ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ : ಪೊಲೀಸರ ಮುಂದೆ ಸಂತ್ರಸ್ತೆಯ ಸ್ನೇಹಿತನ ಹೇಳಿದ್ದೇನು ಗೊತ್ತಾ ?

ಮೈಸೂರು : ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಇದೀಗ ಸಂತ್ರಸ್ತೆಯ ಸ್ನೇಹಿತನ ಹೇಳಿಕೆಯನ್ನು ಪೊಲೀಸರು ದಾಖಲಿಸಿದ್ದು, ಸ್ನೇಹಿತ ಏನು ಹೇಳಿಕೆ ನೀಡಿದ್ದಾನೆ ಅನ್ನೋ ಮಾಹಿತಿ ಇಲ್ಲಿದೆ.

ಆವತ್ತು ಸಂಜೆ 6.30ರ ಹೊತ್ತಲ್ಲಿ ನಾನು ಮತ್ತು ಸ್ನೇಹಿತೆ ಲಲಿತಾದ್ರಿಪುರ ಬಡಾವಣೆಗೆ ವಾಕಿಂಗ್‌ಗೆ ತೆರಳಿದ್ದೇವು. ಈ ವೇಳೆಯಲ್ಲಿ ನಾಲ್ವರು ನಮ್ಮ ಮೇಲೆ ಎರಗಿದ್ದಾರೆ. ನನ್ನ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ನಾನು ಪ್ರಜ್ಞೆ ತಪ್ಪಿದ್ದೇನೆ. ನನಗೆ ಪ್ರಜ್ಞೆ ಬಂದಾಗ ನಾಲ್ವರು ಕೂಡ ನನ್ನ ಸುತ್ತುವರಿದಿದ್ದರು.

ನನ್ನ ತಂದೆಗೆ ಕರೆ ಮಾಡಿ ಸುಮಾರು ಮೂರು ಲಕ್ಷ ರೂಪಾಯಿ ಹಣ ತರುವಂತೆ ಬೆದರಿಕೆಯೊಡ್ಡಿದ್ದಾರೆ. ಪ್ರಜ್ಞೆ ಬಂದ ನಂತರದಲ್ಲಿ ಸ್ನೇಹಿತೆ ಎಲ್ಲಿ ಎಂದು ಕೇಳಿದ್ದೇನೆ. ನಂತರ ಆಕೆಯನ್ನು ದುಷ್ಕರ್ಮಿಗಳು ಪೊದೆಯಿಂದ ಕರೆತಂದಿದ್ದಾರೆ. ಆಕೆಯ ಮೇಲೆಯೂ ಕಾಮುಕರು ಹಲ್ಲೆಯನ್ನು ನಡೆಸಿದ್ದರು. ಇದರಿಂದಾಗಿ ಆಕೆ ಅಸ್ವಸ್ಥಗೊಂಡಿದ್ದು, ಗಾಯಗೊಂಡಿದ್ದಳು. ಹೀಗಾಗಿ ಅವಳನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದೇವೆ ಎನ್ನುವ ಹೇಳಿಕೆಯನ್ನು ಸಂತ್ರಸ್ತೆಯ ಸ್ನೇಹಿಕ ನೀಡಿದ್ದಾನೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ :‌ ಯುವತಿಯ ವಿಡಿಯೋ ಮಾಡಿ 3 ಲಕ್ಷಕ್ಕೆ ಬೇಡಿಕೆಯಿಟ್ಟ ಕಾಮುಕರು : ಮೊಬೈಲ್‌ ಟವರ್‌ ಆಧರಿಸಿ ತನಿಖೆ

ಇದನ್ನೂ ಓದಿ : ಮೈಸೂರು ಗ್ಯಾಂಗ್‌ರೇಪ್‌ : ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಕ್ಷಮೆ ಯಾಚಿಸಿದ ಆರಗ ಜ್ಞಾನೇಂದ್ರ

Comments are closed.