Murder mystery: ಸೊಸೆಯ ಮೇಲೆ ಕಣ್ಣು ಹಾಕಿದ್ದ ಮಾವ ಹೆಣವಾದ; ಸುಪಾರಿ ಕೊಟ್ಟು ಬೀಗರಿಂದಲೇ ಮರ್ಡರ್..!

ಹಾಸನ:Murder mystery: ಮನೆಗೆ ಬಂದ ಸೊಸೆಯನ್ನು ಮಗಳಂತೆ ನೋಡಿಕೊಳ್ಳುವುದು ಗಂಡನ ಮನೆಯವರ ಕರ್ತವ್ಯ. ಅದರಲ್ಲೂ ಅತ್ತೆ- ಮಾವ ಸೊಸೆಯನ್ನು ಮಗಳಂತೆ ನೋಡಿಕೊಂಡರೆ ಆ ಮನೆಯಲ್ಲಿ ಶಾಂತಿ, ಸಂತೋಷ ತುಂಬಿರುತ್ತದೆ. ಆದರೆ ಹಾಸನದಲ್ಲೊಬ್ಬ ಮಾವ ಸೊಸೆ ಮೇಲೆಯೇ ಕಣ್ಣುಹಾಕಿದ್ದ. ಆಕೆಯನ್ನು ಕಾಮದ ಕಣ್ಣಿನಿಂದ ನೋಡುತ್ತಿದ್ದ. ಪ್ರತಿನಿತ್ಯ ಕಿರುಕುಳ ನೋಡುತ್ತಿದ್ದ. ಆದರೆ ಇದೀಗ ಆತ ಹೆಣವಾಗಿ ಹೋಗಿದ್ದಾನೆ. ಮಗಳಿಗೆ ಕಾಟ ಕೊಡುತ್ತಿದ್ದ ಅನ್ನೋ ಕಾರಣಕ್ಕೆ ಸೊಸೆಯ ತವರು ಮನೆಯವರೇ ಸುಪಾರಿ ನೀಡಿ ಮಾವನನ್ನು ಕೊಲೆಗೈದಿದ್ದಾರೆ. ತಮ್ಮೇಗೌಡ(55) ಕೊಲೆಯಾಗಿರುವ ವ್ಯಕ್ತಿ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ದೊಡ್ಡಿಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ನವೆಂಬರ್ 13ರಂದು ರಾಗಿಕಾವಲು ಗ್ರಾಮದ ಹೊಸಕೆರೆಯ ಕೆರೆಯಲ್ಲಿ ತಮ್ಮೇಗೌಡನ ಮೃತದೇಹ ಪತ್ತೆಯಾಗಿತ್ತು. ಆತನ ಮುಖವನ್ನು ಪ್ಲಾಸ್ಟಿಕ್ ಚೀಲದಿಂದ ಸುತ್ತಿ ಶವವನ್ನು ಕೆರೆಗೆ ಎಸೆಯಲಾಗಿತ್ತು. ತಮ್ಮೇಗೌಡನ ಮಗ ಕುಮಾರ್ ಪೊಲೀಸರಿಗೆ ದೂರು ನೀಡಿದ್ದ. ಆ ದೂರನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದರು. ಸದ್ಯ ಇದೀಗ ಕೊಲೆಯ ರಹಸ್ಯ ಬಯಲಾಗಿದೆ.

