ಬೆಂಗಳೂರು : girl dies in bengaluru : ಮನೆ ಮಾಲೀಕನ ಯಡವಟ್ಟಿಗೆ ಆರು ವರ್ಷದ ಪುಟ್ಟ ಬಾಲಕಿ ಪ್ರಾಣ ಪಕ್ಷಿಯೇ ಹಾರಿ ಹೋದ ಘಟನೆಯು ಬೆಂಗಳೂರಿನ ವಸಂತನಗರದಲ್ಲಿ ನಡೆದಿದೆ.ಮನೆಯಲ್ಲಿ ಕಾಟ ನೀಡುತ್ತಿದ್ದ ತಿಗಣೆಯನ್ನು ನಿಯಂತ್ರಣಕ್ಕೆ ತರಲು ಮನೆ ಮಾಲೀಕ ಕ್ರಿಮಿನಾಶಕವನ್ನು ಸಿಂಪಡಣೆ ಮಾಡಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಮೃತಪಟ್ಟ ಬಾಲಕಿಯನ್ನು ಅಹಾನಾ(6) ಎಂದು ಗುರುತಿಸಲಾಗಿದೆ.
ಅಹನಾಳ ತಂದೆ ವಿನೋದ್ ಹಾಗೂ ತಾಯಿ ನಿಶಾ ಮೂಲತಃ ಕೇರಳದವರು. ಎಂಬಿಎ ಪದವಿಧರರಾದ ವಿನೋದ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ವಸಂತನಗರದ ಮಾರಮ್ಮ ದೇವಸ್ಥಾನದ ಸಮೀಪವೇ ಇದ್ದ ಎಸ್. ಶಿವಪ್ರಸಾದ್ ಎಂಬವರಿಗೆ ಸೇರಿದ ಮೂರು ಬಾಡಿಗೆ ಮನೆಗಳ ಪೈಕಿ ಒಂದರಲ್ಲಿ ಅಹಾನಾಳ ಕುಟುಂಬ ವಾಸವಿತ್ತು. ಈ ಬಾಡಿಗೆ ಮನೆಗಳಲ್ಲಿ ತಿಗಣೆಯ ಕಾಟ ಮಿತಿಮೀರಿತ್ತು.
ಕಟ್ಟಡದಲ್ಲಿ ಹೆಚ್ಚಾಗಿದ್ದ ತಿಗಣೆ ಕಾಟವನ್ನು ನಿಯಂತ್ರಣಕ್ಕೆ ತರಬೇಕೆಂದು ಶಿವಪ್ರಸಾದ್ ತಮ್ಮ ನಿವಾಸವೂ ಸೇರಿದಂತೆ ಒಟ್ಟು ನಾಲ್ಕು ಮನೆಗಳಲ್ಲಿ ಕ್ರಿಮಿ ನಾಶಕವನ್ನು ಸಿಂಪಡಣೆ ಮಾಡಿಸಿದ್ದಾರೆ. ಜುಲೈ 27ರಂದು ಕ್ರಿಮಿನಾಶಕ ಸಿಂಪಡಣೆ ಮಾಡಿಸಿದ್ದ ಶಿವಪ್ರಸಾದ್ ಮುನ್ನೆಚ್ಚರಿಕಾ ಕ್ರಮವಾಗಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಕುಟುಂಬಕ್ಕೆ ಬೇರೆಡೆ ಶಿಫ್ಟ್ ಆಗಿ ಎಂದು ಹೇಳಿದ್ದಾರೆ.
ವಿನೋದ್ ನಿವಾಸವನ್ನು ಹೊರತುಪಡಿಸಿ ಬಾಡಿಗೆದಾರರು ಜುಲೈ 31ರಂದು ತಮ್ಮ ಮನೆಗೆ ಮರಳಿದ್ದರು. ವಿನೋದ್ ಹಾಗೂ ಪತ್ನಿ ನಿಶಾ ಮತ್ತು ಪುತ್ರಿ ಅಹಾನಾ ಆಗಸ್ಟ್ 1ರ ಮುಂಜಾನೆ ತಮ್ಮ ನಿವಾಸಕ್ಕೆ ಮರಳಿದ್ದಾರೆ. ಮನೆಗೆ ಆಗಮಿಸಿದ ಈ ಕುಟುಂಬ ಕಾಫಿ ಸೇವನೆ ಮಾಡಿದೆ.ಇಆದ ಬಳಿಕ ಮೂವರಿಗೂ ವಾಂತಿ ಆರಂಭಗೊಂಡಿದೆ. ಮೂವರಿಗೂ ಉಸಿರಾಡಲು ಸಮಸ್ಯೆ ಉಂಟಾಗುತ್ತಿದ್ದಂತೆಯೇ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಐಸಿಯುವಿನಲ್ಲಿ ಮೂವರಿಗೂ ಚಿಕಿತ್ಸೆ ನೀಡಲಾಯ್ತಾದರೂ ಅಹಾನಾ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ನಿಶಾ ಹಾಗೂ ವಿನೋದ್ ಸ್ಥಿತಿ ಕೂಡ ಗಂಭೀರವಾಗಿ ಇರುವುದರಿಂದ ಅವರಿಗೆ ಇನ್ನೂ ಅಹಾನಾ ಸಾವಿನ ವಾರ್ತೆಯನ್ನು ಕುಟುಂಬಸ್ಥರು ನೀಡಿಲ್ಲ. ಆದರೆ ನಿಶಾ ಸಹೋದರಿ ಲತಾ ಎಂಬವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದು ಶಿವಪ್ರಸಾದ್ರ ನಿರ್ಲಕ್ಷ್ಯದಿಂದಲೇ ಈ ಅವಘಡ ಸಂಭವಿಸಿದೆ ಎಂದು ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಮನೆ ಮಾಲೀಕ ಶಿವಪ್ರಸಾದ್ರನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನು ಓದಿ : Amit Shah will arrive in Bangalore : ಅತ್ತ ಸಿದ್ದರಾಮೋತ್ಸವ.. ಇತ್ತ ಅಮಿತ್ ಶಾ ಬೆಂಗಳೂರಿಗೆ ಆಗಮನ : ಏನಿದು ರಾಜಕೀಯ ತಂತ್ರ
ಇದನ್ನೂ ಓದಿ : Monkeypox Vs Chickenpox : ಮಂಕಿಪಾಕ್ಸ್ ಮತ್ತು ಚಿಕನ್ಪಾಕ್ಸ್ ನ ವ್ಯತ್ಯಾಸ ನಿಮಗೆ ಗೊತ್ತೇ? ಇವೆರಡರ ರೋಗಲಕ್ಷಣಗಳೇನು?
girl dies in bengaluru after inhaling pesticide
Comments are closed.