ಭಾನುವಾರ, ಏಪ್ರಿಲ್ 27, 2025
HomeCoastal Newsಕೋಟ : ನದಿಗೆ ಈಜಲು ತೆರಳಿದ್ದ ನರ್ಸಿಂಗ್‌ ಕಾಲೇಜು ವಿದ್ಯಾರ್ಥಿ ಸಾವು

ಕೋಟ : ನದಿಗೆ ಈಜಲು ತೆರಳಿದ್ದ ನರ್ಸಿಂಗ್‌ ಕಾಲೇಜು ವಿದ್ಯಾರ್ಥಿ ಸಾವು

- Advertisement -

ಕೋಟ : ನದಿಯಲ್ಲಿ ಈಜಲು ತೆರಳಿದ್ದ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ನಂಚಾರು ಸೇತುವೆಯ ಬಳಿಯ ಸೀತಾ ನದಿಯಲ್ಲಿ ನಡೆದಿದೆ.

ಜಿಬಿನ್‌ ಸಾಮ್‌ (20 ವರ್ಷ ) ಎಂಬಾತನೇ ಮೃತ ವಿದ್ಯಾರ್ಥಿ. ಮಧುವನ ಸಮೀಪದ ಕಾಲೇಜಿನಲ್ಲಿ ಎರಡನೇ ವರ್ಷದ ನರ್ಸಿಂಗ್‌ ವಿದ್ಯಾಭ್ಯಾಸವನ್ನು ಮಾಡುತ್ತಿದ್ದ. ಸೆಪ್ಟೆಂಬರ್‌ 26 ರಂದು ಅಮುಲ್‌ ಬಿಜಿ ಎಂಬವರ ಮನೆಗೆ ಜಿಬಿನ್‌ ಸಾಮ್‌ ಸೇರಿ ಮೂವರು ಸ್ನೇಹಿತರು ಬಂದಿದ್ದರು. ಸ್ನೇಹಿತರ ಜೊತೆಯಲ್ಲಿ ನಂಚಾರು ಸಮೀಪದ ಸೀತಾ ನದಿಗೆ ಈಜಲು ತೆರಳಿದ್ದರು ಈ ವೇಳೆಯಲ್ಲಿ ಜಿಬಿನ್‌ ಸಾಮ್‌ ನೀರು ಪಾಲಾಗಿದ್ದರು.

ಕೂಡಲೇ ಸ್ಥಳೀಯರು ನೆರವಿನಿಂದ ಸ್ನೇಹಿತರು ಹುಡುಕಾಟವನ್ನು ನಡೆಸಿದಾಗ ನೀರಿನಲ್ಲಿ ಮುಳುಗಿದ್ದ ಜಿಬಿನ್‌ ಸಾಮ್‌ ಪತ್ತೆಯಾಗಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಬ್ರಹ್ಮಾವರದ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ ವೈದ್ಯರು ಜಿಬಿನ್‌ ಸ್ಯಾಮ್‌ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ಅಮುನ್‌ ಬಿಜು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : ಬಾನಲ್ಲೇ ಮಧುಚಂದ್ರಕೆ, ಯುಗಪುರುಷ ಸಿನಿಮಾ ಶೈಲಿಯಲ್ಲಿ ಪತ್ನಿಯ ಕೊಲೆ ಯತ್ನ ! ಕೊನೆಗೆ ಚಾಕುವಿನಿಂದ ಇರಿದು ಕೊಲೆ

ಇದನ್ನೂ ಓದಿ : ಮಹಿಳಾ ಪೊಲೀಸ್‌ ಕಾನ್‌ಸ್ಟೇಬಲ್‌ ಮೇಲೆ ಸಾಮೂಹಿಕ ಅತ್ಯಾಚಾರ

( Madhuvana Nursing College student dies after swimming in River Sitha in Nanchar )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular