ನಿತ್ಯಭವಿಷ್ಯ : 23-09-2020

0

ಮೇಷರಾಶಿ
ಆಪ್ತ ಸ್ನೇಹಿತರ ಭೇಟಿ, ಮಹಿಳೆಯರಿಗೆ ಕೆಲಸದ ಒತ್ತಡ, ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ, ಸಾಂಸ್ಕೃತಿಕವಾಗಿ ಕಾರ್ಯಕ್ರಮ ಭಾಗಿಯಾಗುವುದರ ಜೊತೆಗೆ ಸಂತೋಷದಿಂದ ಸಮಯವನ್ನು ಆಹ್ಲಾದಿಸುವಿರಿ. ಮನೆ ಮಂದಿ ಎಲ್ಲರ ಸಹಕಾರವು ನಿಮಗಿದ್ದು, ನಿಮ್ಮಷ್ಟು ಸುಖೀ ಯಾರಿಲ್ಲಾ ಎನ್ನೋ ಭಾವನೆ.

ವೃಷಭರಾಶಿ
ಮನಸ್ಸಿನಲ್ಲಿ ಮೂಡಿದ್ದ ನಕಾರಾತ್ಮಕ ಭಾವನೆಗಳನ್ನೆಲ್ಲಾ ಮರೆತು ಸಕಾರಾತ್ಮಕವಾಗಿ ಸ್ಪಂದಿಸುವುದು ಮುಖ್ಯ ಇದು. ಕುಟುಂಬ ಸೌಖ್ಯ, ಯತ್ನ ಕಾರ್ಯದಲ್ಲಿ ಯಶಸ್ಸು, ಸಮಾಜದಲ್ಲಿ ಗೌರವ, ಷೇರು ವ್ಯವಹಾರಗಳಲ್ಲಿ ಲಾಭ, ನಿಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರಲಿದೆ. ಕುಟುಂಬದ ಸದಸ್ಯರೊಂದಿಗೆ ಸಂತಸ ಅನುಭವಿಸಿರಿ.

ಮಿಥುನರಾಶಿ
ಮನೆಯಲ್ಲಿ ಅತಿಥಿ, ಮಕ್ಕಳ ಆಗಮನದಿಂದ ಸಂತೋಷ ಪಡುವಿರಿ. ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಹಿತ ಶತ್ರುಗಳ ಭಾದೆ, ದಾಂಪತ್ಯ ಜೀವನದಲ್ಲಿ ವಿರಸ. ಹಲವು ದಿನಗಳಿಂದ ಬೋರಾಗಿದ್ದ ಮನಸ್ಸು ಅರಳಲಿದೆ. ಮನೆಯಲ್ಲಿ ಹೊಸ ಸದಸ್ಯರ ಆಗಮನವು ಇರುತ್ತದೆ. ಆರ್ಥಿಕವಾಗಿ ಅಭಿವೃದ್ಧಿ.

ಕಟಕರಾಶಿ
ಯೋಚಿಸಿ ಕೆಲಸ ಕಾರ್ಯ ಮಾಡುವುದು ಉತ್ತಮ, ಶೀತ ಸಂಬಂಧ ರೋಗ, ಖರ್ಚು ವೆಚ್ಚಗಳಲ್ಲಿ ಹಿಡಿತವಿರಲಿ. ಹಿಂದಿನ ದಿನಗಳಿಗಿಂತ ಇಂದಿನ ದಿನವು ಸ್ವಲ್ಪ ಸಮಾಧಾನ ತರುವುದು. ಮನೆಯಲ್ಲಿ ಸಮಯ ಹೋದದ್ದೇ ಗೊತ್ತಾಗದು. ಆದರೂ ನಿಮ್ಮ ಕರ್ತವ್ಯದ ಕಡೆ ಓಗೊಟ್ಟು ಮುನ್ನಡೆಯಿರಿ. ನಿಮ್ಮ ಅಭೀಷ್ಟವು ನೆರವೇರುವುದು.

ಸಿಂಹರಾಶಿ
ತಾಯಿ, ತಂದೆ ಹಾಗೂ ಹಿರಿಯರ ನೆನಪು ನಿಮಗೆ ಆಗಾಗ ಮರುಕಳಿಸಬಹುದು. ಗುರುಗಳ ಹಿತ ನುಡಿಯು ಮನಸ್ಸಿಗೆ ಸಮಧಾನ ನೀಡಲಿದೆ. ಈ ದಿನ ಅದೃಷ್ಟ ಒಲಿದು ಬರಲಿದೆ, ಸ್ನೇಹಿತರೊಡನೆ ವ್ಯವಹಾರದ ಮಾತುಕತೆ.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಕಳೆದುಕೊಳ್ಳುವಿರಿ.

ಕನ್ಯಾರಾಶಿ
ಶತ್ರುಗಳು ಮಿತ್ರರಾಗುವ ಸುದಿನ, ಅಲ್ಪ ಲಾಭ, ದೂರ ಪ್ರಯಾಣ, ಮನಸ್ಸಿಗೆ ನೆಮ್ಮದಿ. ಮನೆಯಲ್ಲಿ ಮಂಗಲಕಾರ್ಯದ ನಿಮಿತ್ತ ಓಡಾಟ ತರಲಿದೆ. ಅದರೂ ಮನಸ್ಸು ಉದ್ವಿಗ್ನತೆ ಹಾಗೂ ಚಡಪಡಿಕೆಯಿಂದ ಕೂಡಿರುತ್ತದೆ. ಮಾಡಿದ ಅಪರಾಧದ ಬಗ್ಗೆ ಮನಸ್ಸು ಪಶ್ಚಾತ್ತಾಪಪಟ್ಟಿàತು. ಜಾಗ್ರತೆಯಿಂದ ನಡೆಯಿರಿ.

ತುಲಾರಾಶಿ
ಗೌರವ, ಅದರಗಳು ನಿಮಗೆ ಸ್ವಲ್ಪ ಸಮಾಧಾನ ನೀಡಲಿವೆ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ, ಸಂಬಂಧಿಕರೊಡನೆ ಕಲಹ ಸಂಭವ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವಿರಿ. ಮನಸ್ಸನ್ನು ನಿಯಮಿತವಾಗಿ ಹದ್ದು ಬಸ್ತಿನಲ್ಲಿಟ್ಟುಕೊಳ್ಳಿರಿ. ಮಕ್ಕಳ ಬಗ್ಗೆ ಚಿಂತಿಸಿದ ಕಾರ್ಯಗಳು ನೆರವೇರಲಿವೆ. ನೂತನ ಗೆಳೆಯರು ಸಿಗಲಿರುವವರು.

ವೃಶ್ಚಿಕರಾಶಿ
ಮಕ್ಕಳ ಅಭಿವೃದ್ಧಿ ಸಂತಸ ಪಡುವಿರಿ. ಗೃಹ ಉಪಯೋಗ ವಸ್ತುಗಳನ್ನು ಖರೀದಿಸುವಿರಿ, ಮಿತ್ರರಿಂದ ಸಹಾಯ, ಅಧಿಕಾರಿಗಳಿಂದ ಪ್ರಶಂಸೆ. ಅತೀಯಾದ ವ್ಯಾಮೋಹವು ಒಳ್ಳೆಯದಲ್ಲಾ ಬಂದುದನ್ನು ಸಮಾಧಾನದಿಂದ ಸ್ವೀಕರಿಸಿರಿ. ನಿಮ್ಮ ಮನಸ್ಸಿನ ಭಾವನೆಗಳನ್ನು ಇನ್ನೊಬ್ಬರಲ್ಲಿ ಹಂಚಿಕೊಳ್ಳುವುದು ಮುಖ್ಯ.

ಧನುರಾಶಿ
ದ್ರವ್ಯ ವ್ಯಾಪಾರಿಗಳಿಗೆ ಲಾಭ, ಗುರುಹಿರಿಯರ ಭೇಟಿ ಮಾಡುವಿರಿ. ವಾತಾವರಣದ ಏರುಪೇರು ನಿಮಗೆ ಸ್ವಲ್ಪ ಬೇಸರ ತಂದೀತು. ಪರ ಊರ ಪ್ರಯಾಣ ಬೆಳೆಸಿದ ನಿಮಗೆ ಆ ಊರಿಗೆ ಹೊಂದಿಕೊಳ್ಳಲು ಸ್ವಲ್ಪ ಕಷ್ಟವಾದೀತು. ಜನರೊಡನೆ ಜಾಗ್ರತೆಯಿಂದ ಸ್ಪಂದಿಸಿರಿ. ಉದ್ವೇಗ ಮಾಡಬೇಡಿರಿ.

ಮಕರರಾಶಿ
ಗೃಹೋಪಕರಣಗಳ ಹಾಗೂ ಮಕ್ಕಳ ಅಟಿಕೆಗಳ ಖರೀದಿಗಾಗಿ ಸ್ವಲ್ಪ ಖರ್ಚು ಬಂದೀತು. ಅಧಿಕ ಖರ್ಚು, ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ, ಕೌಟುಂಬಿಕ ವಿರಸ, ಈ ದಿನ ತಾಳ್ಮೆ ಅಗತ್ಯ. ಒಬ್ಬರೇ ದುಡಿಯುವ ನೀವು ಸ್ವಲ್ಪ ಪರದಾಟ ಅನುಭವಿಸುವಿರಿ. ಮನೆಯ ಹಿರಿಯರ ಉಪದೇಶ ಸ್ವೀಕರಿಸುವುದು.

ಕುಂಭರಾಶಿ
ಮಿತ್ರರ ಆಗಮನದಿಂದ ಮನೋಲ್ಲಾಸ, ಬರಬೇಕಾದ ಬಾಕಿ ಹಣ ಕೈ ಸೇರಲಿದೆ. ವೃತ್ತಿ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಕಿರಿಕಿರಿ ಅನುಭವಿಸುವಿರಿ. ವಿದ್ಯಾರ್ಥಿಗಳು ತಮ್ಮೊಳಗೆ ಕಾದಾಡುವ ಪರಿಸ್ಥಿತಿಯು ಕಂಡು ಬಂದೀತು. ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ಮಾಡಿದರೆ ಉತ್ತಮ.

ಮೀನರಾಶಿ
ಉದ್ಯೋಗದಲ್ಲಿ ಅಧಿಕಾರಿಗಳಿಂದ ತೊಂದರೆ, ಆರೋಗ್ಯದಲ್ಲಿ ಚೇತರಿಕೆ, ಪ್ರಯಾಣದಿಂದ ತೊಂದರೆ. ವ್ಯಾಪಾರ, ವ್ಯವಹಾರಗಳಲ್ಲಿ ಕಷ್ಟನಷ್ಟಗಳು ಎದುರಾಗಲಿವೆ. ಅದನ್ನು ಧೈರ್ಯದಿಂದ ಎದುರಿಸುವುದು ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ಮಾಡುವುದು. ವೈಯಕ್ತಿಕ ಸಂಬಂಧಗಳು ನೆರವೇರಲಿವೆ.

Leave A Reply

Your email address will not be published.