ಮಂಗಳವಾರ, ಏಪ್ರಿಲ್ 29, 2025
Homehoroscopeನಿತ್ಯಭವಿಷ್ಯ : 25-09-2020

ನಿತ್ಯಭವಿಷ್ಯ : 25-09-2020

- Advertisement -

ಮೇಷರಾಶಿ
ಮಹಿಳೆಯರಿಂದ ಧನಾಗಮನ, ಸಂಗಾತಿಯಿಂದ ಅನುಕೂಲ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಮಕ್ಕಳ ನಡವಳಿಕೆಯಿಂದ ಬೇಸರ, ಆಸ್ತಿಯಿಂದ ಅನುಕೂಲ, ಕೃಷಿ ಕಾರ್ಯದಲ್ಲಿ ವಿಪರೀತ ಮಳೆ ನಿಮಿತ್ತ ತುಂಬಾ ಕಷ್ಟನಷ್ಟಗಳನ್ನು ಅನುಭವಿಸುವಂತಾದೀತು. ವ್ಯವಸಾಯದವರಿಗೆ ಸಹಿಸಲಾಗದ ಏಟು ಬಿದ್ದೀತು. ಮನೆಯಲ್ಲಿ ತುಂಬಾ ಉದ್ವೇಗ, ಕಳವಳವಿದ್ದೀತು.

ವೃಷಭರಾಶಿ
ಕಾರ್ಮಿಕ ವರ್ಗದವರಿಗೆ ಉದ್ಯೋಗವಿಲ್ಲದೆ ಊಟಕ್ಕಾಗಿ ಪರದಾಡುವ ಪರಿಸ್ಥಿತಿಯು ಕಂಡುಬಂದೀತು. ಮೋಜು-ಮಸ್ತಿಗೆ ವ್ಯಯ, ಅನಾರೋಗ್ಯ ಸಮಸ್ಯೆಗಳು, ಆರ್ಥಿಕ ಸಂಕಷ್ಟದ ಚಿಂತೆ, ಸ್ವಂತ ವ್ಯವಹಾರದಲ್ಲಿ ನಷ್ಟ, ಕಾರ್ಯಜಯ, ತಂದೆಯಿಂದ ಅನುಕೂಲ, ಶತ್ರುಗಳಿಂದ ಅಪವಾದ, ಆದರೂ ಜನಹಿತಕ್ಕಾಗಿ ರಾಜಕೀಯ ಹಾಗೂ ಧಾರ್ಮಿಕ ಧುರೀಣರು ತುಂಬಾ ಶ್ರಮಪಟ್ಟು  ದುಡಿದಾರು.

ಮಿಥುನರಾಶಿ
ಕೋರ್ಟು ಕಚೇರಿ ಕಾರ್ಯಭಾಗದಲ್ಲಿ ಒಳ್ಳೆಯ ಪರಿಣಾಮ ನಿಮಗೆ ದೊರಕಲಿದೆ. ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಸ್ತ್ರೀಯರಿಂದ ಲಾಭ, ಆಕಸ್ಮಿಕ ಪ್ರಯಾಣ, ಉದ್ಯೋಗದಲ್ಲಿ ಪ್ರಗತಿ, ಮಕ್ಕಳಿಂದ ಅನುಕೂಲ, ಸ್ವಯಂಕೃತ ಅಪರಾಧಗಳು ಗೃಹದಲ್ಲಿ ಸಮಾಧಾನದ ವಾತಾವರಣವು ಕಂಡುಬಂದೀತು. ಮನೆಯಲ್ಲಿ ಮಂಗಲಕಾರ್ಯದ ತಯಾರಿಯು ನಡೆದೀತು.

ಕಟಕರಾಶಿ
ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ವಾಹನದಿಂದ ಅದೃಷ್ಟ, ತಂದೆಯಿಂದ ಧನಾಗಮನ, ಆತ್ಮಗೌರವಕ್ಕೆ ಚ್ಯುತಿ, ಆರ್ಥಿಕ ಸಂಕಷ್ಟ, ಅನಾರೋಗ್ಯದಿಂದ ಗಾಬರಿ, ಮಂಗಲಕಾರ್ಯಕ್ಕಾಗಿ ಪ್ರಯತ್ನಪಟ್ಟಲ್ಲಿ ಶ್ರಮವಿಲ್ಲದೆ ನೆಂಟಸ್ಥಿಕೆಯು ಕೂಡಿಬಂದೀತು ಮುಂದುವರಿಯುವುದು ಅಗತ್ಯ. ದಿನವಿಡೀ ದುಡಿದರೂ ಸಾಕಾಗದು ಎಂಬಂತಹ ಪರಿಸ್ಥಿತಿ ಇರುತ್ತದೆ. ದಿನಾಂತ್ಯ ಶುಭ.