ಇದನ್ನೂ ಓದಿ: Gang war: ದರೋಡೆಕೋರ ರಾಜು ಥೇತ್ ಗೆ ಗುಂಡಿಕ್ಕಿ ಹತ್ಯೆ

ಪೊಲೀಸರಿಗೆ ದೂರು ನೀಡಿದ್ದ ತಮ್ಮೇಗೌಡನ ಮೂರನೇ ಮಗ ಕುಮಾರನ ಪತ್ನಿ ನಾಗರತ್ನಳ ಮೇಲೆಯೇ ತಮ್ಮೇಗೌಡ ಕಣ್ಣು ಹಾಕಿದ್ದನಂತೆ. ಕುಮಾರನ ಮದುವೆ ನಡೆದು ಕೆಲವು ವರ್ಷಗಳಾಗಿವೆ. ಆದರೆ ಮಕ್ಕಳಾಗಿರಲಿಲ್ಲ. ಈ ವಿಚಾರವನ್ನೇ ಬಂಡವಾಳ ಮಾಡಿಕೊಂಡು ಮಾವ ಸೊಸೆಗೆ ಟಾರ್ಚರ್ ಕೊಡುತ್ತಿದ್ದ. ಅಂದಹಾಗೆ ಕುಮಾರ್ ಸ್ವಲ್ಪ ಬುದ್ಧಿಮಾಂದ್ಯನಾಗಿದ್ದ. ಆದರೆ ಈ ವಿಚಾರವನ್ನು ಮುಚ್ಚಿಟ್ಟು ನಾಗರತ್ನ ಜೊತೆ ಮದುವೆ ಮಾಡಲಾಗಿತ್ತು. ಮದುವೆ ಬಳಿಕ ವಿಷಯ ತಿಳಿದರೂ ನಾಗರತ್ನ ಹೊಂದಾಣಿಕೆ ಮಾಡಿಕೊಂಡು ಸಂಸಾರ ನಡೆಸಿಕೊಂಡು ಹೋಗುತ್ತಿದ್ದಳು. ಆದರೆ ಅತ್ತ ಮಾವ ನಾಗರತ್ನಳ ಹಿಂದೆ ಬಿದ್ದಿದ್ದ. ಕುಮಾರ ಬುದ್ಧಿಮಾಂದ್ಯ. ಹೀಗಾಗಿ ಆತನಿಗೆ ಮಕ್ಕಳಾಗುವ ಸಾಧ್ಯತೆಯಿಲ್ಲ. ಒಂದು ವೇಳೆ ಮಕ್ಕಳಾದರೂ ಅಪ್ಪನಂತೆ ಬುದ್ಧಿಮಾಂದ್ಯರಾಗಿ ಹುಟ್ಟಬಹುದು. ಹೀಗಾಗಿ ನಾನೇ ನಿನಗೆ ಮಕ್ಕಳನ್ನು ಕರುಣಿಸುತ್ತೇನೆ ಎಂದು ಹೇಳಿ ಪುಸಲಾಯಿಸಲು ಯತ್ನಿಸುತ್ತಿದ್ದ.

ನಾಗರತ್ನ ಇದಕ್ಕೆ ಒಪ್ಪದಿದ್ದರೂ ಪ್ರತಿನಿತ್ಯ ಅದನ್ನೇ ಹೇಳಿ ಕಾಟ ಕೊಡುತ್ತಿದ್ದ. ಕೊನೆಗೂ ಮಾವನ ಕಾಟಕ್ಕೆ ಬೇಸತ್ತ ಸೊಸೆ ನಾಗರತ್ನ ಈ ವಿಚಾರವನ್ನು ತನ್ನ ತವರು ಮನೆಯವರಿಗೆ ತಿಳಿಸಿದ್ದಾಳೆ. ಕಾಮುಕ ತಮ್ಮೇಗೌಡನಿಗೆ ಗತಿ ಕಾಣಿಸಬೇಕೆಂದು ನಾಗರತ್ನಳ ಹೆತ್ತವರಾದ ಮೈಲಾರಿಗೌಡ ಮತ್ತು ತಾಯಮ್ಮ ತಮ್ಮ ಬಂಧುಗಳ ನೆರವಿನಿಂದ ಕೊಲೆಗೆ ಸ್ಕೆಚ್ ಹಾಕಿದ್ದಾರೆ. ತಮ್ಮೇಗೌಡನಿಗೆ ಮನೆಯಲ್ಲಿ ಮದ್ಯಪಾನ ಮಾಡಿಸಿ ರಾಡ್ ನಿಂದ ಹೊಡೆದು ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ಶವವನ್ನು ಕೆರೆಗೆ ಎಸೆದಿದ್ದಾರೆ.

ಇದನ್ನೂ ಓದಿ: Bomb explosion: ಪಶ್ಚಿಮ ಬಂಗಾಳದ ಟಿಎಂಸಿ ನಾಯಕನ ಮನೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ; ಮೂವರು ಸಾವು, ಇಬ್ಬರಿಗೆ ಗಾಯ

ಪ್ರಕರಣ ಭೇದಿಸಿದ ಪೊಲೀಸರು ಕೊಲೆಗೆ ಸುಪಾರಿ ನೀಡಿದ ಮೈಲಾರಿಗೌಡ ಹಾಗೂ ತಾಯಮ್ಮ ಮತ್ತು ಕೊಲೆ ಮಾಡಿದ ಯೋಗೇಶ್, ಚಂದ್ರೇಗೌಡನನ್ನು ಬಂಧಿಸಿದ್ದಾರೆ. ಹಳ್ಳಿಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Murder mystery: A man killed in Hasan for sexually harassing his own daughter in law

Comments are closed.