The secret of Chandrasekhar’s death : ಪೊಲೀಸರ ಕೈ ಸೇರಿದ ಡಯಾಟಮ್ ವರದಿ : ಬಯಲಾಗುತ್ತಾ ಹೊನ್ನಾಳಿ ಚಂದ್ರಶೇಖರ್ ಸಾವಿನ ರಹಸ್ಯ ?

ದಾವಣಗೆರೆ : (The secret of Chandrasekhar’s death ) ಹೊನ್ನಾಳಿ ಶಾಸಕ  ಎಂ.ಪಿ. ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ನಿಗೂಢ ಸಾವಿನ ಪ್ರಕರಣ  ದಿನದಿಂದ ದಿನಕ್ಕೆ ಹೊಸ ತಿರುವನ್ನು ಪಡೆದುಕೊಳ್ಳುತ್ತಿದೆ. ಜೊತೆಗೆ ತೀವ್ರ ಕುತೂಹಲಕ್ಕೂ ಕಾರಣವಾಗಿದೆ. ಚಂದ್ರಶೇಖರ್‌ ಅವರು ಅಪಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಅಂತ ಪೊಲೀಸರ ಪ್ರಾಥಮಿಕ ವರದಿಗಳು ಹೇಳಿದರೆ, ಇದೊಂದು ವ್ಯವಸ್ಥಿತ ಕೊಲೆ, ಚಿತ್ರ ಹಿಂಸೆ ನೀಡಿ ಕೊಲೆ ಮಾಡಿರಬಹುದು ಅಂತ ರೇಣುಕಾಚಾರ್ಯ ಅವರು ಹೇಳಿಕೆಯನ್ನು  ನೀಡಿದ್ದರು . ಇನ್ನೂ ಸಲಿಂಗ ಕಾಮಕ್ಕೆ ಒತ್ತಾಯಿಸಿ ನನ್ನ ಮಗನನ್ನು ಕೊಲೆ ಮಾಡಿರಬಹುದು ಎಂದು ಚಂದ್ರಶೇಖರ್ ತಂದೆ ರಮೇಶ್  ಆರೋಪಿಸಿದ್ದಾರೆ. ಇವುಗಳ ನಡುವೆ ಚಂದ್ರಶೇಖರ್ ಅವರ ಮೃತ ದೇಹದ ಡಯಾಟಮ್ ಪರೀಕ್ಷಾ ವರದಿ ಪೊಲೀಸರ ಕೈ ಸೇರಿದ್ದು , ಈ ವರದಿಯಲ್ಲಿ ಚಂದ್ರಶೇಖರ್ ನಿಗೂಢ ಸಾವಿನ(The secret of Chandrasekhar’s death )ಕುರಿತಂತೆ ಸ್ಫೋಟಕ ವಿಚಾರವೊಂದು ಬೆಳಕಿಗೆ ಬಂದಿದೆ.

ಚಂದ್ರಶೇಖರ್ ಸಾವು ಸಹಜವೋ, ಅಸಹಜವೋ (The secret of Chandrasekhar’s death ) ಅಂತ ತಿಳಿಯಲು ಡಯಾಟಮ್ ಪರೀಕ್ಷೆ ನಡೆಸಲಾಗಿತ್ತು. ಇದೀಗ ಡಯಾಟಮ್ ಪರೀಕ್ಷಾ ವರದಿ ಪೊಲೀಸರ ಕೈ ಸೇರಿದ್ದು, ಚಂದ್ರಶೇಖರ್ ಶ್ವಾಸಕೋಶದ ಒಳಗೆ ನೀರು ಇರುವುದನ್ನು ಡಯಾಟಮ್ ಪರೀಕ್ಷಾ ವರದಿ ಖಚಿತಪಡಿಸಿದೆ ಎಂದು ಪೊಲೀಸ್ ಉನ್ನತ ಮೂಲಗಳು ತಿಳಿಸಿವೆ.

ಶ್ವಾಸಕೋಶದ ಒಳಗೆ ನೀರು ಸೇರಿರುವುದು ಕೂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ .ಡಯಾಟಂ ಪರೀಕ್ಷಾ ವರದಿಯಲ್ಲಿ ಚಂದ್ರಶೇಖರ್‌ ಅವರ ಸಾವು ಸಹಜ ಸಾವು ಎನ್ನುವುದನ್ನು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ : Bus accident: 40 ವಿದ್ಯಾರ್ಥಿಗಳು ಪ್ರವಾಸ ಹೊರಟಿದ್ದ ಖಾಸಗಿ ಬಸ್ ಡಿಕ್ಕಿ; ಚಾಲಕನ ನಿಯಂತ್ರಣ ತಪ್ಪಿ ಅವಘಡ

ಇದನ್ನೂ ಓದಿ : POCSO Case : ಮುರುಘಾ ಶ್ರೀ ಮತ್ತು ಇಬ್ಬರ ವಿರುದ್ಧ ಆರೋಪ ದೃಢ : ಚಿತ್ರದುರ್ಗ ಎಸ್ಪಿ

ಏನಿದು ಡಯಾಟಮ್‌ ಪರೀಕ್ಷೆ ?

ವಿಧಿ ವಿಜ್ಞಾನ ಅಥವಾ ಫೋರೆನ್ಸಿಕ್ ಪ್ಯಾಥೋಲಜಿಯಲ್ಲಿ ಮುಳುಗುವಿಕೆಯಿಂದ ಆದ ಸಾವಿನ ಕಾರಣವನ್ನು ಪತ್ತೆಹಚ್ಚಲು ಡಯಾಟಮ್‌ಗಳ ಬಳಕೆ ಮಾಡಲಾಗುತ್ತದೆ. ವಿವಿಧ ಅಂಗಗಳಲ್ಲಿನ ಡಯಾಟಮ್‌ಗಳ ಪತ್ತೆಯು ಮುಳುಗುವಿಕೆಯಿಂದ ಸಾವಿನ ರೋಗನಿರ್ಣಯಕ್ಕೆ ಕಾರಣವಾಗುವ ಈ ಪ್ರಕ್ರಿಯೆಯನ್ನು ‘ಡಯಾಟಮ್ ಪರೀಕ್ಷೆ’ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ : Bangalore Crime News : ಮಗುವಿನ ಕಾಯಿಲೆ ಬಗ್ಗೆ ನೆಂಟರ ಕೊಂಕು ಮಾತು : ಹೆತ್ತ ಮಗುವನ್ನೇ ಕೊಂದ ತಾಯಿ

ಇನ್ನೂ FSL ವರದಿ ಹಾಗೂ ಮರಣೋತ್ತರ ಪರೀಕ್ಷಾ ವರದಿಗಾಗಿ ಪೊಲೀಸರು ಕಾಯುತ್ತಿದ್ದು ,  ಈ ಎಲ್ಲಾ ವರದಿ ಬಂದ ಮೇಲೆ ಚಂದ್ರಶೇಖರ್‌ ಸಾವು ಸಹಜವೋ ಅಥವಾ ಕೊಲೆಯೋ ಎಂದು ತಿಳಿದು ಬರಲಿದೆ .  ಸದ್ಯ ಚಂದ್ರು ನಿಗೂಢ ಸಾವಿನ ಕುರಿತು ಚಿಕ್ಕ ಚಿಕ್ಕ ಮಾಹಿತಿಯನ್ನು ಕೂಡ ಎಡಿಜಿಪಿ ಅಲೋಕ್ ಕುಮಾರ್ ಪಡೆಯುತ್ತಿದ್ದಾರೆ.

(The secret of Chandrasekhar’s death) Honnali MLA M.P. The case of the mysterious death of Renukacharya’s brother’s son Chandrasekhar is taking a new turn day by day. It also causes intense curiosity. While preliminary reports of the police said that Chandrasekhar died in an accident, Renukacharya had given a statement that it was a systematic murder and torture. Chandrasekhar’s father Ramesh alleged that he might have killed my son by forcing him to have same-sex sex. Among these, the diatom test report of Chandrasekhar’s dead body came into the hands of the police, and in this report, an explosive issue about the secret of Chandrasekhar’s death has come to light.

Comments are closed.