ಸಿಂಹರಾಶಿ
ನಿಮ್ಮ ಮನಸ್ಸಿನೆಣಿಕೆಯಂತೆ ಎಲ್ಲಾ ಕೆಲಸಗಳು ನಡೆದಾವು. ಜೀವನದಲ್ಲಿ  ಹಲವು ರೀತಿಯಲ್ಲಿ ಸೋಲು, ಗೆಲುವುಗಳನ್ನು ಅನುಭವಿಸಿ ದಣಿದ ನಿಮಗೆ ಸ್ವಲ್ಪ ಉತ್ತಮ ಕಾಲವಿದು. ಶ್ರೀದೇವರ ಪ್ರಾರ್ಥಿಸಿರಿ. ಉದ್ಯೋಗ ಬದಲಾವಣೆಯಿಂದ ಅನುಕೂಲ, ನೆರೆಹೊರೆಯವರಿಂದ ಪ್ರಶಂಸೆ, ಉತ್ತಮ ಹೆಸರು, ಸ್ವಯಂಕೃತ ಅಪರಾಧಗಳಿಂದ ಅನಾರೋಗ್ಯ, ಶತ್ರುಗಳು ಅಧಿಕ.

ಕನ್ಯಾರಾಶಿ
ಆರ್ಥಿಕವಾಗಿ ಚೇತರಿಕೆ ಕಂಡುಬಂದು ತುಂಬಾ ಉತ್ಸಾಹದಾಯಕರಾಗಿರುವಿರಿ. ಆಕಸ್ಮಿಕ ಧನಾಗಮನ, ಅಪಘಾತಗಳು, ಪ್ರಯಾಣದಲ್ಲಿ ತೊಂದರೆ, ಬಂಧುಗಳಿಂದ ಸೋಲು, ಆರೋಗ್ಯ ಸಮಸ್ಯೆ, ಅಧಿಕ ಖರ್ಚು, ಪ್ರೀತಿ ಪ್ರೇಮದ ಭಾವನೆಗಳಿಗೆ ಪೆಟ್ಟು, ಎಲ್ಲಾ ರೀತಿಯಲ್ಲೂ ಚಟುವಟಿಕೆ ಭರಿತರಾಗಿದ್ದ ನಿಮಗೆ ಇದು ಸೂಕ್ತ ಸಮಯ. ಧೈರ್ಯದಿಂದ ಮುನ್ನಡಿ ಇಡಿ. ಜಯ ನಿಮ್ಮದು.

ತುಲಾರಾಶಿ
ಮನೆಮಂದಿಯೊಂದಿಗೆ ಸಂತೋಷ ಹಾಗೂ ಉತ್ಸಾಹದಿಂದ ಸಮಯ ಕಳೆಯುವಿರಿ. ಸಂಶಯಗಳ ಸುಳಿದಾಟ, ಹವಾಮಾನ ವ್ಯತ್ಯಾಸದಿಂದ ಅನಾರೋಗ್ಯ, ಲಾಭದ ಪ್ರಮಾಣ ಕುಂಠಿತ, ಮಿತ್ರರು ಶತ್ರುಗಳಾಗುವರು, ಆತ್ಮೀಯರಿಂದ ನೋವು, ಅತಿಯಾದ ಭಾವನೆಯಿಂದ ಸಮಸ್ಯೆ, ಆಭರಣ ಖರೀದಿಯು ಪತ್ನಿಗೆ ಹರುಷ ತಂದೀತು. ಗುಡಿ ಕೈಗಾರಿಕೆ, ರೈತರು ಹಾಗೂ ಕಾರ್ಮಿಕ ವರ್ಗಕ್ಕೂ ಸ್ವಲ್ಪ ಕಷ್ಟವಾದೀತು.

ವೃಶ್ಚಿಕರಾಶಿ
ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕ ದುಂದುವೆಚ್ಚ, ಸೇವಕರು ಮತ್ತು ಕೆಲಸಗಾರರ ಕೊರತೆ, ಐಷಾರಾಮಿ ಜೀವನದ ಕನಸು, ಅನಾರೋಗ್ಯ, ಉದ್ಯೋಗ ಸ್ಥಳದಲ್ಲಿ ಅಲಸ್ಯ, ಮಕ್ಕಳಿಂದ ಅನುಕೂಲ, ಕಾರ್ಯನಿಮಿತ್ತ ಪ್ರಯಾಣ, ಮನೆಯಲ್ಲಿ ಹರುಷ ತುಂಬಿದ ವಾತಾವರಣವಿರುತ್ತದೆ. ಅಕಾಲ ಮಳೆಯಿಂದ ತತ್ತರಿಸುವಂತಾಗಲಿದೆ. ವ್ಯಾಪಾರ, ವ್ಯವಹಾರದಲ್ಲಿ ಏರು, ಇಳಿತ ಕಂಡುಬಂದೀತು. ಭಯದ ಆವಶ್ಯಕತೆ ಇಲ್ಲ . ಶುಭವಿದೆ.

ಧನುರಾಶಿ
ಮನಸ್ಸಿನ ಆವೇಶ, ಉದ್ವೇಗ ಸ್ವಲ್ಪ ಕಡಿಮೆಯಾಗಲಿದೆ. ಆರ್ಥಿಕ ಅನುಕೂಲ, ಆರೋಗ್ಯ ಸಮಸ್ಯೆಗಳು, ಶತ್ರುಗಳಿಂದ ವಿಶ್ವಾಸಕ್ಕೆ ಪೆಟ್ಟು, ಮೋಸದ ಪ್ರೀತಿ, ಹೆಣ್ಣುಮಕ್ಕಳಿಂದ ಲಾಭ, ಕಾನೂನುಬಾಹಿರ ಚಟುವಟಿಕೆಗಳು, ಪತ್ನಿಯಿಂದ ತುಂಬಾ ಸಹಕಾರವು ಕಂಡುಬಂದೀತು. ಪತ್ನಿಯ ಉದ್ಯೋಗದ ಕುರಿತು ತುಂಬಾ ಚಿಂತಾಕ್ರಾಂತರಾಗುವಿರಿ. ಯೋಚನೆ ಬೇಡ. ಒಳ್ಳೆಯದಾಗಲಿದೆ.

ಮಕರರಾಶಿ
ಕಾರ್ಯರಂಗದಲ್ಲಿ ಉತ್ತಮ ಅಭಿವೃದ್ಧಿಯು ಇದೆ. ಸ್ಥಿರಾಸ್ತಿ,ವಾಹನ ಯೋಗ, ತಾಯಿಂದ ಅನುಕೂಲ, ಅಧಿಕ ಖರ್ಚು, ಪ್ರವಾಸದ ಆಲೋಚನೆ, ಅಲಂಕಾರಿಕ ವಸ್ತುಗಳ ಖರೀದಿ, ಮೃಷ್ಟಾನ್ನ ಭೋಜನ, ಅಷ್ಟೇ ಜವಾಬ್ದಾರಿಯು ಹೆಚ್ಚಲಿದೆ. ಜನರ, ಹಿತಶತ್ರುಗಳ ನುಡಿಯಿಂದ ತುಂಬಾ ಬೇಸರವಾದೀತು. ಅನ್ಯರ ಮಾತಿಗೆ ಹೆಚ್ಚಿನ ಬೆಲೆ ತೆರೆಯುವುದು ಬೇಡ.

ಕುಂಭರಾಶಿ
ಉದ್ಯೋಗರಂಗದಲ್ಲಿ ಉತ್ತಮ ಅಭಿವೃದ್ಧಿ ,  ಭಡ್ತಿಯು ಕಂಡುಬಂದು ಸಮಾಧಾನವಾಗಲಿದೆ. ಪತ್ರ ವ್ಯವಹಾರಗಳ ಚಿಂತೆ, ಸ್ತ್ರೀಯರಿಂದ ಭಾದೆ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಮಹಿಳೆಯರಿಂದ ಅದೃಷ್ಟ, ಪ್ರಯಾಣದಿಂದ ಮತ್ತು ಮಿತ್ರರಿಂದ ಅನುಕೂಲ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಯಲ್ಲಿ ನಷ್ಟ, ಸ್ನೇಹಪರ ಜೀವಿಯಾದ ನಿಮಗೆ ಗೃಹವಾಸವು ಹಿಂಸೆ ತರಲಿದೆ. ಸಹಿಸುವುದು ಅಗತ್ಯ. ಶುಭವಾರ್ತಾ ಶ್ರವಣ.

ಮೀನರಾಶಿ
ಕಾರ್ಯರಂಗ ಹಾಗೂ ಉದ್ಯೋಗರಂಗದಲ್ಲಿ ಅಭಿವೃದ್ಧಿ ಕಂಡುಬಂದು ಸಂತಸ ತರಲಿದೆ. ಕುಟುಂಬದಲ್ಲಿ ವಾಗ್ವಾದಗಳು, ಅನಿರೀಕ್ಷಿತ ಪೆಟ್ಟು, ಉದ್ಯೋಗದಲ್ಲಿ ಶತ್ರು ಕಾಟ, ಅಧಿಕ ಖರ್ಚು, ಅಪವಾದ, ಅಪಪ್ರಚಾರ, ಮನೆಯಲ್ಲಿ ಮಾತಾಪಿತರಗಳ ಹಿತನುಡಿಗಳು ಮನಸ್ಸನ್ನು ಕೊರೆಯಲಿದೆ. ಆಲಿಸುವುದು, ಮುನ್ನೆಡೆಯುವುದು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular