ಭಾನುವಾರ, ಜೂನ್ 15, 2025
Homehoroscopeನಿತ್ಯಭವಿಷ್ಯ : 05-08-2020

ನಿತ್ಯಭವಿಷ್ಯ : 05-08-2020

- Advertisement -

ಮೇಷರಾಶಿ
ಅನಗತ್ಯ ಯೋಚನೆ ಮಾಡುವಿರಿ,ಉದ್ಯೋಗ ಕ್ಷೇತ್ರದಲ್ಲಿ ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ದೊರಕಲಿದೆ. ವಿದ್ಯಾರ್ಥಿಗಳು ಸಮಸ್ಯೆ ಗಳಿಂದ ಪಾರಾಗಿ ನೆಮ್ಮದಿಯನ್ನು ಹೊಂದಲಿದ್ದಾರೆ. ಅವಿವಾಹಿತರು ಅನಿರೀಕ್ಷಿತ ರೀತಿಯಲ್ಲಿ ಕಂಕಣಬಲ ಹೊಂದಲಿದ್ದಾರೆ. ಆರೋಗ್ಯದಲ್ಲಿ ಏರುಪೇರು, ರಿಯಲ್ ಎಸ್ಟೇಟ್‍ನವರಿಗೆ ಅನುಕೂಲ ಸಾಧ್ಯತೆ, ಉದ್ಯಮಿಗಳಿಗೆ ಸುದಿನ.

ವೃಷಭರಾಶಿ
ಉದ್ಯೋಗದಲ್ಲಿ ಸ್ವಲ್ಪ ಕಿರಿಕಿರಿ, ಅಡೆತಡೆ, ಎಡರು ತೊಡರುಗಳಿದ್ದರೂ ನವ ಚೈತನ್ಯವನ್ನು ಹೊಂದಲಿದ್ದೀರಿ. ಆಗಾಗ ಖರ್ಚುವೆಚ್ಚಗಳು ಅಧಿಕವಾಗಿ ಚಿಂತೆ ತೋರಿ ಬಂದರೂ ಧನಾಗಮನ ಕಾರ್ಯಾನುಕೂಲಕ್ಕೆ ಸಾಧ್ಯತೆ ಕೊಡಲಿದೆ. ಸಾಂಸಾರಿಕವಾಗಿ ನೆಮ್ಮದಿ ಇದೆ. ಬೆಲೆ ಬಾಳುವ ವಸ್ತುಗಳ ಖರೀದಿ, ಸಹೋದರರಿಂದ ಸಹಾಯ, ಮಾನಸಿಕ ನೆಮ್ಮದಿ.

ಮಿಥುನರಾಶಿ
ಅಲ್ಪ ಆದಾಯ, ಅಧಿಕವಾದ ಖರ್ಚು, ಸಹೋದ್ಯೋಗಿಗಳ ರ್ದುವ್ಯವಹಾರಗಳು ಅನುಭವಕ್ಕೆ ಬರಲಿವೆ. ಗುರುಬಲದ ಅನುಗ್ರಹದಿಂದ ಅನಿರೀಕ್ಷಿತ ರೀತಿಯಲ್ಲಿ ಕೆಲಸಕಾರ್ಯಗಳು ನಡೆದು ಸಮಾಧಾನ ತರಲಿವೆ. ಸಾಂಸಾರಿಕವಾಗಿ ನೆಮ್ಮದಿ ಅನುಭವಿಸುವಿರಿ. ನೆಮ್ಮದಿಗೆ ಭಂಗ, ಮನಸ್ಸಿನಲ್ಲಿ ಗೊಂದಲ, ಆರೋಗ್ಯದಲ್ಲಿ ಅಲ್ಪ ಚೇತರಿಕೆ.

