ಮೂವರು ಬಾಲಕರ ಅಪಹರಣಕ್ಕೆ ಯತ್ನ : ಜನರನ್ನ ನೋಡಿ ಓಡಿಹೋದ ದುಷ್ಕರ್ಮಿಗಳು ..!

ಮಂಗಳೂರು : ಉಜಿರೆಯಲ್ಲಿ ಬಾಲಕನ ಅಪರಹಣ ಪ್ರಕರಣ ಮಾಸುವ ಮುನ್ನವೇ ಮೂವರು ಬಾಲಕರ ಅಪಹರಣಕ್ಕೆ ವಿಫಲ ಯತ್ನ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಪದವಿನಂಗಡಿ ಬಳಿ ಕೊಂಚಾಡಿ ಮಹಾಲಸಾ ದೇವಸ್ಥಾನದ ಎದುರು ದ್ವಿಚಕ್ರ ‌ವಾಹನದಲ್ಲಿ ಬಂದ ಅಪರಿಚಿತರು ಬಾಲಕನನ್ನು ಅಪಹರಿಸಲು ಯತ್ನಿಸಿದ ಘಟನೆ ವರದಿಯಾಗಿದೆ.

ರಾತ್ರಿಯ ವೇಳೆಯಲ್ಲಿ ಮೂವರು ಬಾಲಕರು ನಡೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಬೈಕಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಬಾಲಕರಿಗೆ ಮುಸುಕು ಹಾಕಿ ಅಪಹರಣಕ್ಕೆ ಪತ್ನಿಸಿದ್ದಾರೆ. ಆದರೆ ಈ ವೇಳೆಯಲ್ಲಿ ಜನರು ಬರುತ್ತಿರೋದನ್ನು ಗಮನಿಸಿದ ಅಪಹರಣ ಕಾರರು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗುತ್ತಿದೆ.

ಬಾಲಕರನ್ನು ಕಿಡ್ನಾಪ್ ಮಾಡಲು ಯತ್ನಿಸಿದ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಕುರಿತು ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

https://kannada.newsnext.live/7minutes-of-tearing-cake-came-to-kundapur-7th-heaven/

Comments are closed.