ಭೀಕರ ರಸ್ತೆ ಅಪಘಾತದಲ್ಲಿ ಕಿರುತೆರೆ ನಟಿ ವಿಧಿವಶ : ಇಂದು ಅಂತ್ಯಕ್ರಿಯೆ

ಹಿಂದಿ ಸಾರಾಭಾಯ್‌ vs ಸಾರಾಭಾಯ್‌ ಸೀರಿಯಲ್‌ ಖ್ಯಾತಿಯ ನಟಿ ವೈಭವಿ ಉಪಾಧ್ಯಾಯ (Vaibhavi Upadhyay) ಅವರು ಭೀಕರ ರಸ್ತೆ ಅಪಘಾತದಲ್ಲಿ ಬಾರದಲೋಕಕ್ಕೆ ಪಯಣ ಬೆಳೆಸಿದ್ದಾರೆ. ಸದ್ಯ ಈ ವಿಚಾರವನ್ನು ಕಿರುತೆರೆ ನಟಿ ಆಪ್ತರು ತಿಳಿಸಿದ್ದಾರೆ. ಈ ಸುದ್ದಿ ತಿಳಿದ ಕಿರುತೆರೆ ಪ್ರೇಕ್ಷಕರು ಕೂಡ ಬೇಸರಗೊಂಡಿದ್ದಾರೆ.

ನಟಿ ವೈಭವಿ ಉಪಾಧ್ಯಾಯ ಅವರಿಗೆ ಹಿಮಾಚಲ ಪ್ರದೇಶದಲ್ಲಿ ಅಪಘಾತ ಸಂಭವಿಸಿರುತ್ತದೆ. ನಿನ್ನೆ (ಮೇ 23) ಬೆಳಿಗ್ಗೆ ಈ ದುರ್ಘನೆ ನಡೆದಿದೆ. ನಟಿ ವೈಭವಿ ಉಪಾಧ್ಯಾಯ ಹಾಗೂ ಅವರ ಭಾವಿ ಪತಿ ಜೊತೆ ಹಿಮಾಚಲ ಪ್ರದೇಶದಲ್ಲಿ ಪ್ರಯಾಣ ಮಾಡುತ್ತಿರುವ ತಿರುವಿನಲ್ಲಿ ಕಾರು ನಿಯಂತ್ರಣಕ್ಕೆ ಸಿಗದೇ ಪಲ್ಟಿ ಆಗಿದೆ.

ಈ ದುರ್ಘಟನೆ ನಟಿ ವೈಭವಿ ಉಪಾಧ್ಯಾಯ ಹಾಗೂ ಅವರ ಭಾವಿ ಪತಿ ಕಾರಿನಲ್ಲಿ ತೆರಳುತ್ತಿರುವಾಗ ಈ ದುರ್ಘಟನೆ ಸಂಭವಿಸಿದ್ದು, ನಟಿ ವೈಭವಿ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ನಟಿ ವೈಭವಿ ಮೃತ ದೇಹವನ್ನು ಇಂದು (ಮೇ 24) ಮುಂಬೈಗೆ ತರಲಾಗುತ್ತಿದೆ. ಇಲ್ಲಿ ಅವರ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ನಿರ್ಧರಿಸಲಾಗಿದೆ.

ಇದನ್ನೂ ಓದಿ : ಸ್ಯಾಂಡಲ್‌ವುಡ್‌ ನಟ ಶಿವ ರಾಜ್‌ಕುಮಾರ್‌ ಅವರನ್ನು ಭೇಟಿಯಾದ ರಣದೀಪಗ ಸಿಂಗ್‌ ಸುರ್ಜೇವಾಲಾ

ಇದನ್ನೂ ಓದಿ : ಹೊಸ ಸಿನಿಮಾ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದ ಕಿಚ್ಚ ಸುದೀಪ್‌

ಇತ್ತೀಚಿನ ದಿನಗಳಲ್ಲಿ ಕಿರುತೆರೆ ನಟ ನಟಿಯರ ಸಾವುಗಳು ಹೆಚ್ಚಾಗಿ ಸಂಭವಿಸಿದ್ದು, ಈಗ ಮತ್ತೊಂದು ಸಾವು ಸಂಭವಿಸಿದ್ದು, ಕಿರುತೆರೆಯರು ಶಾಕ್‌ಗೆ ಒಳಗಾಗಿದೆ. ಅಷ್ಟೇ ಅಲ್ಲದೇ ಕಿರುತೆರೆ ಪ್ರೇಕ್ಷಕರು ಕೂಡ ತಮ್ಮ ಮೆಚ್ಚಿನ ನಟ ನಟಿಯರ ಸಾವುಗಳಿಂದ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ವರುಣನ ಆರ್ಭಟ : ಮಳೆ ನೀರಿನಲ್ಲಿ ಮುಳುಗಿದ ನಟ ಜಗ್ಗೇಶ್‌ ಅವರ ಐಷಾರಾಮಿ ಕಾರು

ಇದನ್ನೂ ಓದಿ : Kerala Story Box Office : ದಾಖಲೆಯ ಗಳಿಕೆ ಕಂಡ ದಿ ಕೇರಳ ಸ್ಟೋರಿ, ಆದಾ ಶರ್ಮಾ ಸಿನಿಮಾ 3 ನೇ ವಾರ ಭರ್ಜರಿ ಕಲೆಕ್ಸನ್ಸ್‌

ಇದನ್ನೂ ಓದಿ : ಜೂನಿಯರ್ ಎನ್ ಟಿಆರ್ ಹುಟ್ಟುಹಬ್ಬಕ್ಕೆ ನೀಲ್ ಸರ್ಪ್ರೈಸ್ : NTR31 ಸಿನಿಮಾದ ಶೂಟಿಂಗ್ ಯಾವಾಗ ಶುರು

TV actress Vaibhavi Upadhyay died in a terrible road accident: funeral today

Comments are closed.