ಕಟಕರಾಶಿ
ಉದ್ಯೋಗದಲ್ಲಿ ಬಡ್ತಿ, ಅಧಿಕ ತಿರುಗಾಟ, ಅವಿರತ ಚಟುವಟಿಕೆಗಳು ದೇಹಾರೋಗ್ಯದ ಮೇಲೆ ಪರಿಣಾಮ ಬೀರಬಹುದು. ದೂರ ಸಂಚಾರದಲ್ಲಿ ವಾಹನವನ್ನು ಜಾಗ್ರತೆಯಿಂದ ಚಲಾಯಿಸಿರಿ. ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಏಕಾಗ್ರತೆಯನ್ನು ಸಾಧಿಸಿರಿ. ನಂಬಿದ ಜನರಿಂದ ತೊಂದರೆ, ಕೌಟುಂಬಿಕ ಜೀವನದಲ್ಲಿ ಆಂತರಿಕ ಸಮಸ್ಯೆ.

ಸಿಂಹರಾಶಿ
ಯತ್ನ ಕಾರ್ಯಗಳಲ್ಲಿ ವಿಳಂಬ, ವಾದ, ವಿವಾದಗಳಿಂದ ದೂರವಿದ್ದಷ್ಟು ಉತ್ತಮ. ಸ್ವತಂತ್ರ ಉದ್ಯೋಗಿಗಳು, ವ್ಯಾಪಾರಸ್ಥರು ಎಚ್ಚರಿಕೆಯಿಂದ ಮುಂದುವರಿದಲ್ಲಿ ಮೂಲಧನ ವೃದ್ಧಿಯಾಗಲಿದೆ. ಬಂದ ಅಡ್ಡಿ ಆತಂಕಗಳನ್ನು ಎದುರಿಸವುದು. ಬಂಧುಗಳಲ್ಲಿ ಕಲಹ, ಶತ್ರುಗಳ ಬಾಧೆ, ಆರೋಗ್ಯದಲ್ಲಿ ತೊಂದರೆ, ಪರರಿಂದ ಸಹಾಯ.

ಕನ್ಯಾರಾಶಿ
ದೂರ ಪ್ರಯಾಣ, ಸ್ತ್ರೀಯರಿಗೆ ಲಾಭ, ವೃತ್ತಿರಂಗದಲ್ಲಿ ಬದಲಾವಣೆ ಯಾ ವರ್ಗಾವಣೆಯ ಸಾಧ್ಯತೆ ತೋರಿ ಬಂದೀತು. ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ, ಯೋಗ್ಯ ವಯಸ್ಕರಿಗೆ ಉತ್ತಮ ಅವಕಾಶಗಳು ಒದಗಿ ಬರುವುದರಿಂದ ಸದುಪಯೋಗಿಸಿಕೊಳ್ಳಿರಿ. ಇಲ್ಲ ಸಲ್ಲದ ಅಪವಾದ, ಬುದ್ಧಿ ಕ್ಲೇಷ, ಭೂಮಿ ಖರೀದಿಯೋಗ, ಸಾಲ ಬಾಧೆ.

ತುಲಾರಾಶಿ
ಹಿತ ಶತ್ರುಗಳಿಂದ ತೊಂದರೆ, ಕೃಷಿಯಲ್ಲಿ ಲಾಭ, ಗೃಹ ಕಾರ್ಯಗಳ ಚಿಂತೆ, ಸಾಂಸಾರಿಕ ಜೀವನದ ಸಮಸ್ಯೆಗಳು ಆಗಾಗ ನಿಮಗೆ ಬಾಧಿಸಲಿವೆ. ಕುಜನು ನಿಮಗೆ ಲಾಭದಾಯಕನಾಗಿ ಮುನ್ನಡೆಗೆ ಕಾರಣನಾದಾನು. ಕೋರ್ಟು ವಿಚಾರದಲ್ಲಿ ಯಶೋಭಿವೃದ್ಧಿ ಇರುತ್ತದೆ. ಮಿತ್ರರಿಂದ ಸಹಾಯ, ಪ್ರಿಯ ಜನರ ಭೇಟಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.

ವೃಶ್ಚಿಕರಾಶಿ
ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಆರ್ಥಿಕವಾಗಿ ಕಾರ್ಯಾನುಕೂಲಕ್ಕೆ ಸಾಧ್ಯತೆ ಇದೆ. ಸಾಂಸಾರಿಕವಾಗಿ, ಹಂತ ಹಂತವಾಗಿ ನೆಮ್ಮದಿಯ ವಾತಾವರಣ, ಚೇತರಿಕೆಯನ್ನು ಸೂಚಿಸಲಿದೆ. ಕೌಟುಂಬಿಕವಾಗಿ ಹೊಂದಾಣಿಕೆಯು ಅತೀ ಅಗತ್ಯವಿದೆ. ಸಾಲ ಬಾಧೆ, ವಾಹನ ರಿಪೇರಿ, ಚಂಚಲ ಮನಸ್ಸು, ಅಕಾಲ ಭೋಜನ.

