರನ್ನೊಬ್ಬರು ಭೇಟಿಯಾಗಿದ್ದಾರೆ. ಕ್ರಿಕೆಟ್​ ಮುಗಿದ ಬಳಿಕ ಇಬ್ಬರು ಸೈಬರ್​ ಸೆಂಟರ್​ಗೆ ತೆರಳಿದ್ದರು.


ಶಾಂತಕುಮಾರ್​ ಜೇಬಿನಲ್ಲಿದ್ದ 50 ರೂಪಾಯಿ ನೋಟನ್ನು ಶಿವಮಾಧು ಆತನನ್ನು ಕೇಳದೆಯೇ ತೆಗೆದುಕೊಂಡಿದ್ದ. ಇದರಿಂದ ಕೋಪಗೊಂಡ ಶಾಂತಕುಮಾರ್​ ನನ್ನ ಹಣ ವಾಪಸ್​ ನೀಡು ಎಂದಿದ್ದಾನೆ. ಇದಕ್ಕೆ ತಮಾಷೆಯಾಗಿ ಶಿವಮಾಧು ನಾನು ಹಣ ನೀಡಲ್ಲ ಎಂದು ಹೇಳಿದ್ದಾನೆ. ಇಷ್ಟಕ್ಕೆ ಇಬ್ಬರ ನಡುವಿನ ಜಗಳ ತಾರಕಕ್ಕೇರಿದೆ. ಶಾಂತಕುಮಾರ್​ ತನ್ನ ಬಳಿಯಿದ್ದ ಚಾಕುವನ್ನು ತೆಗೆದು ಶಿವ ಮಾಧು ಎದೆಗೆ ಚುಚ್ಚಿದ್ದಾನೆ. ಶಿವಮಾಧುವನ್ನು ಆಸ್ಪತ್ರೆಗೆ ದಾಖಲಿಸಲಾಯ್ತಾದರೂ ತೀವ್ರ ರಕ್ತಸ್ರಾವದಿಂದ ಆತ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಬಸವೇಶ್ವರ ನಗರ ಠಾಣಾ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಪರಾರಿಯಾಗಿರುವ ಶಾಂತಕುಮಾರ್​ಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಇದನ್ನು ಓದಿ : Chakda Xpress : ಸಿನಿಮಾಕ್ಕೆ ಮತ್ತೆ ಮರಳಿದ ಅನುಷ್ಕ ಶರ್ಮ

ಇದನ್ನೂ ಓದಿ : BCCI warnings : ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಬಿಸಿಸಿಐ ವಾರ್ನಿಂಗ್‌

friends fight for 50 rupees ends in murder at bengaluru

Comments are closed.