West bengal crime: ಚಕ್ರದಡಿ‌‌ ಸ್ಕೂಟರ್ ಸಮೇತ ಸಿಲುಕಿದ್ದ ವ್ಯಕ್ತಿಯನ್ನು 1 ಕಿ.ಮೀ ಎಳೆದೊಯ್ದ ಟ್ರಕ್: ವ್ಯಕ್ತಿ ಸಾವು, ಆರೋಪಿ ಅರೆಸ್ಟ್

ಪಶ್ಚಿಮ ಬಂಗಾಳ: (West bengal crime) ಡಂಪರ್‌ ಟ್ರಕ್‌ ಒಂದು ಸ್ಕೂಟರ್‌ ನಲ್ಲಿ ಬರುತ್ತಿದ್ದ ವ್ಯಕ್ತಿಯೋರ್ವನಿಗೆ ಢಿಕ್ಕಿ ಹೊಡೆದಿದ್ದು, ವ್ಯಕ್ತಿ ಸ್ಕೂಟರ್‌ ಸಮೇತವಾಗಿ ಟ್ರಕ್‌ ನ ಚಕ್ರದಡಿಗೆ ಸಿಲುಕಿದ್ದಾನೆ. ಚಕ್ರದಡಿಗೆ ಸಿಲುಕಿದ ವ್ಯಕ್ತಿಯನ್ನು ಒಂದು ಕಿಲೋಮೀಟರ್‌ ವರೆಗೆ ಟ್ರಕ್ ಎಳೆದುಕೊಂಡು ಹೋಗಿದ್ದು, ವ್ಯಕ್ತಿ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿಯನ್ನು ಅನಂತ್‌ ದಾಸ್‌ ಎಂದು ಗುರುತಿಸಲಾಗಿದೆ.

ಉತ್ತರ ಬಂಗಾಳ ವಿಶ್ವವಿದ್ಯಾಲಯದ ಕ್ಯಾಂಪಸ್‌ನ ಮುಂಭಾಗದಲ್ಲಿ ರಾತ್ರಿ 8.30 ರ ಸುಮಾರಿಗೆ ಸ್ಕೂಟರ್‌ ಟ್ರಕ್‌ಗೆ ಢಿಕ್ಕಿ (West bengal crime) ಹೊಡೆದಿದ್ದು, ವ್ಯಕ್ತಿ ಕೆಳಗೆ ಬಿದ್ದಿದ್ದು, ಸ್ಕೂಟರ್‌ ಜೊತೆಗೆ ಟ್ರಕ್‌ ನ ಚಕ್ರದಡಿಗೆ ಸಿಲುಕಿದ್ದಾನೆ. ಈ ವೇಳೆ ಚಕ್ರದಡಿಗೆ ಸಿಲುಕಿದ ವ್ಯಕ್ತಿಯನ್ನು ಟ್ರಕ್ ಒಂದು ಕಿಲೋಮೀಟರ್‌ ವರೆಗೆ ಎಳೆದುಕೊಂಡು ಹೋಗಿದೆ. ಪರಿಣಾಮ ಸ್ಕೂಟರ್‌ ಗೆ ಬೆಂಕಿ ಹೊತ್ತಿಕೊಂಡಿದ್ದು, ಸ್ಕೂಟರ್‌ ಸುಟ್ಟು ಭಸ್ಮವಾಗಿದಲ್ಲದೇ ಮೃತ ವ್ಯಕ್ತಿಯ ದೇಹ ಕೂಡ ಸುಟ್ಟು ಕರಕಲಾಗಿದೆ. ಸ್ಥಳೀಯ ವ್ಯಾಪಾರಿಯಾದ ಅನಂತ್ ದಾಸ್‌ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಘಟನೆ ನಡೆದಿದೆ ಎನ್ನಲಾಗಿದೆ.

ಇದೀಗ ಭಯಾನಕ ಘಟನೆಯ ಕುರಿತಾಗಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಟ್ರಕ್‌ ಚಾಲಕನನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ತ್ರಿಕೋನ ಪ್ರೇಮ ಪ್ರಕರಣ: ೧೫ ವರ್ಷ ಬಾಲಕನನ್ನು ಇರಿದು ಕೊಲೆ

ತ್ರಿಕೋನ ಪ್ರೀತಿಯಲ್ಲಿ ಶುರುವಾದ ಘಟನೆ ಕೊಲೆಯಲ್ಲಿ ಅಂತ್ಯವಾಗಿದೆ. ಹದಿನೈದು ವರ್ಷದ ಬಾಲಕನನ್ನು ಚಾಕುವಿನಿಂದ ಇರಿದು ಕೊಂದು ಆರೋಪಿಗಳು ಪರಾರಿಯಾಗಿದ್ದಾರೆ. ದೆಹಲಿಯ ಖ್ಯಾಲಾದಲ್ಲಿ ಘಟನೆ ನಡೆದಿದ್ದ, ಮೊಹಮ್ಮದ್‌ ಶಾಹೀದ್‌ ಎನ್ನುವಾತ ಹತ್ಯೆಯಾದ ಬಾಲಕ.

ಘಟನಾ ಸ್ಥಳಕ್ಕೆ ದೆಹಲಿ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ : E-mail Bomb threat: ಬೆಂಗಳೂರಿನ ಖಾಸಗಿ ಶಾಲೆಯೊಂದಕ್ಕೆ‌ ಹುಸಿ ಬಾಂಬ್ ಬೆದರಿಕೆ: ಸುರಕ್ಷಿತ ಸ್ಥಳಕ್ಕೆ ವಿದ್ಯಾರ್ಥಿಗಳು ಶಿಫ್ಟ್

ಇದನ್ನೂ ಓದಿ : Pregnant women set fire: ಪತಿಯನ್ನು ಹೆದರಿಸಲು ಬೆಂಕಿ ಹಚ್ಚಿಕೊಂಡ 7 ತಿಂಗಳ ಗರ್ಭಿಣಿ: ಸತ್ತಿದ್ದು ಮಾತ್ರ ಹೊಟ್ಟೆಯೊಳಗಿದ್ದ ಮಗು

West bengal crime: A truck dragged a person who was stuck with a wheeled scooter for 1 km: the person died, the accused was arrested

Comments are closed.