ಧನಸ್ಸುರಾಶಿ
ನಾನಾ ರೀತಿಯ ಸಂಪಾದನೆ, ಆಶಾದಾಯಕವಾಗಿ ಮುಂದುವರಿಯಲು ಈ ಸಮಯ ಉತ್ತಮ. ಗೃಹದಲ್ಲಿ ಆಪ್ತೇಷ್ಟರ ಭೇಟಿ ಸಮಾಧಾನ ತರಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ಹಂತ ಹಂತವಾಗಿ ಆರ್ಥಿಕ ಸ್ಥಿತಿಯು ಸುಧಾರಿಸಲಿದೆ. ಕುಟುಂಬ ಸೌಖ್ಯ, ಸುಖ ಭೋಜನ, ತೀರ್ಥಯಾತ್ರೆ ದರ್ಶನ, ಸ್ಥಳ ಬದಲಾವಣೆ.

ಮಕರರಾಶಿ
ಸ್ನೇಹಿತರಿಂದ ನಿಂದನೆ, ಪರರಿಗೆ ವಂಚನೆ, ವೃತ್ತಿರಂಗದಲ್ಲಿ ಬದಲಾವಣೆಯಾ ವರ್ಗಾವಣೆಯ ಸಮಾಧಾನ ತರಲಿದೆ. ಉದ್ಯೋಗಿಗಳು ಇದ್ದ ವೃತ್ತಿಯಲ್ಲೇ ಸಮಾಧಾನ ಪಡಬೇಕು. ಮುಖ್ಯವಾಗಿ ಎಲ್ಲಾ ವಿಚಾರದಲ್ಲಿ ಹೊಂದಾಣಿಕೆಯಿಂದ ಮುಂದುವರಿಯುವುದು. ಮನಃಸ್ತಾಪ, ಸ್ವಜನರ ವಿರೋಧ, ನೀಚ ಜನರಿಂದ ದೂರವಿರಿ.

ಕುಂಭರಾಶಿ
ಕೆಲಸ ಕಾರ್ಯಗಳಲ್ಲಿ ಜಯ, ಉದ್ಯೋಗಿಗಳಿಗೆ ಸಮಾಧಾನಕರವಾದ ವಾತಾವರಣ ವಿರುತ್ತದೆ. ನಿರೀಕ್ಷಿತ ಕೆಲಸಕಾರ್ಯಗಳು ಅಡೆತಡೆಗಳಿದ್ದರೂ ನಡೆಯಲಿವೆ. ದೈವಾನುಗ್ರಹದಿಂದ ತಮ್ಮ ಮನೋಕಾಮನೆಗಳು ನಡೆಯಲು ಸಾಧ್ಯವಾಗಲಿದೆ. ಮನೆಯಲ್ಲಿ ಹಿರಿಯರ ಆಗಮನ, ಶುಭ ಸುದ್ದಿ ಕೇಳುವಿರಿ, ಈ ದಿನ ಶುಭ ಫಲ.

ಮೀನರಾಶಿ
ಮಾಡುವ ಕೆಲಸದಲ್ಲಿ ಶ್ರದ್ಧೆ, ಉತ್ತಮ ಬುದ್ಧಿಶಕ್ತಿ, ರಾಹುವಿನ ಪ್ರತಿಕೂಲತೆಯಿಂದ ಆಗಾಗ ಮನಸ್ಸಿಗೆ ಭಂಗ ತರಲಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ನಿರುತ್ಸಾಹಿತರಾದಾರು. ನಿಶ್ಚಿತ ಗುರಿಯತ್ತ ಸಾಗಲು ಆಗಾಗಅಡಚಣೆ ಹಾಗೂ ತಾಪತ್ರಯಗಳು ತೋರಿ ಬರುವುದು. ಸ್ತ್ರೀಯರಿಗೆ ಲಾಭ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular