ಶಬರಿಮಲೆ ದೇವಸ್ಥಾನ ಚಿನ್ನ ಕಳುವು ಪ್ರಕರಣ : ವೈಜ್ಞಾನಿಕ ಪರೀಕ್ಷೆಗೆ ನಡೆಸಲು ಹೈಕೋರ್ಟ್ ಅನುಮತಿ

ಶಬರಿಮಲೆ ದೇವಸ್ಥಾನದಲ್ಲಿ ಚಿನ್ನ ಕಳುವು ಪ್ರಕರಣ ಸಂಬಂಧ ವೈಜ್ಞಾನಿಕ ಪರೀಕ್ಷೆ ನಡೆಸಲು ಎಸ್​ಐಟಿಗೆ ಕೇರಳ ಹೈಕೋರ್ಟ್ ಅನುಮತಿ ನೀಡಿದೆ. ಕೇರಳ ಹೈಕೋರ್ಟ್​ನ ನ್ಯಾಯಮೂರ್ತಿಗಳಾದ ರಾಜಾ ವಿಜಯ ರಾಘವನ್​ ಮತ್ತು ಕೆ,ವಿ ಜಯಕುಮಾರ್ ನೇತೃತ್ವದ ವಿಭಾಗೀಯ ಪೀಠ ನವೆಂಬರ್​ 17ರಿಂದ ವೈಜ್ಞಾನಿಕ ನಡೆಸುವಂತೆ ಅವಕಾಶ ನೀಡಿದೆ.

ಈ ಮೊದಲು ವೈಜ್ಫಾನಿಕ ಪರೀಕ್ಷೆಯ ವಿಚಾರವಾಗಿ ದೇಗುಲದ ಮುಖ್ಯ ಅರ್ಚಕರ ಅಭಿಪ್ರಾಯ ಕೇಳಿದ್ದ ಸಂದರ್ಭದಲ್ಲಿ, ದೈವಿಕ ಅನುಮತಿಯ ಅವಶ್ಯಕತೆ ಇದೆ ಎಂದು ಹೇಳಿದ್ದರು. ಹೀಗಾಗಿ ನವೆಂಬರ್​ 17ರಂದು ಪರೀಕ್ಷೆ ನಡೆಸಲು ನಿರ್ಧರಿಸಲಾಯಿತು. ನವೆಂಬರ್ 17 ರಂದು ಪಡೆಯಬೇಕಾದ ದೇವ ಅನುಜ್ಞೆಯ ಆಧಾರದ ಮೇಲೆ, ಮಧ್ಯಾಹ್ನ 1 ಗಂಟೆಗೆ ಉಚ್ಚ ಪೂಜೆ ಮತ್ತು ದೇಗುಲ ಮುಚ್ಚಿದ ನಂತರ ಪರೀಕ್ಷೆ ನಡೆಸಲಾಗುತ್ತದೆ.

ದ್ವಾರಪಾಲಕ ವಿಗ್ರಹಗಳ ತಗಡುಗಳ ತೂಕ, ಚಿನ್ನದ ಲೇಪನದಲ್ಲಿರುವ ಶುದ್ಧತೆಯ ಪ್ರಮಾಣ ಹಾಗೂ ಗುಣಮಟ್ಟದ ವೈಜ್ಞಾನಿಕ ಪರೀಕ್ಷೆ ನಡೆಸುವಂತೆ ಕೇರಳ ಹೈಕೋರ್ಟ್ ಎಸ್​ಐಟಿಗೆ ನಿರ್ದೇಶನ ನೀಡಿದೆ. ಈ ಎಲ್ಲಾ ಪರೀಕ್ಷೆಗಳು ಚಿನ್ನದ ನಷ್ಟ ಪ್ರಮಾಣದ ನಿರ್ದಿಷ್ಠ ಮಾಹಿತಿ ನೀಡಲಿವೆ. ಇನ್ನು ಇದರ ಜೊತೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಮಾಜಿ ಕಾರ್ಯದರ್ಶಿಯನ್ನೂ ಎಸ್​ಐಟಿ ವಿಚಾರಣೆಗೆ ಒಳಪಡಿಸಲಿದೆ.

ಇದನ್ನೂ ಓದಿ: ಭೂಮಿ ಯೋಜನೆ : ಅರ್ಜಿ ವಿಲೇವಾರಿಯಲ್ಲಿ ಶಿರಸಿಗೆ ರಾಜ್ಯಕ್ಕೆ ಪ್ರಥಮ

ದೇಗುಲದ ಪಾವಿತ್ರ್ಯತೆಗೆ ಯಾವುದೇ ರೀತಿಯ ಅಡ್ಡಿ ಎದುರಾಗದಂತೆ ಎಸ್​ಐಟಿ ಈ ತನಿಖೆ ನಡೆಸಲಿದೆ. ಈ ವೈಜ್ಞಾನಿಕ ಪರೀಕ್ಷೆಯು ಚಿನ್ನದ ನಷ್ಟದ ನಿಖರ ಪ್ರಮಾಣ ತಿಳಿಸುವುದರಿಂದ ಈ ಪ್ರಕರಣದ ಪ್ರಬಲ ಸಾಕ್ಷಿಯಾಗಿ ಬಳಕೆಯಾಗಲಿದೆ. ಇನ್ನು ಇದರ ಜೊತೆಯಲ್ಲಿ ದೇಗುಲದ ಆಡಳಿತ ಮಂಡಳಿ ಕಾರ್ಯದರ್ಶಿಯನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ದಟ್ಟವಾಗಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories