Suicide: ಪರಸ್ತ್ರೀ ವ್ಯಾಮೋಹಕ್ಕೆ ಬಲಿಯಾಯ್ತು 4 ಜೀವಗಳು; ಪುಟ್ಟ ಮಕ್ಕಳಿಗೆ ವಿಷವುಣಿಸಿ ತಾಯಿ ನೇಣಿಗೆ ಶರಣು

ಮಂಡ್ಯ: Suicide:ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ತನ್ನ ಮೂವರು ಮಕ್ಕಳಿಗೆ ವಿಷವುಣಿಸಿ ತಾಯಿ ಕೂಡಾ ನೇಣಿಗೆ ಶರಣಾದ ಹೃದಯವಿದ್ರಾವಕ ಘಟನೆ ಮಂಡ್ಯದ ಮದ್ದೂರು ತಾಲೂಕಿನ ಹೊಳೆಬೀದಿಯ ಮನೆಯಲ್ಲಿ ನಡೆದಿದೆ. ಗಂಡನ ಪರಸ್ತ್ರೀ ವ್ಯಾವೋಹ, ಅನೈತಿಕ ಸಂಬಂಧವೇ ಈ ದುರ್ಘಟನೆಗೆ ಕಾರಣ ಎನ್ನಲಾಗಿದೆ.

ಅಖಿಲ್ ಅಹಮ್ಮದ್ ಎಂಬವರ ಪತ್ನಿ ಉಸ್ನಾ ಕೌಸರ್ (30) ಹಾಗೂ ಪುಟ್ಟ ಕಂದಮ್ಮಗಳಾದ ಹ್ಯಾರಿಸ್ (7), ಅಲೀಸಾ(4), ಅನಮ್ ಫಾತೀಮಾ (2) ಮೃತ ದುರ್ದೈವಿಗಳು. ಆರೋಪಿ ಅಖಿಲ್ ಅಹಮ್ಮದ್ ಕಾರು ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ, ಪತ್ನಿ ಮೃತ ಕೌಸರ್ ಖಾಸಗಿ ಕ್ಲಿನಿಕ್ ನಲ್ಲಿ ಕೆಲಸ ಮಾಡುತ್ತಿದ್ದರು.

ಚನ್ನಪಟ್ಟಣದಲ್ಲಿ ಕಾರು ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಅಖಿಲ್ ಅಹಮ್ಮದ್ ಗೆ ಪರ ಸ್ತ್ರೀ ಜೊತೆ ಸಂಬಂಧವಿತ್ತು ಎನ್ನಲಾಗಿದೆ. ಈ ವಿಚಾರದಲ್ಲಿ ಆತನಿಗೆ ಹಾಗೂ ಪತ್ನಿ ಕೌಸರ್ ಗೆ ಪದೇ ಪದೇ ಜಗಳ ನಡೆಯುತ್ತಿತ್ತು. ಇದಕ್ಕೆ ಪೂರಕ ಎಂಬಂತೆ ಈ ಹಿಂದೆ ಅಖಿಲ್ ಮೊಬೈಲ್ ನಲ್ಲಿ ಪರ ಸ್ತ್ರೀಯ ಬೆತ್ತಲೆ ಫೋಟೋ ಹಾಗೂ ಆಕೆಯ ಜೊತೆಗಿದ್ದ ಅಖಿಲ್ ಫೋಟೋಗಳನ್ನು ಕೌಸರ್ ನೋಡಿದ್ದಳು. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಪತಿ-ಪತ್ನಿ ಮಧ್ಯೆ ಜೋರು ಗಲಾಟೆ ನಡೆದಿದೆ. ಬಳಿಕ ಎರಡೂ ಕಡೆಯ ಕುಟುಂಬಸ್ಥರು ಇಬ್ಬರ ನಡುವೆ ರಾಜೀ ಸಂಧಾನಕ್ಕೆ ಯತ್ನಿಸಿದ್ದರು. ಆ ವೇಳೆ ಅಕ್ರಮ ಸಂಬಂಧ ಬಿಟ್ಟುಬಿಡುವುದಾಗಿ ಅಖಿಲ್ ಹೇಳಿದ್ದ.

ಇದನ್ನೂ ಓದಿ: Mysterious murder: ಕತ್ತು ಕೊಯ್ದು ವೃದ್ದ ದಂಪತಿಯ ಬರ್ಬರ ಹತ್ಯೆ

ಈ ನಡುವೆ ನಿನ್ನೆ ಉರೂಸ್ ಹಿನ್ನೆಲೆ ಮನೆಗೆ ಬೇಗ ಬರುವುದಾಗಿ ಅಖಿಲ್ ಅಹಮ್ಮದ್ ಹೇಳಿ ಹೋಗಿದ್ದ. ಆದರೆ ಆತ ಮನೆಗೆ ಬಂದಿರಲಿಲ್ಲ. ಈ ಹಿನ್ನೆಲೆ ಕೌಸರ್ ಪತಿಗೆ ಫೋನ್ ಮಾಡಿ ವಿಚಾರಿಸಿದಾಗ ಮತ್ತೆ ಇಬ್ಬರು ಜಗಳವಾಡಿಕೊಂಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಪತಿಯ ಮಾತುಗಳಿಂದ ಕೌಸರ್ ನೊಂದುಕೊಂಡಿದ್ದಾಳೆ. ಕ್ಲಿನಿಕ್ ನಿಂದ ಮನೆಗೆ ಬಂದವಳೇ ತನ್ನ ಮೂವರು ಕಂದಮ್ಮಗಳಿಗೆ ಅನ್ನದಲ್ಲಿ ವಿಷ ಹಾಕಿ ಕೊಟ್ಟಿದ್ದಾಳೆ. ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಆದರೆ ಈ ನಾಲ್ವರನ್ನೂ ಅಖಿಲ್ ಕೊಲೆ ಮಾಡಿದ್ದಾನೆಂದು ಕೌಸರ್ ಪೋಷಕರು ಆರೋಪಿಸಿದ್ದಾರೆ. ಈ ಬೆನ್ನಲ್ಲೇ ಅಖಿಲ್ ಹಾಗೂ ಆತನ ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ. ಮದ್ದೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: K Muralidharan: ಖ್ಯಾತ ನಿರ್ಮಾಪಕ ಕೆ ಮುರಳೀಧರನ್ ಇನ್ನಿಲ್ಲ

Suicide: The mother hanged herself after poisoning the little 3 children in Mandya

Comments are closed.