ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 15-01-2021

ನಿತ್ಯಭವಿಷ್ಯ : 15-01-2021

- Advertisement -

ಮೇಷರಾಶಿ
ದೂರ ಸಂಚಾರದಿಂದ ಧನವ್ಯಯ, ಸ್ವಂತ ಉದ್ಯಮ ವ್ಯವಹಾರದಲ್ಲಿ ಅನುಕೂಲ, ಸಣ್ಣ ಕೈಗಾರಿಕೆಯವರಿಗೆ ಅನುಕೂಲ, ಸಾಂಸಾರಿಕವಾಗಿ ನೆಮ್ಮದಿ, ವಾಹನ ಅಪಘಾತಗಳು, ಅಧಿಕ ಉಷ್ಣ ರಕ್ತ ದೋಷಗಳು, ನಿರಾಸಕ್ತಿ ಆಲಸ್ಯತನ, ತಾಯಿಯಿಂದ ಲಾಭ, ಮಂಗಲ ಕಾರ್ಯದ ಬಗ್ಗೆ ಚಿಂತನೆ.

ವೃಷಭರಾಶಿ
ಸಾಮಾಜಿಕ ರಂಗದಲ್ಲಿ ಸ್ಥಾನಮಾನ, ಭೂಮಿ ವಾಹನ ಸ್ಥಿರಾಸ್ತಿಯಿಂದ ನಷ್ಟ, ದಾಂಪತ್ಯ ಕಲಹಗಳು, ಪತ್ರ ವ್ಯವಹಾರಗಳಿಂದ ತೊಂದರೆಗಳು, ನಿಶ್ಚಿತ ಕೆಲಸ ಕಾರ್ಯಗಳು ಹಂತ ಹಂತವಾಗಿ ನಡೆಯಲಿದೆ, ಒತ್ತಡಗಳಿಂದ ನಿದ್ರಾಭಂಗ, ಅನಗತ್ಯ ಕಲಹಗಳಿಂದ ಜೈಲುವಾಸ, ಸಾಮಾಜಿಕವಾಗಿ ಗೌರವ.

ಮಿಥುನರಾಶಿ
ಆರೋಗ್ಯದಲ್ಲಿ ಸುಧಾರಣೆ, ಆರ್ಥಿಕ ಸಹಾಯ, ಮಿತ್ರರಿಂದ ಅನುಕೂಲ, ಹಿತ ಶತ್ರುಗಳ ಕಾಟ, ಜೀವನದಲ್ಲಿ ಸಮಾಧಾನ ಲಭಿಸಲಿದೆ, ಮಾತಿನಿಂದ ಸಮಸ್ಯೆ, ಕೆಲಸಗಾರರ ಪ್ರಾಪ್ತಿ, ಆರೋಗ್ಯ ಚೇತರಿಕೆ, ಮಾಟ ಮಂತ್ರ ತಂತ್ರದ ಭೀತಿ, ದಿನಾಂತ್ಯಕ್ಕೆ ಶುಭಫಲ.

ಕಟಕರಾಶಿ
ಯೋಗ್ಯ ವಯಸ್ಕರಿಗೆ ಕಂಕಣಬಲ, ಉದ್ಯೋಗದಲ್ಲಿ ಅನುಕೂಲ, ಉದ್ಯೋಗ ಪ್ರಾಪ್ತಿ, ಉತ್ತಮ ಹೆಸರು ಮಾಡುವ ಹಂಬಲ, ಮಕ್ಕಳಿಂದ ಬೇಜವಾಬ್ದಾರಿತದ ನಡವಳಿಕೆ, ಆಧ್ಯಾತ್ಮಿಕ ಚಿಂತನೆ, ಉತ್ತಮ ಕಾರ್ಯಗಳು, ಅಡೆತಡೆಗಳ ನಡುವೆಯೇ ಕೆಲಸ ಕಾರ್ಯಗಳಲ್ಲಿ ಯಶಸ್ಸು.

ಸಿಂಹರಾಶಿ
ಆರ್ಥಿಕ ಋಣಬಾಧೆ ಕಡಿಮೆಯಾಗಿ ಸಂತಸ, ಆತ್ಮಸ್ಥೈರ್ಯ ನಿರ್ಧಾರಗಳಿಂದ ಮುನ್ನಡೆ, ಭೂಮಿ ವಾಹನಗಳಿಂದ ಅನುಕೂಲ, ತಂತ್ರದ ಭೀತಿಗಳು, ಕಾರ್ಯ ನಿಮಿತ್ತ ಪ್ರಯಾಣ, ರಕ್ತಸಂಬಂಧಿಗಳಿಂದ ತೊಂದರೆ, ಗುಪ್ತ ಮಾರ್ಗದಲ್ಲಿ ಜಯ.

ಕನ್ಯಾರಾಶಿ
ಉದ್ಯೋಗಿಗಳಿಗೆ ವರ್ಗಾವಣೆ, ಆರ್ಥಿಕವಾಗಿ ನೆಮ್ಮದಿಯ ದಿನ, ಭೂ ವ್ಯವಹಾರಗಳಿಂದ ತೊಂದರೆ, ದಾಯಾದಿ ಕಲಹಗಳು, ಕೋರ್ಟ್ ಕೇಸ್‍ಗಳಿಂದ ಸಮಸ್ಯೆ, ಅಪಘಾತಗಳು, ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು, ಸಂಬಂಧಗಳಲ್ಲಿ ಬಿರುಕು, ಬದಲಾವಣೆಯಿಂದ ತೊಂದರೆ.

ತುಲಾರಾಶಿ
ಹೊಸ ಅವಕಾಶಗಳು ಹುಡುಕಿ ಬರಲಿದೆ, ಗೃಹ ನಿರ್ಮಾಣದ ಕಾರ್ಯದಲ್ಲಿ ಸಮಾಧಾನ, ಸಂಗಾತಿಯ ಹಟಮಾರಿ ಧೋರಣೆ, ಪಾಲುದಾರಿಕೆಯಿಂದ ಧನಾಗಮನ, ಉದ್ಯೋಗ ಅನುಕೂಲದ ಭರವಸೆ, ಮೂರನೇ ವ್ಯಕ್ತಿಗಳಿಂದ ತೊಂದರೆ, ಮಕ್ಕಳಿಂದ ಕುಟುಂಬಕ್ಕೆ ತೊಂದರೆ, ಆರ್ಥಿಕ ಅಲ್ಪ ಚೇತರಿಕೆ.

ವೃಶ್ಚಿಕರಾಶಿ
ನಿರುದ್ಯೋಗಿಗಳಿಗೆ ಆಕಸ್ಮಿಕ ಉದ್ಯೋಗಾವಕಾಶ, ಶತ್ರು ಧಮನ, ರೋಗಬಾಧೆ ಮತ್ತು ಸಾಲದ ಚಿಂತೆ, ಬೇಜವಾಬ್ದಾರಿತನದಿಂದ ನಷ್ಟಗಳು, ಸ್ವಂತ ಉದ್ಯಮ ವ್ಯವಹಾರದಲ್ಲಿ ತೊಂದರೆ, ಹಿರಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ, ವಾಹನ ಸಂಚಾರದಲ್ಲಿ ಜಾಗೃತೆ, ತಾಯಿಯೊಂದಿಗೆ ಮನಸ್ತಾಪ, ಗೃಹ ಬದಲಾವಣೆಯಿಂದ ತೊಂದರೆ.

