Young man committed suicide: ಅಕ್ಕನ ಮನೆಗೆ ದತ್ತು ಹೋಗಿದ್ದ ತಮ್ಮ ಆತ್ಮಹತ್ಯೆ: ಸಾವಿನಲ್ಲೂ ಶಾಲೆಯ ಬಗ್ಗೆ ಪ್ರೀತಿ ತೋರಿದ ಯುವಕ

ಬಾಗಲಕೋಟೆ: (Young man committed suicide) ಅಕ್ಕನ ಮನೆಗೆ ದತ್ತು ಹೋಗಿದ್ದ ತಮ್ಮ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾವಿಗೂ ಮೊದಲು ತನ್ನ ವಾಟ್ಸಾಪ್‌ ಸ್ಟೇಟಸ್‌ ನಲ್ಲಿ ಡೆತ್‌ ನೋಟ್‌ ಬರೆದುಕೊಂಡಿದ್ದು, ಸಾವಿನಲ್ಲೂ ತನಗೆ ಶಾಲೆಯ ಮೇಲಿರುವ ಪ್ರೀತಿಯನ್ನು ಯುವಕ ತೋರಿದ್ದಾನೆ. ಬಾಲಕೋಟೆಯ ಹುನಗುಂದ ತಾಲೂಕಿನ ಹೂವನೂರಿನಲ್ಲಿ ಈ ಘಟನೆ ನಡೆದಿದ್ದು, ನಾಗರಾಜ ಕಳ್ಳಗುಡ್ಡ (22 ವರ್ಷ) ಎನ್ನುವಾತ ಆತ್ಮಹತ್ಯೆ ಮಾಡಿಕೊಂಡ ಯುವಕ.

ಅಕ್ಕನ ಮನೆಯ ಮಾವಂದಿರು ನಂಬಿಸಿ ಮೋಸ ಮಾಡಿದರು ಎಂದು ಮನನೊಂದಿದ್ದು, ಬಾವ ಮೃತಪಟ್ಟ ನಂತರ ಅಕ್ಕನ ಮೈದುನರು ಆಸ್ತಿ ನೀಡದ ಹಿನ್ನಲೆಯಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ತನ್ನ ವಾಟ್ಸ್‌ ಆಪ್‌ ಸ್ಟೇಟಸ್‌ ನಲ್ಲಿ ಬರೆದುಕೊಂಡಿದ್ದಾನೆ. ನನಗೆ ಬರಬೇಕಿದ್ದ ನಾಲ್ಕು ಎಕರೆ ಆಸ್ತಿ ಕೊಡದೇ ಮೋಸ ಮಾಡಿದರು. ಊರಿನ ಜನ ಐದು ಸಹೋದರರನ್ನು ನಂಬಬೇಡಿ ಎನ್ನುವುದಾಗಿ ಬರೆದುಕೊಂಡಿದ್ದಾನೆ. ತನ್ನ ಹೆಸರಲ್ಲಿ ಈಗಾಗಲೇ ಇರುವ ನಾಲ್ಕು ಎಕರೆ ಜಾಗದಲ್ಲಿ ಎರಡು ಎಕರೆ ಜಾಗದಲ್ಲಿ ಸರಕಾರಿ ಶಾಲೆ ನಿರ್ಮಿಸಿ. ಇದರಿಂದಾಗಿ ನಮ್ಮೂರಿನ ಎಲ್ಲಾ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು ಹೆಳಿದ್ದು ಸಾವಿನಲ್ಲೂ ಶಾಲಾ ಪ್ರೇಮವನ್ನು ಮೆರೆದಿದ್ದಾನೆ.

ಇದನ್ನೂ ಓದಿ : God’s invocation on student: ಕಾಂತಾರ ವರಾಹ ರೂಪಂ ಹಾಡಿಗೆ ನೃತ್ಯ: ವಿದ್ಯಾರ್ಥಿ ಮೇಲೆ ಆವಾಹನೆಯಾಯ್ತು ದೈವ

ಇದನ್ನೂ ಓದಿ : ದ.ಕ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣಕ್ಕೆ ಗ್ರಹಣ, 4 ವರ್ಷದಲ್ಲಿ 3 ಸಂಚಾಲಕರ ಬದಲಾವಣೆ !

ಇದಲ್ಲದೇ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡುವುದಾಗಿಯೂ, ನಾಲ್ಕು ಎಕರೆ ಅಸ್ತಿ ಕೊಡುವುದಾಗಿಯೂ ಹೇಳಿದ್ದರು. ಮಾವಂದಿರಾದ ಅಂದಾನೆಪ್ಪ, ರಾಮು, ಶಿವು ಇವರೇ ನನ್ನ ಸಾವಿಗೆ ಕಾರಣ, ನನಗೆ ಬರಬೇಕಿದ್ದ ನಾಲ್ಕು ಎಕರೆ ಆಸ್ತಿ ಕೊಡದೇ ನೋಸ ಮಾಡಿದರು ಎಂದಿದ್ದಾನೆ. ಕೊನೆಯದಾಗಿ ಊರಿನ ಜನರೇ ಈ ಐವರನ್ನು ನಂಬಬೇದಿ, ನನ್ನ ಅಂತ್ಯ ಸಂಸ್ಕಾರ ಇದೇ ಊರಲ್ಲೇ ಮಾಡಿ ಎಂದು ಕೊನೆಗೆ ಅಕ್ಕ ಅಮ್ಮ ಸ್ನೇಹಿತರೇ ನನ್ನ ಕ್ಷಮಿಸಿ ಎಂದು ವಾಟ್ಸಾಪ್‌ ಸ್ಟೇಟಸ್‌ ಹಾಕಿದ್ದು, ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Young man committed suicide: He was adopted to his elder sister’s house committed suicide: Even in death, the young man showed love for school

Comments are closed.