ಧನಸುರಾಶಿ
ಕೌಟುಂಬಿಕವಾಗಿ ಸಮಾಧಾನದ ದಿನ, ಕಾರ್ಯರಂಗದಲ್ಲಿ ಮುನ್ನಡೆಗೆ ಅವಕಾಶ, ವಿದ್ಯಾರ್ಥಿಗಳಿಗೆ ಅಧಿಕ ಖರ್ಚು ವೆಚ್ಚ, ಪ್ರೀತಿ ಭಾವನೆಗಳು, ಮಕ್ಕಳಿಂದ ಅನುಕೂಲ, ಆಧ್ಯಾತ್ಮಿಕ ಚಿಂತನೆಗಳು, ವಿದ್ಯಾಭ್ಯಾಸದ ಪ್ರಗತಿ, ಗುಪ್ತ ವಿಷಯಗಳಿಗೆ ಖರ್ಚು, ದುಸ್ವಪ್ನಗಳು ಪ್ರೇತಬಾದೆ, ಸಂತಾನದ ಚಿಂತೆ, ಮಕ್ಕಳಿಂದ ಉಡಾಫೆ ಭಾವನೆ, ಪ್ರಯಾಣ ಮಾಡುವ ಇಚ್ಛೆ.

ಮಕರರಾಶಿ
ಅನಿರೀಕ್ಷಿತ ಧನಲಾಭ, ಹಲವು ಸಮಯಗಳಿಂದ ಬಾಕಿ ಉಳಿದ ಕೆಲಸ ಕಾರ್ಯಗಳು ನೆರವೇರಲಿದೆ, ವ್ಯವಹಾರಗಳಲ್ಲಿ ಎಚ್ಚರಿಕೆಯ ಹೆಜ್ಜೆಯನ್ನಿಡಿ, ಚಿರಾಸ್ತಿ ಭೂಮಿ ವಾಹನ ಲಾಭ, ಮಾನಸಿಕ ಭಾದೆ ಒತ್ತಡ, ಗುಪ್ತ ಬಾಧೆಗಳು, ಸಂಗಾತಿ ನಡವಳಿಕೆಯಿಂದ ಬೇಸರ, ಬೆಂಕಿ ಯಂತ್ರದಿಂದ ತೊಂದರೆ, ಲಾಭದ ಪ್ರಯತ್ನ.

ಕುಂಭರಾಶಿ
ಮಾನಸಿಕ ಚಿಂತೆ ನಡುವಲ್ಲೇ ಧನಾಗಮನ, ಸ್ವಾಭಿಮಾನಿಗಳಾಗಿ ಗೌರವವನ್ನು ಉಳಿಸಿಕೊಳ್ಳಿ, ಉದ್ಯೋಗ ಅನುಕೂಲ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ದಾಯಾದಿಗಳಿಂದ ಸಮಸ್ಯೆ, ಉಷ್ಣ ರಕ್ತ ದೋಷಗಳು ತಲೆನೋವು, ಬದಲಾವಣೆಯಿಂದ ಅನುಕೂಲ, ನೆರೆಹೊರೆಯವರಿಂದ ಬಂಧುಗಳಿಂದ ಸಾಲದ ಬೇಡಿಕೆ, ಧೈರ್ಯದಿಂದ ದಿಟ್ಟತನದಿಂದ ಮುನ್ನುಗ್ಗಿ

ಮೀನರಾಶಿ
ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ, ಆರ್ಥಿಕ ಅನುಕೂಲ ಕುಟುಂಬದಿಂದ ಸಹಕಾರ, ಭೂಮಿ ಯಂತ್ರೋಪಕರಣಗಳಿಂದ ಅನುಕೂಲ, ದೂರ ಪ್ರಯಾಣ, ತಂದೆಯಿಂದ ಸಹಕಾರ, ಸರ್ಕಾರಿ ಕೆಲಸ ಕಾರ್ಯ, ಜಯ ಉತ್ತಮ ಪ್ರಗತಿ, ತೀರ್ಥಯಾತ್ರೆಯ ಆಲೋಚನೆ, ರತ್ನಾಭರಣ ಖರೀದಿ, ಅಧಿಕ ಆಹಾರ ಸೇವನೆ, ಹಿರಿಯರ ಮಾರ್ಗದರ್ಶನದಲ್ಲಿ ನಡೆದರೆ ಅದೃಷ್ಟದ ದಿವಸ.

https://kannada.newsnext.live/7minutes-of-tearing-cake-came-to-kundapur-7th-heaven/
Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular